Raichur: ಗಂಡನ ಸಾವಿನ ಸುದ್ದಿ ಕೇಳಿ 5 ತಿಂಗಳ ಮಗನನ್ನು ಕೊಂದು ಪತ್ನಿ ನೇಣಿಗೆ ಶರಣು

Published : Apr 17, 2022, 11:31 AM IST
Raichur: ಗಂಡನ ಸಾವಿನ ಸುದ್ದಿ ಕೇಳಿ 5 ತಿಂಗಳ ಮಗನನ್ನು ಕೊಂದು ಪತ್ನಿ ನೇಣಿಗೆ ಶರಣು

ಸಾರಾಂಶ

*  ರಾಯಚೂರು ಜಿಲ್ಲೆ ಲಿಂಗಸುಗೂರು ಪಟ್ಟಣದಲ್ಲಿ ಶೃತಿ ಸಾವು *  ಮಂಗಳೂರಿನ ಕುಂಟಿಕಾನ ಬಳಿ ನಡೆದ ಅಪಘಾತ *  ಈ ಸಂಬಂಧ ಮಂಗಳೂರು ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು  

ರಾಯಚೂರು(ಏ.17):  ಪತಿ ಸಾವಿನ ಸುದ್ದಿ ಕೇಳಿ 5 ತಿಂಗಳು ಮಗು ಕೊಂದು ಗೃಹಿಣಿಯೊಬ್ಬರು ನೇಣಿಗೆ ಶರಣಾದ ಘಟನೆ ರಾಯಚೂರು(Raichur) ಜಿಲ್ಲೆ ಲಿಂಗಸುಗೂರು ಪಟ್ಟಣದಲ್ಲಿ ಇಂದು(ಭಾನುವಾರ) ನಡೆದಿದೆ. ಗಂಗಾರಾಮ್ ಪತ್ನಿ ಶೃತಿ (30) ತನ್ನ ಮಗ ಅಭಿರಾಮ್ (5 ತಿಂಗಳು) ನಿಗೆ ನೇಣು ಹಾಕಿ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ(Suicide) ಮಾಡಿಕೊಂಡಿದ್ದಾರೆ. 

ರಸ್ತೆ ಅಪಘಾತದಲ್ಲಿ(Accident) ಅಗ್ನಿಶಾಮಕದಳ ವಾಹನದ ಚಾಲಕ ಗಂಗಾಧರ.ಬಿ. ಕಮ್ಮಾರ  ಮೃತಪಟ್ಟಿದ್ದರು. ಮಂಗಳೂರಿನ ಕುಂಟಿಕಾನ ಬಳಿ ರಸ್ತೆ ದಾಟುತ್ತಿದ್ದ ವೇಳೆ ಕಾರು ಡಿಕ್ಕಿ ಹೊಡೆದ ಪರಿಣಾಮ ಗಂಗಾರಾಮ್‌ ಸಾವನ್ನಪ್ಪಿದ್ದರು(Death). ಪತಿನ ಸಾವಿನ ವಿಷಯ ತಿಳಿದ ಪತ್ನಿ ಶೃತಿ 5 ತಿಂಗಳ ಮಗನನ್ನು ಕೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಅಂತ ತಿಳಿದು ಬಂದಿದೆ. 

ಹೆತ್ತ ಮಕ್ಕಳನ್ನೇ ಹತ್ಯೆ ಮಾಡಿದ್ದ ಆರೋಪಿ ಕೋರ್ಟ್‌ ಮಹಡಿಯಿಂದ ಜಿಗಿದು ಆತ್ಮಹತ್ಯೆ!

ನಿನ್ನೆ(ಶನಿವಾರ) ರಾತ್ರಿ ರಾ.ಹೆ.66 ರಲ್ಲಿ ಬೆಂಗಳೂರಿನಿಂದ(Bengaluru) ಕುಂದಾಪುರಕ್ಕೆ ಹೋಗುತ್ತಿದ್ದ ವೇಳೆ ಕಾರು ಡಿಕ್ಕಿ ಹೊಡೆದ ಪರಿಣಾಮ ದುರ್ಘಟನೆ ಸಂಭವಿಸಿದೆ. ಉಡುಪಿಯಲ್ಲಿ ಅಗ್ನಿಶಾಮಕ ಠಾಣೆಯಲ್ಲಿ(Fire Department) ಗಂಗಾರಾಮ್ ಸೇವೆ ಸಲ್ಲಿಸುತ್ತಿದ್ದರು. ಮಾಹಿತಿ ತಿಳಿದು ಘಟನಾ ಸ್ಥಳಕ್ಕೆ ಲಿಂಗಸೂಗೂರು ಡಿವೈಎಸ್‌ಪಿ ಎಸ್ಎಸ್ ಹುಲ್ಲೂರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಮಂಗಳೂರು ಪೂರ್ವ ಸಂಚಾರಿ ಪೊಲೀಸ್(Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಶಿಕ್ಷಕನಿಗೆ ಪೋಷಕರಿಂದ ಧರ್ಮದೇಟು!
ಬೆಂಗಳೂರಲ್ಲಿ ಹೊಟ್ಟೆಪಾಡಿಗೆ ಕಳ್ಳತನ ಮಾಡ್ತಿದ್ದ ಕಳ್ಳನನ್ನೇ ರಾಬರಿ ಮಾಡಿದ ಖತರ್ನಾಕ್ ಕಿತಾಪತಿಗಳು!