
ಬೆಂಗಳೂರು(ಸೆ.21): ಮದುವೆ ಮಾಡಿಕೊಳ್ಳಲು ಆನ್ಲೈನ್ನಲ್ಲಿ ಹುಡುಕಾಟ ನಡೆಸಿದ್ದ ಟೆಕ್ಕಿಗೆ ಪರಿಚಯವಾಗಿದ್ದ ಯುವತಿ 7.60 ಲಕ್ಷ ಪಡೆದು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಮಾರತ್ತಹಳ್ಳಿಯ ವಿನಾಯಕ್ ಲೇಔಟ್ ನಿವಾಸಿ 30 ವರ್ಷದ ಸಾಫ್ಟ್ವೇರ್ ಎಂಜಿನಿಯರ್ ವಂಚನೆಗೊಳಗಾದವರು. ಯುವತಿ ಮೇಯ್ಬೆಲ್ ಎಡ್ವರ್ಡ್ ವಿರುದ್ಧ ವೈಟ್ಫೀಲ್ಡ್ ವಿಭಾಗದ ಸಿಇಎನ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಟೆಕ್ಕಿ ಮದುವೆ ಮಾಡಿಕೊಳ್ಳಲು ಆನ್ಲೈನ್ನಲ್ಲಿ ಕನ್ಯೆಗಾಗಿ ಹುಡುಕಾಟ ನಡೆಸಿದ್ದರು. ಮೇಯ್ಬೆಲ್ ಎಡ್ವರ್ಡ್ ಎಂಬ ಯುವತಿ ಪರಿಚಯವಾಗಿದ್ದಳು. ಬಳಿಕ ಇಬ್ಬರು ಪರಸ್ಪರ ಫೋನ್ ನಂಬರ್ ವಿನಿಮಯ ಮಾಡಿಕೊಂಡಿದ್ದರು.
ಉಡುಪಿ: ಇನ್ಟಾಗ್ರಾಮ್ ಮೂಲಕ 58800 ರು. ಪಂಗನಾಮ
ಟೆಕ್ಕಿ ಮದುವೆಯಾಗುವ ವಿಚಾರವನ್ನು ಯುವತಿಯ ಮುಂದಿಟ್ಟಿದ್ದು, ಇದಕ್ಕೆ ಆಕೆ ಒಪ್ಪಿಗೆ ಸೂಚಿಸಿದ್ದಳು. ಕೆಲವು ದಿನಗಳ ಬಳಿಕ ನಗರದಲ್ಲಿ ಮನೆ ಖರೀದಿಸಲು ನಿರ್ಧರಿಸಿದ್ದೇನೆ. ಹಣ ಕಡಿಮೆ ಆಗಿದೆ. ಆಪ್ತರೊಬ್ಬರು ಸಹಾಯ ಮಾಡುವುದಾಗಿ ಹೇಳಿದ್ದಾರೆ. ನೀನು ಕೂಡ ಹಣ ಹೊಂದಿಸಿದರೆ ಅನುಕೂಲವಾಗುತ್ತದೆ ಎಂದಿದ್ದಳು. ಆಕೆಯ ಮಾತನ್ನು ನಂಬಿದ ಟೆಕ್ಕಿ ಸಹಾಯ ಮಾಡುವುದಾಗಿ ಹೇಳಿದ್ದರು.
ಆ.8ರಂದು ಮಹದೇವಪುರದ ಫಿನಿಕ್ಸ್ ಶಾಪಿಂಗ್ ಮಾಲ್ ಬಳಿ ಬರುವಂತೆ ಸೂಚಿಸಿದ್ದಳು. ಅಲ್ಲಿಗೆ ಹೋಗಿದ್ದ ಟೆಕ್ಕಿ, ಕ್ರಿಸ್ ಜೆಫ್ ಎಂಬಾತನಿಗೆ 95 ಸಾವಿರ ಕೊಟ್ಟಿದ್ದ. ಇದಾದ ನಂತರವೂ ಹಂತಹಂತವಾಗಿ 6.70 ಲಕ್ಷ ವರ್ಗಾವಣೆ ಮಾಡಿಸಿಕೊಂಡಿದ್ದರು. ಹಣ ಪಡೆದ ನಂತರ ಸಂಪರ್ಕಕ್ಕೆ ಸಿಗದೇ ಇದ್ದಾಗ ಮೋಸ ಆಗಿರುವುದು ಗೊತ್ತಾಗಿದೆ. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆರೋಪಿಸಿ ಟೆಕ್ಕಿ ದೂರು ಕೊಟ್ಟಿದ್ದಾರೆ. ಈ ಪ್ರಕರಣ ದಾಖಲಿಸಿ ಆರೋಪಿಗಳ ಪತ್ತೆಗಾಗಿ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ