Mysuru Crime: ಜಿಂಕೆ ಬೇಟೆಯಾಡಿದ ಕಳ್ಳರು ರೈತರನ್ನು ಕಂಡು ಓಡುವಾಗ ಆಗಿದ್ದೇ ದುರಂತ

Published : Dec 18, 2022, 01:12 PM IST
Mysuru Crime: ಜಿಂಕೆ ಬೇಟೆಯಾಡಿದ ಕಳ್ಳರು ರೈತರನ್ನು ಕಂಡು ಓಡುವಾಗ ಆಗಿದ್ದೇ ದುರಂತ

ಸಾರಾಂಶ

ಜಿಂಕೆ ಬೇಟೆಯಾಡಲು ಬಂದಿದ್ದ ದುಷ್ಕರ್ಮಿಗಳ ಗುಂಪೊಂದು ರೈತರನ್ನು ಕಂಡು ಅಲ್ಲಿಂದ ವೇಗವಾಗಿ ಪರಾರಿಯಾಗುವ ವೇಳೆ ಅವರು ಹೋಗುತ್ತಿದ್ದ ಜೀಪ್‌ ಪಲ್ಟಿಯಾಗಿ ಬಿದ್ದಿದೆ.

ಮೈಸೂರು (ಡಿ.18): ಜಿಂಕೆ ಬೇಟೆಯಾಡಲು ಬಂದಿದ್ದ ದುಷ್ಕರ್ಮಿಗಳ ಗುಂಪೊಂದು ರೈತರನ್ನು ಕಂಡು ಅಲ್ಲಿಂದ ವೇಗವಾಗಿ ಪರಾರಿಯಾಗುವ ವೇಳೆ ಅವರು ಹೋಗುತ್ತಿದ್ದ ಜೀಪ್‌ ಪಲ್ಟಿಯಾಗಿ ಬಿದ್ದಿದೆ. ಜಿಂಕೆ ಮಾಂಸ ಮತ್ತು ಜೀಪನ್ನು ಸ್ಥಳದಲ್ಲಿಯೇ ಬಿಟ್ಟು ಎಸ್ಕೇಪ್‌ ಆಗಿದ್ದಾರೆ.

ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕೋಣನೂರು ಗ್ರಾಮದ ಹೊರವಲಯದಲ್ಲಿ ರಾತ್ರಿ 9.30ರ ಸಮಯದಲ್ಲಿ ಅಪರಿಚಿತರ ಗುಂಪೊಂದು ಎತ್ತಿನ ಮುಂಟಿ ಎಂಬ ಸ್ಥಳದಲ್ಲಿ ಜಿಂಕೆ ಬೇಟೆಯಾಡಿದ್ದಾರೆ. ನಂತರ ಮರವೊಂದಕ್ಕೆ ಸತ್ತಿರುವ ಜಿಂಕೆಯನ್ನು ನೇತು ಹಾಕಿ ಮಾಂಸ ಕತ್ತರಿಸಿ ತುಂಬುತ್ತಿದ್ದರು. ಆದರೆ, ಇದೇ ವೇಳೆ ಕೆಲಸದ ನಿಮಿತ್ತ ಹಲದ ಕಡೆಗೆ ಹೋಗಿದ್ದ ರೈತರನ್ನು ಕಂಡು ದುಷ್ಕರ್ಮಿಗಳಿಗೆ ತೀವ್ರ ಭಯ ಉಂಟಾಗಿದೆ. ಜಿಂಕೆಯ ಮಾಂಸವನ್ನು ಸ್ಥಳದಲ್ಲಿಯೇ ಬಿಟ್ಟು ಅಲ್ಲಿಂದ ಪರಾರಿಯಾಗಲು ಜೀಪ್‌ ಹತ್ತಿಕೊಂಡು ವೇಗವಾಗಿ ಹೊರಟಿದ್ದಾರೆ. ಈ ವೇಳೆ ಜೀಪ್‌ ಆಯತಪ್ಪಿ ಪಲ್ಟಿಯಾಗಿದೆ.

ಕಲಬುರಗಿ: ಜಿಂಕೆ-ನವಿಲು ಮಾಂಸ ಮಾರಾಟ ಗ್ಯಾಂಗ್‌ ಪತ್ತೆ..!

ದುಷ್ಕರ್ಮಿಗಳು ಪರಾರಿ: ಇನ್ನು ತಾವು ಬೇಟೆಯಾಡಿದ್ದ ಜಿಂಕೆಯ ಮಾಂಸವನ್ನು ಬಿಟ್ಟು ಪರಾರಿಯಾಗುವ ವೇಳೆ ಜೀಪು ಪಲ್ಟಿಯಾಗಿ ಗಾಯಗೊಂಡರೂ ಅದನ್ನು ಲೆಕ್ಕಿಸದೇ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಈ ಬಗ್ಗೆ ರೈತರು ಜಿಂಕೆ ಬೇಟೆಗೆ ಬಂದಿದ್ದ ಗುಂಪನ್ನು ನೋಡಿ ಸ್ವಲ್ಪ ಭಯಬೀತರಾಗಿದ್ದಾರೆ. ನಂತರ ಅವರೇ ಓಡಿ ಹೋಗಿದ್ದನ್ನು ನೋಡಿ ಸ್ಥಳಕ್ಕೆ ಹೋದಾಗ ಅಲ್ಲಿ ಜಿಂಕೆಯ ಮಾಂಸ ಇರುವುದು ಕಂಡುಬಂದಿದೆ. ಕೂಡಲೇ ಪೊಲೀಸರಿಗೆ ದೂರು ನಿಡಿದ್ದಾರೆ. ಸ್ಥಳಕ್ಕೆ ಕವಲಂದೆ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಬಂದು ಸ್ಥಳ ಪರಿಶೀಲನೆ ನಡೆಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು