ಕಾರುಗಳನ್ನ ಬಾಡಿಗೆಗೆ ಪಡೆದು ಮಾರಾಟ ಮಾಡಿದ ಖದೀಮರು

Kannadaprabha News   | Asianet News
Published : Jan 18, 2021, 07:56 AM IST
ಕಾರುಗಳನ್ನ ಬಾಡಿಗೆಗೆ ಪಡೆದು ಮಾರಾಟ ಮಾಡಿದ ಖದೀಮರು

ಸಾರಾಂಶ

ಬಾಡಿಗೆಗೆ ಕಾರು ಪಡೆದು ದಾಖಲೆ ಸೃಷ್ಟಿಸಿ ಮಾರಾಟ| ಸಿಸಿಬಿ ಕಾರ್ಯಾಚರಣೆ| ಆರೋಪಿಗಳಿಬ್ಬರ ಬಂಧನ| 5 ಕೋಟಿ ಮೌಲ್ಯದ 27 ಐಷಾರಾಮಿ ಕಾರುಗಳು ಜಪ್ತಿ| ಪ್ರಕರಣದಲ್ಲಿ ಓರೆಕ್ಸ್‌ ಕಂಪನಿಯ ಸಿಬ್ಬಂದಿ ಕೂಡ ಶಾಮೀಲಾಗಿರುವ ಶಂಕೆ| 

ಬೆಂಗಳೂರು(ಜ.18): ಓರೆಕ್ಸ್‌ ಕಂಪನಿಯಿಂದ ಕಾರುಗಳನ್ನು ಬಾಡಿಗೆಗೆ ಪಡೆದು ನಕಲಿ ದಾಖಲೆ ಸೃಷ್ಟಿಸಿ ಕಡಿಮೆ ಮೊತ್ತಕ್ಕೆ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿ ಕೋಟ್ಯಂತರ ಮೌಲ್ಯದ ಕಾರು ಜಪ್ತಿ ಮಾಡಿದ್ದಾರೆ.

ಉತ್ತರಹಳ್ಳಿಯ ಗಿರೀಶ್‌ ಗೌಡ (32), ಕೋಣನಕುಂಟೆ ಕ್ರಾಸ್‌ನ ಮೋಹನ್‌ (24) ಬಂಧಿತರು. ಆರೋಪಿಗಳಿಂದ 12 ಇನ್ನೋವಾ, ಫಾರ್ಚೂನರ್‌ ಸೇರಿ ಸುಮಾರು 5.25 ಕೋಟಿ ಮೌಲ್ಯದ 27 ಐಷಾರಾಮಿ ಕಾರುಗಳನ್ನು ಜಪ್ತಿ ಮಾಡಲಾಗಿದೆ. ಪ್ರಕರಣದಲ್ಲಿ ಓರೆಕ್ಸ್‌ ಕಂಪನಿಯ ಸಿಬ್ಬಂದಿ ಕೂಡ ಶಾಮೀಲಾಗಿರುವ ಶಂಕೆ ಇದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

ವೈದ್ಯ ಸೀಟು ಕೊಡಿಸುವುದಾಗಿ 52 ಲಕ್ಷ ವಂಚನೆ

ಓರೆಕ್ಸ್‌ ಆಟೋ ಇನ್‌ಫ್ರಾಸ್ಟ್ರಕ್ಚರ್‌ ಸರ್ವೀಸ್‌ ಲಿ. ಸಂಸ್ಥೆ ಖಾಸಗಿ ಕಂಪನಿ ಹಾಗೂ ಖಾಸಗಿ ವ್ಯಕ್ತಿಗಳಿಗೆ ಬಾಡಿಗೆ ರೂಪದಲ್ಲಿ ವಾಹನವನ್ನು ಕೊಡುತ್ತದೆ. ಆರೋಪಿಗಳಾದ ಮೋಹನ್‌ ಮತ್ತು ಗಿರೀಶ್‌ ಗೌಡ ಓರೆಕ್ಸ್‌ ಕಚೇರಿಗೆ ಬಂದು ಕಂಪನಿಯೊಂದಿಗೆ ಕರಾರು ಪತ್ರ ಮಾಡಿಕೊಂಡು ಕೆಲ ವಾಹನಗಳನ್ನು ಬಾಡಿಗೆಗೆ ಪಡೆದುಕೊಂಡಿದ್ದರು. ಆರೋಪಿಗಳು ಕಾರನ್ನು ಕಂಪನಿಗೆ ಹಿಂತಿರುಗಿಸದಿದ್ದಾಗ, ಓರೆಕ್ಸ್‌ ಕಂಪನಿಯ ಜನರಲ್‌ ಮ್ಯಾನೇಜರ್‌ ಮೋಹನ್‌ ವೇಲು ಆರೋಪಿಗಳ ವಿರುದ್ದ ಬೈಯ್ಯಪ್ಪನಹಳ್ಳಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ನಂತರ ಪ್ರಕರಣ ಸಿಸಿಬಿಗೆ ವರ್ಗಾವಣೆಯಾಗಿತ್ತು.

ಆರೋಪಿಗಳು ನಕಲಿ ದಾಖಲೆ ಸೃಷ್ಟಿಸಿ ಬಾಡಿಗೆಗೆ ಪಡೆದಿದ್ದ ಹಳದಿ ಬೋರ್ಡ್‌ ಕಾರುಗಳನ್ನು ಬಿಳಿ ಬೋರ್ಡ್‌ ನಂಬರ್‌ಗೆ ಬದಲಾವಣೆ ಮಾಡುತ್ತಿದ್ದರು. ಇದೇ ರೀತಿ ಹಲವು ಕಂಪನಿಯ ಕಾರುಗಳನ್ನು ಬಾಡಿಗೆಗೆ ಪಡೆದು ವಂಚನೆ ಮಾಡುತ್ತಿದ್ದರು. ಕಂಪನಿಯ ಕೆಲ ಸಿಬ್ಬಂದಿಯನ್ನು ಬಳಸಿಕೊಂಡು ಕೃತ್ಯ ಎಸಗುತ್ತಿದ್ದರು. ಕಡಿಮೆ ಬೆಲೆಗೆ ಹೊರ ರಾಜ್ಯದ ವ್ಯಕ್ತಿಗಳಿಗೆ ಮಾರಾಟ ಮಾಡಿ, ಬಂದ ಹಣದಲ್ಲಿ ಮೋಜಿನ ಜೀವನ ನಡೆಸುತ್ತಿದ್ದರು. ಪ್ರಕರಣದ ಬಗ್ಗೆ ತನಿಖೆ ಮುಂದುವರೆದಿದೆ ಎಂದು ಸಿಸಿಬಿ ಪೊಲೀಸರು ಮಾಹಿತಿ ನೀಡಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸಹವಾಸ, ಒತ್ತಾಯಕ್ಕೆ ಗಾಂಜಾ ಜಾಲಕ್ಕೆ ವಿದ್ಯಾರ್ಥಿಗಳು!
ಭದ್ರಾವತಿ: ಜೈ ಭೀಮ್ ನಗರದಲ್ಲಿ ಪ್ರೇಮಿಗಳ ವಿಚಾರಕ್ಕೆ ರಕ್ತಪಾತ: ಇಬ್ಬರು ದುರ್ಮರಣ!