ಫಿನಾಯಿಲ್‌ ಮಾರೋ ನೆಪದಲ್ಲಿ ಮನೆ​ಮಂದಿ ಮೂರ್ಛೆ​ಗೊ​ಳಿಸಿ ಲೂಟಿ!

Published : Aug 04, 2020, 03:45 PM ISTUpdated : Aug 04, 2020, 03:47 PM IST
ಫಿನಾಯಿಲ್‌ ಮಾರೋ ನೆಪದಲ್ಲಿ ಮನೆ​ಮಂದಿ ಮೂರ್ಛೆ​ಗೊ​ಳಿಸಿ ಲೂಟಿ!

ಸಾರಾಂಶ

ಫಿನಾಯಿಲ್‌ ಮಾರೋ ನೆಪದಲ್ಲಿ ಮನೆ​ಮಂದಿ ಮೂರ್ಛೆ​ಗೊ​ಳಿಸಿ ಲೂಟಿ| ವಿಜ​ಯ​ಪು​ರ​ದಲ್ಲಿ 2.20 ಲಕ್ಷ ಮೌಲ್ಯದ ಚಿನ್ನಾ​ಭ​ರಣ ಕಳವು

ವಿಜಯಪುರ(ಆ.04): ಇಲ್ಲಿನ ಶಾಂತಿ​ನ​ಗರ ಬಡಾ​ವ​ಣೆ​ಯ​ಲ್ಲೊಂದು ಬೆಚ್ಚಿ​ಬೀ​ಳಿ​ಸುವ ಕಳ್ಳ​ತನ ಪ್ರಕ​ರಣ ಬೆಳ​ಕಿಗೆ ಬಂದಿ​ದೆ. ಫಿನಾಯಿಲ್‌ ಮಾರುವ ನೆಪದಲ್ಲಿ ಮನೆಗೆ ಬಂದ ಯುವ​ತಿ​ಯೊ​ಬ್ಬಳು ಮನೆ​ಮಂದಿ​ಯ ಪ್ರಜ್ಞೆ ತಪ್ಪಿಸಿ .2.20 ಲಕ್ಷ ಮೌಲ್ಯದ ಚಿನ್ನಾಭರಣದೊಂದಿಗೆ ಪರಾ​ರಿ​ಯಾ​ಗಿ​ದ್ದಾ​ಳೆ.

ಉಜ್ವಲಾ ಎಂಬ ಸಂಸ್ಥೆಯ ಮುಖ್ಯಸ್ಥ ವಾಸುದೇವ ತೋಳಬಂದಿ ಹಾಗೂ ಮಕ್ಕಳ ಸಹಾಯವಾಣಿ ಕೇಂದ್ರದ ಮುಖ್ಯಸ್ಥೆ ಸುನಂದಾ ತೋಳಬಂದಿ ಮನೆಯಲ್ಲಿ ಭಾನು​ವಾರ ಈ ಘಟನೆ ನಡೆ​ದಿ​ದ್ದು, ತಡ​ವಾಗಿ ಬೆಳ​ಕಿಗೆ ಬಂದಿ​ದೆ.

ಫಿನಾ​ಯಿಲ್‌ ಕಂಪ​ನಿಯ ಸೇಲ್ಸ್‌​ಗ​ಲ್‌​ರ್‍ ಎಂದು ಹೇಳಿ​ಕೊಂಡು ಯುವತಿಯೊಬ್ಬಳು ಮನೆ ಬಳಿ ಬಂದಿದ್ದಾಳೆ. ಆಗ ತೋಳಬಂದಿ ದಂಪತಿ ಪುತ್ರ ಕೇಶವ ಅವರು ತಾವು ಈಗಾ​ಗಲೇ ಬೇರೆ ಕಂಪ​ನಿಯ ನೆಲ​ಶು​ಚಿ​ಗೊ​ಳಿ​ಸುವ ರಾಸಾ​ಯ​ನಿಕ ಬಳ​ಲು​ತ್ತಿ​ರು​ವು​ದಾಗಿ ತಿಳಿ​ಸಿ​ದ್ದಾ​ರೆ. ಈ ವೇಳೆ ಯುವತಿಯು ಫಿನಾಯಿಲ್‌ ವಾಸನೆ ವಿಶೇ​ಷ​ವಾ​ಗಿದೆ ಎಂದು ಹೇಳಿ ಬಾಟಲಿಯನ್ನು ಆತ​ನ

ಮೂಗಿಗೆ ಹಿಡಿದಿದ್ದಾಳೆ. ಆಗ ಕೇಶವ ಮೂರ್ಛೆ ಹೋಗಿ ಬಿದ್ದಿದ್ದಾರೆ. ಈ ಸಂದ​ರ್ಭ​ದಲ್ಲಿ ಮನೆ​ಯೊ​ಳಗೆ ನುಗ್ಗಿದ ಯುವತಿ ಆ ವೇಳೆ ನಿದ್ದೆ​ಯ​ಲ್ಲಿದ್ದ ಸುನಂದಾ, ವಾಸುದೇವ ಅವರಿಗೂ ಮಂಪರು ಬರುವ ಔಷಧ ಮೂಗಿಗೆ ಹಿಡಿದು ಮೂರ್ಛೆ ಹೋಗು​ವಂತೆ ಮಾಡಿ​ದ್ದಾ​ಳೆ. ಬಳಿಕ ತಿಜೋರಿಯಲ್ಲಿದ್ದ 40 ಗ್ರಾಂ. ಚಿನ್ನಾಭರಣ, 220 ಗ್ರಾಂ ಬೆಳ್ಳಿ ಆಭರಣ ಮತ್ತು ಎರಡು ಮೊಬೈಲ್‌ ದೋಚಿಕೊಂಡು ಪರಾರಿಯಾಗಿದ್ದಾಳೆ.

ಮನೆಯ ನಾಯಿಗೂ ಯುವ​ತಿ ವಿಷವಿಕ್ಕಿದ್ದು, ರಾತ್ರಿ ಮೃತಪಟ್ಟಿದೆ. ಯುವತಿ ಒಬ್ಬಳೇ ಮನೆ​ಯೊ​ಳಗೆ ನುಗ್ಗಿ ಈ ಕೃತ್ಯ ಎಸ​ಗಿ​ದಳೇ ಅಥವಾ ಆಕೆಯೊಂದಿಗೆ ಖದೀ​ಮರ ತಂಡವೇ ಇತ್ತೇ ಎಂಬುದು ತನಿ​ಖೆಯ ಬಳಿ​ಕ​ವಷ್ಟೇ ಗೊತ್ತಾ​ಗ​ಬೇ​ಕಿ​ದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕ್ಯಾಸ್ಟ್ರೋಲ್ ಬ್ರಾಂಡ್‌ನ ನಕಲಿ ಎಂಜಿನ್ ಆಯಿಲ್ ಉತ್ಪಾದನೆ ಮಾಡುತ್ತಿದ್ದ ಘಟಕದ ಮೇಲೆ ದಾಳಿ
ಕೋಲಾರ: ಅಪ್ಪ- ಅಮ್ಮನ ವಿಚ್ಚೇದನಕ್ಕೆ ಮನನೊಂದು 26 ವರ್ಷದ ಪುತ್ರ ಆತ್ಮ*ಹತ್ಯೆ!