ಉಡುಪಿ: ಇನ್ಟಾಗ್ರಾಮ್‌ ಮೂಲಕ 58800 ರು. ಪಂಗನಾಮ

Kannadaprabha News   | Asianet News
Published : Sep 19, 2020, 02:04 PM IST
ಉಡುಪಿ: ಇನ್ಟಾಗ್ರಾಮ್‌ ಮೂಲಕ 58800 ರು. ಪಂಗನಾಮ

ಸಾರಾಂಶ

ಸಾಮಾಜಿಕ ಜಾಲತಾಣದಲ್ಲಿ ಪರಿಚಯ| ನಾಗರಾಜ ಪೂಜಾರಿ ಎಂಬವರು 58,800 ರು. ವಂಚಿಸಿದ ಮಹಿಳೆ| ಈ ಸಂಬಂಧ ಉಡುಪಿ ಸೆನ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು|  

ಉಡುಪಿ(ಸೆ.19):  ಇನ್ಟಾಗ್ರಾಮ್‌ನಲ್ಲಿ ಪರಿಚಯವಾದ ಮಹಿಳೆಯಿಂದ ಬೈಂದೂರಿನ ನಾಗರಾಜ ಪೂಜಾರಿ ಎಂಬವರು 58,800 ರು.ಗಳನ್ನು ಕಳೆದುಕೊಂಡು ಮೋಸಹೋಗಿದ್ದಾರೆ.

ಬೆರ್ನಿಟ್‌ ವಿನ್ಸೆಂಟ್‌ ಎಂಬವರು 15-20 ದಿನಗಳ ಹಿಂದೆ ತಾನು ಲಂಡನ್ನಿನ ವಿಶ್ವ ಆರೋಗ್ಯ ಸಂಸ್ಥೆಯ ಸಿಬ್ಬಂದಿ ಎಂದು ನಾಗರಾಜ್‌ ಅವರಿಗೆ ಇನ್ಟಾಗ್ರಾಮ್‌ ನ ಮೂಲಕ ಪರಿಚಯಿಸಿಕೊಂಡಿದ್ದರು. ನಂತರ ಚಾಟಿಂಗ್‌ನಲ್ಲಿ ತಾನು ಇಂಡಿಯಾಕ್ಕೆ ಬಂದು ಹಣ ಹೂಡುತ್ತಿರುವುದಾಗಿ ಹೇಳಿದ್ದರು.

ಕೆಎಸ್ಸಾರ್ಟಿಸಿ ಹುಡುಗನಿಗೆ ಇಲಾಖೆಯಿಂದ ಬಂಪರ್ ಆಫರ್

ಸೆ. 15ರಂದು ನಾಗರಾಜ ಅವರು ಮೊಬೈಲಿಗೆ ಕರೆ ಮಾಡಿದ ವ್ಯಕ್ತಿ ತಾನು ದೆಹಲಿ ಏರ್‌ ಪೋರ್ಟ್‌ ಅಧಿಕಾರಿ ಎಂದು ಹೇಳಿ ಬೆರ್ನಿಟ್‌ ವಿನ್ಸೆಂಟ್‌ ದೆಹಲಿ ಏರ್ಪೋರ್ಟ್‌ಗೆ ಬಂದಿರುವುದಾಗಿಯೂ, ಅವರಲ್ಲಿರುವ ಡಿಡಿಯ ರಿಜಿಸ್ಪ್ರೇಶನ್‌ ಬಾಬ್ತು 58, 800 ರು.ಗಳನ್ನು ಪಾವತಿಸುವಂತೆ ದೆಹಲಿಯ ಐಡಿಬಿಐ ಬ್ಯಾಂಕ್‌ ಖಾತೆ ನಂಬರ್‌ ತಿಳಿಸಿದ್ದು, ನಾಗರಾಜ್‌ ಅವರು ನಂಬಿ ಪಾವತಿ ಮಾಡಿದ್ದರು. ನಂತರ ಪುನಃ ಆ ವ್ಯಕ್ತಿ ಕರೆ ಮಾಡಿ, ನಿಮ್ಮ ಸ್ನೇಹಿತೆಯ ಕೋವಿಡ್‌ ಟೆಸ್ಟ್‌ಗೆ 45,500 ರು. ನೀಡುವಂತೆ ಹೇಳಿದಾಗ, ನಾಗರಾಜ್‌ ಅವರಿಗೆ ಸಂಶಯ ಬಂದು, ಇದೀಗ ಉಡುಪಿ ಸೆನ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕ್ಯಾಸ್ಟ್ರೋಲ್ ಬ್ರಾಂಡ್‌ನ ನಕಲಿ ಎಂಜಿನ್ ಆಯಿಲ್ ಉತ್ಪಾದನೆ ಮಾಡುತ್ತಿದ್ದ ಘಟಕದ ಮೇಲೆ ದಾಳಿ
ಕೋಲಾರ: ಅಪ್ಪ- ಅಮ್ಮನ ವಿಚ್ಚೇದನಕ್ಕೆ ಮನನೊಂದು 26 ವರ್ಷದ ಪುತ್ರ ಆತ್ಮ*ಹತ್ಯೆ!