ಸಿಸಿಟಿವಿ ಆಧಾರದಲ್ಲಿ ಸರಗಳ್ಳರ ಪತ್ತೆ ಮಾಡಿದ  ಬೆಂಗಳೂರು ಪೊಲೀಸರು

Published : Jul 06, 2021, 09:54 PM IST
ಸಿಸಿಟಿವಿ ಆಧಾರದಲ್ಲಿ ಸರಗಳ್ಳರ ಪತ್ತೆ ಮಾಡಿದ  ಬೆಂಗಳೂರು ಪೊಲೀಸರು

ಸಾರಾಂಶ

* ಒಂಟಿ ಮಹಿಳೆಯನ್ನು ಟಾರ್ಗೆಟ್ ಮಾಡಿ ಸರಗಳ್ಳತನ ಮಾಡ್ತಿದ್ದ ಅರೋಪಿಗಳು ಅರೆಸ್ಟ್ * ಆರ್ ಆರ್ ನಗರದಲ್ಲಿ ಮಹಿಳೆಯ ಏಳೆದಾಡಿ ಸರ ದೋಚಿದ್ದ ಅರೋಪಿಗಳು * ವಾಕಿಂಗ್ ಹೋಗ್ತಿದ್ದ ಮಹಿಳೆ ಸರ ಕಿತ್ತು ಪರಾರಿಯಾಗಿದ್ದರು * ತುರುವೆಕೆರೆ ಮೂಲದ ರವಿ ಆಚಾರ್ಯ ಅಲಿಯಾಸ್ ರವಿ ,ಮತ್ತು ತಲಘಟ್ಟಪುರ ನಿವಾಸಿ ರಾಹುಲ್ ಬಂಧಿತರು

ಬೆಂಗಳೂರು(ಜು.  06)   ಒಂಟಿ ಮಹಿಳೆಯನ್ನು ಟಾರ್ಗೆಟ್ ಮಾಡಿ ಸರಗಳ್ಳತನ ಮಾಡ್ತಿದ್ದ ಅರೋಪಿಗಳು ಸೆರೆ ಸಿಕ್ಕಿದ್ದಾರೆ. ಆರ್ ಆರ್ ನಗರದಲ್ಲಿ ಮಹಿಳೆಯ ಏಳೆದಾಡಿ ಸರ ದೋಚಿದ್ದ ಅರೋಪಿಗಳು ಬಲೆಗೆ ಬಿದ್ದಿದ್ದಾರೆ.

ವಾಕಿಂಗ್ ಹೋಗ್ತಿದ್ದ ಮಹಿಳೆ ಸರ ಕಿತ್ತು ಪರಾರಿಯಾಗಿದ್ದರು. ತುರುವೆಕೆರೆ ಮೂಲದ ರವಿ ಆಚಾರ್ಯ ಅಲಿಯಾಸ್ ರವಿ ,ಮತ್ತು ತಲಘಟ್ಟಪುರ ನಿವಾಸಿ ರಾಹುಲ್ ಬಂಧಿತರು. ರಾಹುಲ್ ಬೈಕ್ ರೈಡ್ ಮಾಡ್ತಿದ್ದ ಅರೋಪಿ. ಮಹಿಳೆ ರವಿ ಹಿಂಬಾಲಿಸುತ್ತಿದ್ದ.

ಫುಲ್ ಟೈಟಾಗಿ ಸರಗಳ್ಳತನಕ್ಕೆ ಇಳಿಯುತ್ತಿದ್ದ ಕಿಲಾಡಿ

ಕೃತ್ಯ ನಡೆದ ಸ್ಥಳದಿಂದ ಸುಮಾರು 5 ಕಿಮಿ ವರೆಗೆ ಸಿಸಿಟಿವಿ ಪರಿಶೀಲನೆ ಮಾಡಿದ್ದ ಪೊಲೀಸರಿಗೆ ಸ್ಪಷ್ಟ ಮಾಹಿತಿ ಸಿಕ್ಕಿದೆ. ಸರಗಳ್ಳತನ ಬಳಿಕ  ಕೆಂಗೇರಿ ಬಳಿಯ  ಶಿವನ ಪಾಳ್ಯಕ್ಕೆ ಹೋಗಿದ್ದರು. ಸುಮಾರು ಇಪ್ಪತ್ತೈದಕ್ಕು ಹೆಚ್ಚಿನ ಸಿಸಿಟಿವಿ ಪರಿಶೀಲನೆ ನಡೆಸಿದ್ದ ಪೊಲೀಸರಿಗೆ ಇವರ ಚಲನವಲನ ಪತ್ತೆಯಾಗಿದೆ. ವಿಚಾರಣೆ ವೇಳೆ ಪಾಂಡವಪುರ ದಲ್ಲಿ ಎಟಿಎಂ ಕಳ್ಳತನ ಯತ್ನ ಮಾಡಿದ್ದು ಬೆಳಕಿಗೆ ಬಂದಿದೆ. 

ಗ್ಯಾಸ್ ಕಟರ್ ಬಳಸಿ ಎಟಿಂ ದೋಚಲು ಯತ್ನಿಸಿದ್ದ ಆರೋಪಿ ರವಿ ಯತ್ನ ಮಾಡಿದ್ದ. ಆರ್ ಆರ್ ನಗರ ಪೊಲೀಸರಿಂದ ಇಬ್ಬರು ಅರೋಪಿಗಳ ಬಂಧನವಾಗಿದ್ದು ಇವರಿಂದ ಮತ್ತಷ್ಟು ಪ್ರಕರಣ ಬೆಳಕಿಗೆ ಬರುವ ಸಾಧ್ಯತೆ ಇದೆ.  ಹೆಚ್ಚಿನ ತನಿಖೆ ನಡೆಸುತ್ತಿರುವ  ಆರ್ ಆರ್ ನಗರ ಪೊಲೀಸರು ಇನ್ನು ಕೆಲ ಪ್ರಕರಣದ ಹಿಂದೆ ಬಿದ್ದಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
ಡ್ರಗ್ಸ್‌ ಸಪ್ಲೈಗೆ ಸ್ತ್ರೀಯರ ಬಳಕೆ ಅಧಿಕ! ಆಫ್ರಿಕಾ ಖಂಡದ ಸ್ತ್ರೀಯರೇ ಅಧಿಕ