ಸಿಂಧನೂರು: ಹರಿದ 20 ರು. ನೋಟಿಗಾಗಿ ಬಡಿದಾಟ, ಮಹಿಳೆಯರ ಜಗಳ ಸಾವಲ್ಲಿ ಅಂತ್ಯ..!

Published : Oct 25, 2022, 08:54 AM ISTUpdated : Oct 25, 2022, 09:08 AM IST
ಸಿಂಧನೂರು: ಹರಿದ 20 ರು. ನೋಟಿಗಾಗಿ ಬಡಿದಾಟ, ಮಹಿಳೆಯರ ಜಗಳ ಸಾವಲ್ಲಿ ಅಂತ್ಯ..!

ಸಾರಾಂಶ

ರಾಯಚೂರು ಜಿಲ್ಲೆಯ ತಾಲೂಕಿನ ಸಿಂಧನೂರು ಗೀತಾ ಕ್ಯಾಂಪಿನಲ್ಲಿ ನಡೆದ ಘಟನೆ 

ಸಿಂಧನೂರು(ಅ.25):  ಹರಿದ ಇಪ್ಪತ್ತು ರುಪಾಯಿ ನೋಟಿಗಾಗಿ ಮಹಿಳೆಯರಿಬ್ಬರ ಮಧ್ಯೆ ಜಗಳ ನಡೆದು ಒಬ್ಬಾಕೆ ಮೃತಪಟ್ಟಿರುವ ಘಟನೆ ತಾಲೂಕಿನ ಗೀತಾ ಕ್ಯಾಂಪಿನಲ್ಲಿ ಜರುಗಿದೆ. ಪೊಲೀಸ್‌ ಭದ್ರತೆಯಲ್ಲಿ ಮಹಿಳೆ ಅಂತ್ಯಸಂಸ್ಕಾರ ಮಾಡಲಾಗಿದೆ. ರುಕ್ಕಮ್ಮ ಮೌನೇಶ ಲಮಾಣಿ ಮೃತ ಮಹಿಳೆ. 

ರುಕ್ಕಮ್ಮಳ ಮಗಳು ಕ್ಯಾಂಪಿನಲ್ಲಿರುವ ಮಲ್ಲಮ್ಮ ಎಂಬಾಕೆಯ ಅಂಗಡಿಯಿಂದ ಶನಿವಾರ ದಿನಸಿ ಖರೀದಿ ಮಾಡಿಕೊಂಡು ಮನೆಗೆ ಬಂದು ತಾಯಿಗೆ 20 ರುಪಾಯಿ ಹರಕು ನೋಟ್‌ ಕೊಟ್ಟಿದ್ದಾಳೆ. ಆಗ ರುಕ್ಕಮ್ಮ ಅಂಗಡಿಗೆ ಹೋಗಿ ನೋಟು ಬದಲಾಯಿಸಿಕೊಂಡುವಂತೆ ಕೇಳಿದಾಗ, ನಿಮ್ಮ ಮಗಳು ನಮ್ಮ ಅಂಗಡಿಗೆ ಬಂದೇ ಇಲ್ಲ ಎಂದು ಮಲ್ಲಮ್ಮ ಹೇಳಿದ್ದಾಳೆ. ಇದರಿಂದ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಮಲ್ಲಮ್ಮ ತಮ್ಮ ಅಂಗಡಿಯಲ್ಲಿ ಮಾರಾಟಕ್ಕಿಟ್ಟಿದ್ದ ಪೆಟ್ರೋಲ್‌ ಬಾಟಲ್‌ನಿಂದ ರುಕ್ಕಮ್ಮಳಿಗೆ ಹೊಡೆದಿದ್ದಾಳೆ. 

Tumakuru: ಗಂಡನಿಂದಲೇ ಹೆಂಡತಿ ಮಗು ಕೊಲೆ: ದೇವಸ್ಥಾನದ ಹಣ ಕದ್ದಿದ್ದಕ್ಕೆ ಕುಟುಂಬಕ್ಕೆ ತಟ್ಟಿತ್ತೆ ಶಾಪ

ಆಗ ಪೆಟ್ರೋಲ್‌ ಇಬ್ಬರ ಮೈಗೂ ತಾಕಿ ನಂತರ ಪಕ್ಕದಲ್ಲಿ ಉರಿಯುತ್ತಿದ್ದ ದೇವರ ದೀಪಕ್ಕೂ ಚಿಮ್ಮಿದ ಪರಿಣಾಮ ಇಬ್ಬರಿಗೂ ಬೆಂಕಿ ತಗುಲಿದೆ. ಗಂಭೀರ ಗಾಯಗೊಂಡ ಮಲ್ಲಮ್ಮಳನ್ನು ಬಳ್ಳಾರಿ ವಿಮ್ಸ್‌ಗೆ, ರುಕ್ಕಮ್ಮಳನ್ನು ರಾಯಚೂರಿನ ರಿಮ್ಸ್‌ಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಇದೀಗ ರುಕ್ಕಮ್ಮ ಮೃತಪಟ್ಟಿದ್ದಾಳೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
ಮಂಗಳಮುಖಿಯರಿಂದ ಯುವಕನ ಅಪಹರಣ; ಶಸ್ತ್ರಚಿಕಿತ್ಸೆ ನಡೆಸಿ ಪರಿವರ್ತನೆಗೆ ಯತ್ನ?