ಹೆಣ್ಣು ಮಗು ಹುಟ್ಟಲಿಲ್ಲವೆಂದು ತನ್ನ ನವಜಾತ ಗಂಡು ಶಿಶುವನ್ನು ಕೊಂದ ಪಾಪಿ ತಂದೆ!

Published : Jan 15, 2024, 10:53 PM IST
ಹೆಣ್ಣು ಮಗು ಹುಟ್ಟಲಿಲ್ಲವೆಂದು ತನ್ನ ನವಜಾತ  ಗಂಡು ಶಿಶುವನ್ನು ಕೊಂದ ಪಾಪಿ ತಂದೆ!

ಸಾರಾಂಶ

ಮದ್ಯದ ಅಮಲಿನಲ್ಲಿ ವ್ಯಕ್ತಿಯೊಬ್ಬ ತನ್ನ ನವಜಾತ ಮಗನನ್ನು ಕೊಂದಿರುವ ಘಟನೆ ಮಧ್ಯಪ್ರದೇಶದ ಬೇತುಲ್ ಜಿಲ್ಲೆಯಲ್ಲಿ ನಡೆದಿದೆ.

ಬೇತುಲ್ (ಜ.15): ಮದ್ಯದ ಅಮಲಿನಲ್ಲಿ ವ್ಯಕ್ತಿಯೊಬ್ಬ ತನ್ನ ನವಜಾತ ಮಗನನ್ನು ಕೊಂದಿರುವ ಘಟನೆ ಮಧ್ಯಪ್ರದೇಶದ ಬೇತುಲ್ ಜಿಲ್ಲೆಯಲ್ಲಿ ನಡೆದಿದೆ. ಈ ಕೊಲೆಗೆ ಕಾರಣ ಅನೇಕರನ್ನು ಬೆಚ್ಚಿಬೀಳಿಸಿದೆ. ಕೊಲೆಗಾರನಿಗೆ ಮಗಳು ಹುಟ್ಟಬೇಕೆಂಬ ಆಸೆ ಇತ್ತು ಮತ್ತು ಆದ್ದರಿಂದ ತನ್ನ ಗಂಡು ಮಗುವನ್ನು ಕೊಂದನು. 

ವರದಿಗಳ ಪ್ರಕಾರ, ಬಜ್ಜರವಾಡ ಗ್ರಾಮದ ವ್ಯಕ್ತಿ ಅನಿಲ್ ಉಯಿಕೆ ಎಂಬಾತ ಕಂಠ ಪೂರ್ತಿ ಕುಡಿದುಕೊಂಡು ತನ್ನ ಹೆಂಡತಿಯ ಮೇಲೆ ಹಲ್ಲೆ ಮಾಡಿದ್ದಾನೆ. ಈ ವೇಳೆ ಆಕೆಯ ಕೈಯಿಂದ 12 ದಿನದ ಮಗುವನ್ನು ಕಿತ್ತುಕೊಂಡಿದ್ದಾನೆ. ಮಹಿಳೆಗೆ ತೀವ್ರವಾಗಿ ಥಳಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ.

17ನೇ ವಯಸ್ಸಿನಲ್ಲಿ ವಿವಾಹವಾಗಿ ವಿಚ್ಚೇದನ ಪಡೆದ ನಟಿ ಹಿಟ್‌ ಸಿನೆಮಾಕ್ಕಾಗಿ 33 ವರ್ಷಗಳೇ ಕಾಯಬೇಕಾಯ್ತು!

ದಂಪತಿಗೆ ಈಗಾಗಲೇ 2 ಗಂಡು ಮಕ್ಕಳಿದ್ದು, ಪತ್ನಿ ಮೂರನೇ ಬಾರಿಗೆ ಗರ್ಭಿಣಿಯಾದಾಗ  ಮಗಳನ್ನು ಹೊಂದುವ ನಿರೀಕ್ಷೆಯಲ್ಲಿದ್ದರು. ಆದರೆ ಪತ್ನಿ ಮೂರನೇ ಬಾರಿಗೂ ಮಗನಿಗೆ ಜನ್ಮ ನೀಡಿದಾಗ ಅವನ ನಿರೀಕ್ಷೆಗಳು ಹುಸಿಯಾದವು. ಹೀಗಾಗಿ ಕುಡಿದು ಬಂದು ಗಲಾಟೆ ಮಾಡಿ ಅವನು ತನ್ನ ಹೆಂಡತಿಯಿಂದ ಮಗುವನ್ನು ಕಸಿದುಕೊಂಡು ಅವರ ಗುಡಿಸಲಿನಲ್ಲಿ ಕೊಂದನು.  ಪತ್ನಿ ಮನೆಗೆ ಮರಳಿದ ಬಳಿಕ ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ.

ಪಾಕಿಸ್ತಾನಿ ಕ್ರಿಕೆಟಿಗನೊಂದಿಗೆ ಸಂಬಂಧ ಹೊಂದಿ ಬ್ರೇಕಪ್‌ ಬಳಿಕ ಗೆಳತಿಯ ಗಂಡನನ್ನೇ ಮದುವೆಯಾದ ನಟಿ!

ಗ್ರಾಮದ ಕೊತ್ವಾಲಿ ಪೊಲೀಸ್ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕೊಲೆಗಾರ ಅಪ್ಪ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎಂದು ಠಾಣಾಧಿಕಾರಿ ಆಶಿಶ್ ಸಿಂಗ್ ಪವಾರ್ ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಮಗುವಿನ ಕುತ್ತಿಗೆಯಲ್ಲಿ ಕತ್ತು ಹಿಸುಕಿದ ಗುರುತುಗಳು ಗೋಚರಿಸಿವೆ. ಅಧಿಕಾರಿಗಳ ಪ್ರಕಾರ ಮಗು ಕತ್ತು ಹಿಸುಕಿ ಸಾವನ್ನಪ್ಪಿದೆ ಎಂದು ಸ್ಪಷ್ಟವಾಗಿದ್ದರೂ,  ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದ್ದು, ಶೀಘ್ರದಲ್ಲೇ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಅಧಿಕಾರಿಗಳು ಹೇಳಿದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ
ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?