ಚಾಮರಾಜನಗರದಲ್ಲಿ ಟಿಟಿ‌ ಪಲ್ಟಿ: ಮೂವರು ಸಾವು, 14 ಮಂದಿಗೆ ಗಾಯ

Suvarna News   | Asianet News
Published : Jan 08, 2021, 12:35 PM ISTUpdated : Jan 08, 2021, 12:44 PM IST
ಚಾಮರಾಜನಗರದಲ್ಲಿ ಟಿಟಿ‌ ಪಲ್ಟಿ: ಮೂವರು ಸಾವು, 14 ಮಂದಿಗೆ ಗಾಯ

ಸಾರಾಂಶ

ಚಾಮರಾಜನಗರ ಸಮೀಪ‌ ತಮಿಳುನಾಡಿನ ಟಿಟಿ‌ ಪಲ್ಟಿ: ಮೂವರು ಸಾವು, 14 ಮಂದಿಗೆ ಗಾಯ

ಚಾಮರಾಜನಗರ(ಜ.08): ತಮಿಳುನಾಡಿನ‌‌ ತಿರುಪೂರಿನಿಂದ ಮೈಸೂರಿನ‌ ಚಾಮುಂಡಿ ಬೆಟ್ಟಕ್ಕೆ ಬರುತ್ತಿದ್ದ ಟೆಂಪೋ‌ ಟ್ರಾವೆಲ್ಲರ್ ಪಲ್ಟಿಯಾಗಿ ಮೂವರು ಮೃತಪಟ್ಟಿರುವ ಘಟನೆ ಚಾಮರಾಜನಗರ ತಾಲೂಕಿನ ಸುವರ್ಣಾವತಿ ಜಲಾಶಯ ಸಮೀಪ ಗುಡಿಬೋರೆ ಎಂಬಲ್ಲಿ ನಡೆದಿದೆ.

ಪತಿ ಸುಬ್ರಮಣ್ಯ (65), ಪತ್ನಿ ಅಮರವತಿ (55) ಹಾಗೂ ಈಕೆಯ  ಮಗಳು ಸಾವನ್ನಪ್ಪಿದ ದುರ್ದೈವಿಗಳಾಗಿದ್ದು 4 ಮಕ್ಕಳು ಸೇರಿದಂತೆ 14 ಮಂದಿ ಗಾಯಗೊಂಡು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.

ನಗರದ 8 ವಲಯಗಳ 8 ಕಡೆ ಡ್ರೈರನ್

ಘಟನೆ ಬೆಳಗಿನ ಜಾವ 4 ರ ಸುಮಾರಿಗೆ ನಡೆದಿದೆ. ದೇವರ ದರ್ಶನ ಪಡೆಯಲು ಚಾಮುಂಡಿ ಬೆಟ್ಟಕ್ಕೆ ಇಡೀ ಕುಟುಂಬ ಬರುತ್ತಿತ್ತು ಎನ್ನಲಾಗಿದ್ದು ಚಾಮರಾಜನಗರ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!
ಬೆಂಗಳೂರು ವಿಜಯ್ ಗುರೂಜಿ ಗ್ಯಾಂಗ್ ಸಮೇತ ಅರೆಸ್ಟ್; ಟೆಕ್ಕಿಗೆ ಲೈಂಗಿಕ ಶಕ್ತಿ ಹೆಚ್ಚಿಸೋದಾಗಿ ₹40 ಲಕ್ಷ ವಂಚನೆ!