ಬಿ.ಎ​ಲ್‌.ಸಂತೋಷ್‌ ಹೆಸರಲ್ಲಿ ಸಾಮಾಜಿಕ ಜಾಲತಾಣದ ಮೂಲಕ ವಂಚನೆ

Kannadaprabha News   | Asianet News
Published : Dec 28, 2020, 08:04 AM IST
ಬಿ.ಎ​ಲ್‌.ಸಂತೋಷ್‌ ಹೆಸರಲ್ಲಿ ಸಾಮಾಜಿಕ ಜಾಲತಾಣದ ಮೂಲಕ ವಂಚನೆ

ಸಾರಾಂಶ

ಬಂಧಿತರಿಂದ ಐದು ಮೊಬೈಲ್‌, ಹತ್ತಕ್ಕೂ ಹೆಚ್ಚು ಸಿಮ್‌​ಕಾರ್ಡ್‌, ಬ್ಯಾಂಕ್‌ ಪಾಸ್‌ ಪುಸ್ತ​ಕ​ಗ​ಳನ್ನು ವಶ| ಉತ್ತರ ಪ್ರದೇಶ ಮೂಲದ ಆರೋಪಿಗಳು| ಮಾಸ್ಟರ್‌ ಮೈಂಡ್‌ ಲಿಯಾ​ಖತ್‌ ಸೇರಿ ನಾಲ್ವ​ರು ಪರಾ​ರಿ​| ಐಎ​ಎಸ್‌, ಐಪಿ​ಎಸ್‌ ಅಧಿ​ಕಾ​ರಿ​ಗಳ ಹೆಸ​ರಿ​ನಲ್ಲಿಯೂ ವಂಚನೆ|

ಬೆಂಗಳೂರು(ಡಿ.28): ಬಿಜೆಪಿ ರಾಷ್ಟ್ರೀಯ ಸಂಘ​ಟನಾ ಪ್ರಧಾನ ಕಾರ್ಯ​ದರ್ಶಿ ಬಿ.ಎ​ಲ್‌.ಸಂತೋಷ್‌ ಅವರ ಹೆಸ​ರಿ​ನಲ್ಲಿ ಸಾಮಾಜಿಕ ಜಾಲತಾಣದ ಮೂಲಕ ವಂಚಿ​ಸು​ತ್ತಿದ್ದ ಉತ್ತರ ಪ್ರದೇಶ ಮೂಲದ ಇಬ್ಬ​ರನ್ನು ಕೇಂದ್ರ ವಿಭಾಗದ ಸೈಬರ್‌ ಕ್ರೈಂ ಪೊಲೀ​ಸರು ಬಂಧಿ​ಸಿ​ದ್ದಾ​ರೆ.

ಉತ್ತರ ಪ್ರದೇಶ ಮೂಲದ ಇಬ್ರಾ​ಹಿಂ(36), ಮೊಹ​ಮ್ಮದ್‌ ಶೋಕಿ​ನ್‌​(28) ಬಂಧಿ​ತರು. ಆರೋಪಿಗಳಿಂದ ಐದು ಮೊಬೈಲ್‌, ಹತ್ತಕ್ಕೂ ಹೆಚ್ಚು ಸಿಮ್‌​ಕಾರ್ಡ್‌, ಬ್ಯಾಂಕ್‌ ಪಾಸ್‌ ಪುಸ್ತ​ಕ​ಗ​ಳನ್ನು ವಶಕ್ಕೆ ಪಡೆ​ಯ​ಲಾ​ಗಿ​ದೆ. ಆರೋ​ಪಿ​ಗಳು ಸಂತೋಷ್‌ ಅವರ ಹೆಸ​ರಿ​ನಲ್ಲಿ ನಕಲಿ ಫೇಸ್‌​ಬುಕ್‌ ಖಾತೆ ತೆರೆದು, ಮೆಸೆಂಜರ್‌ ಮೂಲಕ ಸಂತೋಷ್‌ ಅವರ ಹೆಸ​ರಿ​ನಲ್ಲಿ ಹಣ ​ಸಂದಾಯ ಮಾಡು​ವಂತೆ ಅಜಿತ್‌ ಎಂಬುವ​ರಿಗೆ ಸಂದೇಶ ಕಳು​ಹಿ​ಸಿ​, ಹಣ ಪಡೆ​ದು​ಕೊಂಡಿ​ದ್ದರು. ಇದೇ ರೀತಿ ಹಣ ಕೋರಿ ಹಲ​ವ​ರಿಗೆ ವಂಚಿ​ಸಿ​ದ್ದರು. ಈ ಬಗ್ಗೆ ಕೇಂದ್ರ ಸೈಬರ್‌ ಕ್ರೈಂ ಪೊಲೀ​ಸ​ರಿಗೆ ದೂರು ನೀಡ​ಲಾ​ಗಿ​ತ್ತು.

32 ಲಕ್ಷ ಗ್ರಾಹಕರನ್ನು ವಂಚಿಸಿದ ಅಗ್ರಿಗೋಲ್ಡ್‌ನ 4109 ಕೋಟಿ ರು. ಆಸ್ತಿ ಜಪ್ತಿ

ಈ ಸಂಬಂಧ ಕಾರ್ಯಾ​ಚ​ರಣೆ ನಡೆ​ಸಿದ ಪೊಲೀಸರು, ಬ್ಯಾಂಕ್‌ ಡಿಟೇಲ್ಸ್‌ ಹಾಗೂ ಪಿನ್‌ ನಂಬರ್‌ ಚೆಕ್‌ ಮಾಡಿ​ದಾಗ ಆರೋ​ಪಿ​ಗಳ ಮೂಲ ಉತ್ತರ ಪ್ರದೇಶ ಎಂಬುದು ಗೊತ್ತಾ​ಗಿದೆ. ಬಂಧಿ​ಸಲು ತೆರ​ಳಿ​ದಾಗ ಸ್ಥಳೀ​ಯರ ನೆರ​ವಿ​ನಿಂದ ತಂಡ ಮಾಸ್ಟರ್‌ ಮೈಂಡ್‌ ಲಿಯಾ​ಖತ್‌ ಸೇರಿ ನಾಲ್ವ​ರು ಪರಾ​ರಿ​ಯಾ​ಗಿದ್ದು, ಪಿಯುಸಿ ವ್ಯಾಸಂಗ ಮಾಡಿ​ರುವ ಲಿಯಾ​ಖ​ತ್‌, ಇಂಗ್ಲೀ​ಷ್‌​ನಲ್ಲಿ ಚಾಟಿಂಗ್‌ ಮಾಡು​ವು​ದನ್ನು ಕರ​ಗತ ಮಾಡಿ​ಕೊಂಡಿ​ದ್ದಾ​ನೆ. ತನ್ನ ಸ್ನೇಹಿ​ತರ ಜತೆ ಸೇರಿ​ಕೊಂಡು ಪ್ರಭಾವಿ ರಾಜ​ಕಾ​ರಣಿ, ಐಎ​ಎಸ್‌, ಐಪಿ​ಎಸ್‌ ಅಧಿ​ಕಾ​ರಿ​ಗಳ ಹೆಸ​ರಿ​ನಲ್ಲಿ ವಂಚನೆ ಮಾಡು​ತ್ತಿ​ದ್ದರು ಎಂದು ಪೊಲೀಸರು ಹೇಳಿ​ದ​ರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಉತ್ತರಕನ್ನಡ: ನೀರು ಕೇಳುವ ನೆಪದಲ್ಲಿ ವೃದ್ಧೆಯ ಚಿನ್ನದ ಸರ ಎಗರಿಸಿ ಖದೀಮರು ಎಸ್ಕೇಪ್!
ನಟಿ ಶಿಲ್ಪಾ ಶೆಟ್ಟಿ ಒಡೆತನದ ಪಬ್‌ನಲ್ಲಿ ಉದ್ಯಮಿಯಿಂದ ಗಲಾಟೆ; ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನ!