Koppal: ವಿದ್ಯುತ್ ಅವಘಡಕ್ಕೆ ತಾಯಿ, ಮಕ್ಕಳು ಸೇರಿ ಮೂವರ ಬಲಿ

Published : May 06, 2022, 08:31 PM IST
Koppal: ವಿದ್ಯುತ್ ಅವಘಡಕ್ಕೆ ತಾಯಿ, ಮಕ್ಕಳು ಸೇರಿ ಮೂವರ ಬಲಿ

ಸಾರಾಂಶ

ಅದೊಂದು ಮೂರು‌ ಮಕ್ಕಳಿದ್ದ ಮುದ್ದಾದ ಕುಟುಂಬ. ಆದರೆ ಇಂದು ವಿಧಿ ಆಟದಿಂದಾಗಿ ಆ ಕುಟುಂಬದಲ್ಲಿ ತಾಯಿ ಸೇರಿ ಇಬ್ಬರು ಮಕ್ಕಳು ಹೆಣವಾಗಿದ್ದಾರೆ.‌ ಅಷ್ಟಕ್ಕೂ ಏನಿದು ತಾಯಿ ಮಕ್ಕಳ ಸಾವಿನ ಕಥೆ? ಎಲ್ಲಿ ನಡೆದಿರೋದು ಈ ಘಟನೆ ಅಂತೀರಾ?

ವರದಿ: ದೊಡ್ಡೇಶ್ ಯಲಿಗಾರ್ ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಪ್ಪಳ

ಕೊಪ್ಪಳ (ಮೇ.06): ಅದೊಂದು ಮೂರು‌ ಮಕ್ಕಳಿದ್ದ ಮುದ್ದಾದ ಕುಟುಂಬ. ಆದರೆ ಇಂದು ವಿಧಿ ಆಟದಿಂದಾಗಿ ಆ ಕುಟುಂಬದಲ್ಲಿ (Family) ತಾಯಿ ಸೇರಿ ಇಬ್ಬರು ಮಕ್ಕಳು ಹೆಣವಾಗಿದ್ದಾರೆ.‌ ಅಷ್ಟಕ್ಕೂ ಏನಿದು ತಾಯಿ ಮಕ್ಕಳ ಸಾವಿನ ಕಥೆ? ಎಲ್ಲಿ ನಡೆದಿರೋದು ಈ ಘಟನೆ ಅಂತೀರಾ? ಹಾಗಾದರೆಈ ರಿಪೋರ್ಟ್ ನೋಡಿ.

ಎಲ್ಲಿ ವಿದ್ಯುತ್ ಅವಘಡ ಸಂಭವಿಸಿರುವುದು: ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನಲ್ಲಿ‌ ಇಂದು ನಡೆಯಬಾರದ ಘಟನೆಯೊಂದು ನಡೆದಿದೆ. ಈ ಘಟನೆ ಕೇಳಿದರೆ ನೀವು ಬೆಚ್ಚಿ ಬಿಳೋದು ಗ್ಯಾರಂಟಿ. ಹೌದು ಕನಕಗಿರಿ ತಾಲೂಕಿನ ಹುಲಿಹೈದರ ಗ್ರಾಮದಲ್ಲಿ ಇಂದು ವಿದ್ಯುತ್ ಅವಘಡವೊಂದು (Electric Shock) ಸಂಭವಿಸಿದರ ಪರಿಣಾಮಾಗಿ ತಾಯಿ, ಇಬ್ಬರು ಮಕ್ಕಳು ಸೇರಿ ಒಟ್ಟು ಮೂವರು ಸಾವನ್ನಪ್ಪಿದ್ದಾರೆ (Death).

ಯಾರು ಸಾವನ್ನಪ್ಪಿರುವುದು: ಹುಲಿಹೈದರದಲ್ಲಿ ಕೂಲಿ ಕೆಲಸ ಮಾಡಿಕೊಂಡಿರುವ ಉಮೇಶ ಹಾಗು ಶೈಲಾಜರಿಗೆ ಒಟ್ಟು ಮೂರು ಮಕ್ಕಳು. ಇವರಲ್ಲಿ ಈ ಘಟನೆಯಲ್ಲಿ ಉಮೇಶ್ ಪತ್ನಿ 28 ವರ್ಷದ  ಶೈಲಜಾ, 2 ವರ್ಷದ ಮಗ ಪವನ ಹಾಗೂ 3 ವರ್ಷದ ಮಗಳು ಸಾನ್ವಿ ಸಾವನ್ನಪ್ಪಿದ್ದಾರೆ.

ಕೊಪ್ಪಳದ 60 ಗ್ರಾಮ ಎಣ್ಣೆ ಮುಕ್ತ, ಮಾರಿದ್ರೆ ಬೀಳುತ್ತೆ ದಂಡ

ಮೂವರು ಸಾವನ್ನಪ್ಪಲು ಕಾರಣ: ಇಂದು ಮುಂಜಾನೆಯ ವೇಳೆ ಉಮೇಶ ಕೆಲಸಕ್ಕೆ ಹೋಗಿದ್ದಾರೆ. ಶೈಲಾಜ ಬಟ್ಟೆ ತೊಳೆಯಲು ಹೊರಗೆ ಹೋಗಿದ್ದಾರೆ. ಈ ಸಂದರ್ಭದಲ್ಲಿ ಮನೆಯೊಳಗಿದ್ದ ಸಾನ್ವಿ ಎಂಬ ಮೂರು ವರ್ಷದ ಮಗು ವಿದ್ಯುತ್ ಅನ್ನು ಹಿಡಿದಿದ್ದಾಳೆ. ಈ ಸಂದರ್ಭದಲ್ಲಿ ವಿದ್ಯುತ್ ಪ್ರವಹಿಸಿದೆ. ಆಗ ತಾಯಿ ಶೈಲಾಜ ಬಂದು ಮಗಳನ್ನು ಬಿಡಿಸಲು ಹೋಗಿದ್ದರಿಂದ ಆಕೆಗೆ. ತಾಯಿಯನ್ನು ಹಿಡಿದುಕೊಂಡಿದ್ದ ಇನ್ನೊಬ್ಬ ಮಗ ಪವನಗೂ ಸಹ ವಿದ್ಯುತ್ ಪ್ರವಹಿಸಿದೆ. ಇದರಿಂದಾಗಿ ಮೂವರು ಸಾವನ್ಮಪ್ಪಿದ್ದಾರೆ.

ಸ್ಥಳೀಯರ ಧೈರ್ಯದಿಂದ‌ ಉಳಿಯಿತು ಮಗುವಿನ ಪ್ರಾಣ: ಇನ್ನು ಉಮೇಶ್ ಆಟೋ ಚಾಲಕನಾಗಿದ್ದು, ಆತ ಬಾಡಿಗೆಗೆ ಬೇರೆ ಕಡೆ ಹೋಗಿದ್ದಾನೆ. ಈ ವೇಳೆಯಲ್ಲಿ ಈ ಘಟನೆ ನಡೆದಿದೆ.‌ ಇನ್ನು ಶೈಲಜಾ ಮನೆಗೆ ಬಂದಾಗ ಈ ಘಟನೆ ನಡೆದಿದ್ದು, ಮಗಳು ವಿದ್ಯುತ್ ತಂತಿ ಹಿಡಿದಿದ್ದರಿಂದ ಮೂವರು ಸಾವನ್ನಪ್ಪಿದ್ದಾರೆ. ಈ ವೇಳೆ ಇನ್ನೊಬ್ಬ ಮಗ ಧೃವ ತನ್ನ ತಾಯಿ, ಅಕ್ಕ, ಅಣ್ಣ ಬಿದ್ದಿರುವುದನ್ನು ನೋಡಿ ಅವರನ್ನು ಹಿಡಿಯಲು ಹೋಗಿದ್ದಾನೆ. ಇದನ್ನು ಗಮನಿಸಿದ ಸ್ಥಳೀಯರು ಧೈರ್ಯ ಮಾಡಿ ಕೂಡಲೇ ಧೃವನನ್ನು ಟವಲ್‌ನಿಂದ‌ ಹಿಡಿದು ಎಳೆದಿದ್ದಾರೆ. ಇದರಿಂದಾಗಿ ಅದೃಷ್ಟವಶಾತ್ ಧೃವ ಬದುಕಿದ್ದಾ‌ನೆ. 

Koppal: ನಗರದಲ್ಲಿ ಓಡಾಡದ ಸಿಟಿ ಬಸ್‌ಗಳು: ಸಂಚಾರ ಸ್ಥಗಿತದಿಂದ ತೊಂದರೆ

ಊರಿಗೆ ಊರೇ ಕಣ್ಣೀರು: ತಾಯಿ ಮಕ್ಕಳು ಸಾವನ್ನಪ್ಪಿದ್ದರಿಂದ ಇಡೀ ಗ್ರಾಮವೇ ಕಣ್ಣೀರು ಹಾಕುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.‌ ಮುದ್ದಾದ ಮಕ್ಕಳ ಆಟ ನೋಡಿದ್ದ ಗ್ರಾಮಸ್ಥರಿಗೆ ಆ ಮಕ್ಕಳ ಮೃತದೇಹ ನೋಡಲು ಮನಸಾಗದೆ ಅಯ್ಯೋ ವಿಧಿಯೇ ಯಾಕಪ್ಪ ಈ ಮಕ್ಕಳಿಗೆ ಸಾವು ತಂದೆ ಎಂದು ಮಮ್ಮಲ ಮರಗುತ್ತಿದ್ದರು.‌ ಒಟ್ಟಿನಲ್ಲಿ ಇನ್ನು ಮುಂದೆಯಾದರೂ ಮನೆಯಲ್ಲಿ ವಿದ್ಯುತ್ ತಂತಿಗಳಿಂದ ಮಕ್ಕಳನ್ನು ದೂರ ಇಡುವುದು ಒಳಿತು. ಇಲ್ಲವಾದಲ್ಲಿ ಇಂತಹ ಅವಘಡಗಳು ಸಂಭವಿಸುವುದರಲ್ಲಿ ಅನುಮಾನವೇ ಇಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ