'ಪೊಲೀಸರು ಚರ್ಮ‌ ಸುಲಿಯುತ್ತಾರೆ': ಇನ್ಸಪೆಕ್ಟರ್ ಧಮ್ಕಿಯಿಂದ ಶಾಲೆಗೆ ಹೋಗೋದಿಲ್ಲ ಎಂದ ಬಾಲಕಿ?

Published : Jun 11, 2022, 11:34 PM IST
'ಪೊಲೀಸರು ಚರ್ಮ‌ ಸುಲಿಯುತ್ತಾರೆ': ಇನ್ಸಪೆಕ್ಟರ್ ಧಮ್ಕಿಯಿಂದ ಶಾಲೆಗೆ ಹೋಗೋದಿಲ್ಲ ಎಂದ ಬಾಲಕಿ?

ಸಾರಾಂಶ

ಪೊಲೀಸರು ಚರ್ಮ‌ ಸುಲಿಯುತ್ತಾರೆ ಎಂದು ಹೆದರಿ ಶಾಲೆಗೆ ಹೋಗುವುದಿಲ್ಲ ಎಂದು ಬಾಲಕಿ ಹಠ ಹಿಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಹುಲಿಹೊಂಡ ಗ್ರಾಮದಲ್ಲಿ ನಡೆದಿದೆ

ಉತ್ತರ ಕನ್ನಡ (ಜೂ. 11): ಪೊಲೀಸರು ಚರ್ಮ‌ ಸುಲಿಯುತ್ತಾರೆ ಎಂದು ಹೆದರಿ ಶಾಲೆಗೆ ಹೋಗುವುದಿಲ್ಲ ಎಂದು ಬಾಲಕಿ ಹಠ ಹಿಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಹುಲಿಹೊಂಡ ಗ್ರಾಮದಲ್ಲಿ ನಡೆದಿದೆ. ಜಮೀನು ವ್ಯಾಜ್ಯ ವಿಚಾರ ಸಂಬಂಧ ಮುಂಡಗೋಡ ಠಾಣಾ ಇನ್ಸ್ಪೆಕ್ಟರ್ ಸಿದ್ದಪ್ಪ ಸಿಮಾನಿ ಹಾಗೂ ಎಎಸ್‌ಐ ಸ್ಥಳಕ್ಕೆ ಭೇಟಿ ನೀಡಿದ್ದರು. ಈ ವೇಳೆ ದೂರದಲ್ಲಿ ನಿಂತು ಮೊಬೈಲ್‌ನಲ್ಲಿ ಬಾಲಕಿ ವಿಡಿಯೋ ರೆಕಾರ್ಡ್ ಮಾಡುತ್ತಿದ್ದಳು. ಈ ವೇಳೆ ಮೊಬೈಲಿನಲ್ಲಿ ವಿಡಿಯೋ  ರೆಕಾರ್ಡ್ ಮಾಡೋದು ನಿಲ್ಲಿಸುವಂತೆ  ಪೊಲೀಸರು ತಿಳಿಸಿದ್ದಾರೆ. 

ಈ ಬಳಿಕ ಠಾಣೆಗೆ ಬಂದರೆ ಚರ್ಮ ಸುಲಿದು ಬಿಡ್ತಿನಿ ಎಂದು ಬೆದರಿಕೆ ಹಾಕಿರೋದಾಗಿ ಯುವತಿ ಆರೋಪ ಮಾಡಿದ್ದಾಳೆ. ಪೊಲೀಸ್ ಅಧಿಕಾರಿಯ ಬೆದರಿಕೆಯಿಂದಲೇ ತಾನು ಶಾಲೆಗೆ ಹೋಗುವುದಿಲ್ಲ ಎಂದು ಬಾಲಕಿ ಪಟ್ಟು ಹಿಡಿದಿದ್ದಾಳೆ.  ಪ್ರಕರಣ ಸಂಬಂಧ ಕ್ರಮ ಕೈಗೊಳ್ಳುವಂತೆ ಬಾಲಕಿ ಪೊಷಕರು ದೂರು ನೀಡಿದ್ದಾರೆ.  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಪೋಷಕರು ದೂರು ನೀಡಿದ್ದಾರೆ. 

ಬಾಲಕಿಯ ಅಜ್ಜ ಈ ಹಿಂದೆ ಮಂಜುನಾಥ ಪಾಂಡುರಂಗ ಎಂಬವರಿಗೆ ಜಮೀನು ಮಾರಾಟ ಮಾಡಿದ್ದರು. ಈ ಜಮೀನಿನಲ್ಲಿ ಬೆಳೆ ಬೆಳೆಯಲು ಮುಂದಾದಾಗ ಪ್ರತೀ ಬಾರಿ ಬಾಲಕಿಯ ಪೋಷಕರು ಅಡ್ಡಗಾಲು ಹಾಕುತ್ತಿದ್ದರು. ಇದೇ ಪ್ರಕರಣ ಸಂಬಂಧಿಸಿ ಬಾಲಕಿಯ ಸಂಬಂಧಿಕರು ಎರಡು ವರ್ಷಗಳ ಹಿಂದೆ ಬಂಧಕ್ಕೊಳಗಾಗಿದ್ದರು.  "ಕಳೆದ ಭಾನುವಾರ ಮತ್ತೆ ಜಮೀನು ವ್ಯಾಜ್ಯ ನಡೆದಾಗ ಸ್ಥಳಕ್ಕೆ ಹೋಗಿ ಭೇಟಿ ನೀಡಿದ್ವಿ, ಬಾಲಕಿ ಮೊಬೈಲ್ ವಿಡಿಯೋ ಮಾಡುತ್ತಿದ್ದದ್ದನ್ನು ನಿಲ್ಲಿಸುವಂತೆ ಹೇಳಿದ್ವಿ ಹೊರತು ಆಕೆಗೆ ಯಾವುದೇ ರೀತಿಯಲ್ಲೂ ಬೈದಿಲ್ಲ. ಪೋಷಕರ ಒತ್ತಾಯದ ಮೇರೆಗೆ ಬಾಲಕಿ ಈ ರೀತಿ ಮಾಡುತ್ತಿದ್ದಾರೆ" ಎಂದು ಮುಂಡಗೋಡದ ಇನ್ಸ್‌ಪೆಕ್ಟರ್ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಮೊಬೈಲ್ ಜಾಸ್ತಿ ಬಳಸಬೇಡ ಎಂದಿದ್ದಕ್ಕೆ ಅತ್ತೆಯನ್ನೇ ಕೊಂದ ಸೊಸೆ

ಇದನ್ನೂ ಓದಿ: ‘ಹೋಟೆಲ್‌ಗೆ ಬಾ’: ನಕಲಿ ಖಾತೆ ತೆರದು ಪತಿಯೊಂದಿಗೇ ಚಾಟ್: ಪತ್ನಿಯ ಖತರ್ನಾಕ್‌ ಐಡಿಯಾಗೆ ದಂಗಾದ ಪೊಲೀಸಪ್ಪ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೈರತಿಗೆ ಮಧ್ಯಂತರ ಬೇಲಿಲ್ಲ, ಸಿಐಡಿ ಶೋಧ
ಬೆಂಗ್ಳೂರು ಕಂಪನಿಯಿಂದ 3 ಲಕ್ಷಲಂಚ: ಸಿಬಿಐನಿಂದ ಲೆ.ಕರ್ನಲ್‌ ಬಂಧನ, ಬೆಚ್ಚಿಬೀಳಿಸುವ ಭ್ರಷ್ಟಾಚಾರ ಬಯಲು!