
ಪುಣೆ(ಸೆ. 01) ಪಾನಿಪುರಿ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟ.. ಉಪ್ಪು-ಹುಳಿ-ಖಾರ ಮಿಶ್ರಿತವಾದ ಇದನ್ನು ತಿನ್ನೋದೆ ಒಂದು ಸವಿ.. ಹೆಣ್ಣು ಮಕ್ಕಳಿಗೂ ಇದು ಪಂಚ ಪ್ರಾಣ.. ಆದರೆ ಇಲ್ಲೊಬ್ಬಳು ಮಹಿಳೆ ಗಂಡ ಪಾನಿಪುರಿ ತಂದ ಎಂಬ ಕಾರಣಕ್ಕೆ ಸುಸೈಡ್ ಮಾಡಿಕೊಂಡಿದ್ದಾಳೆ.
ಪಾನಿಪುರಿ ವಿಚಾರದಲ್ಲಿ ಗಂಡ- ಹೆಂಡತಿ ನಡುವೆ ಉಂಟಾದ ಜಗಳ ಪತ್ನಿಯ ಆತ್ಮಹತ್ಯೆಯಲ್ಲಿ ಕೊನೆಯಾಗಿದೆ. ಪೂಣಾದ ಅಂಬೆಗಾಂವ್ ನಿವಾಸಿ ಗಹಿನಿನಾಥ್ ಸವವಡೆ ಅವರ ಪತ್ನಿ ಪ್ರತಿಕ್ಷಾ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಗಂಡ ಗಹಿನಿನಾಥ್ ಪತ್ನಿಗೆ ತಿಳಿಸದೆ ಬೀದಿ ಬದಿ ಪಾನಿಪುರಿಯನ್ನು ಮನಗೆ ತಂದಿದ್ದ. ಈಗಾಗಲೇ ನಾನು ಅಡುಗೆ ಮಾಡಿರುವುದರಿಂದ ಬೀದಿ ಬದಿ ಪಾನಿಪುರಿ ತರುವ ಅವಶ್ಯಕತೆ ಏನಿತ್ತು ಎಂದು ಪ್ರತಿಕ್ಷಾ ಪ್ರಶ್ನೆ ಮಾಡಿದ್ದಾರೆ.
ವರ ದಕ್ಷಿಣೆಯಲ್ಲ..ವಧು ದಕ್ಷಿಣೆ..ಕಿರುಕುಳಕ್ಕೆ ಬೇಸತ್ತ ವ್ಯಕ್ತಿ ಆತ್ಮಹತ್ಯೆ
ಇದೇ ವಿಚಾರದಲ್ಲಿ ಪತಿ-ಪತ್ನಿ ನಡುವೆ ಜಗಳವಾಗಿದೆ. ಇಬ್ಬರು ಊಟ ಮಾಡದೆ ಮಲಗಿದ್ದಾರೆ. ಮರುದಿನ ಬೆಳಗ್ಗೆ ಪತ್ನಿ ಪ್ರತಿಕ್ಷಾ ವಿಷ ಸೇವಿಸಿದ್ದಾಳೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.
ಫೆಬ್ರವರಿ 1, 2019 ರಂದು ಜೋಡಿ ಮದುವೆಯಾಗಿದ್ದರು. ಇವರಿಗೆ ಗಂಡು ಮಗುವಿದೆ. ಸೊಲ್ಲಾಪುರದಲ್ಲಿ ದಂಪತಿ ಮೊದಲು ವಾಸವಿದ್ದರು. ಪ್ರತೀಕ್ಷಾಗೆ ಕೆಲಸ ಮಾಡುವ ಆಸೆ ಇದ್ದುದರಿಂದ ಪುಣೆಗೆ ಶಿಫ್ಟ್ ಆಗಿದ್ದರು. ಪತ್ನಿ ಕೆಲಸಕ್ಕೆ ಹೋಗುವ ವಿಚಾರಕ್ಕೆ ಸಂಬಂಧಿಸಿ ಪ್ರತಿದಿನ ಗಲಾಟೆ ನಡೆಯುತ್ತಿತ್ತು.
ಆತ್ಮಹತ್ಯೆ ಮಾಡಿಕೊಂಡ ಮಹಿಳೆಯ ತಂದೆ ದೂರು ದಾಖಲಿಸಿದ್ದು, ಗಂಡ ಆಕೆಗೆ ನಿತ್ಯ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಿದ್ದಾರೆ. ಪತಿಯ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ