ಚಾಮರಾಜನಗರ: ಕಾಡಿಗೆ ಅಕ್ರಮ ಪ್ರವೇಶಿಸಿದ್ದ ವೈದ್ಯ ಸೇರಿ ಮೂವರ ಬಂಧನ

Published : Oct 06, 2022, 09:30 PM IST
ಚಾಮರಾಜನಗರ: ಕಾಡಿಗೆ ಅಕ್ರಮ ಪ್ರವೇಶಿಸಿದ್ದ ವೈದ್ಯ ಸೇರಿ ಮೂವರ ಬಂಧನ

ಸಾರಾಂಶ

ಏರ್‌ಗನ್‌ ನಾಡಬಂದೂಕು ವಶ, ಮಹದೇಶ್ವರ ಬೆಟ್ಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು

ಹನೂರು(ಅ.06):  ನಾಡ ಬಂದೂಕು ಮತ್ತು ಹೈಫ್ರೆಜರ್‌ ಏರ್‌ಗನ್‌ ಜೊತೆ ಅಕ್ರಮವಾಗಿ ಅರಣ್ಯದೊಳಗೆ ಪ್ರವೇಶಿಸುತ್ತಿದ್ದ ಮೂವರು ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ, ಮಹದೇಶ್ವರಬೆಟ್ಟಪೊಲೀಸರು ವಶಕ್ಕೆ ಒಪ್ಪಿಸಿದ ಘಟನೆ ಗೋಪಿನಾಥಂನ ಆಲಂಬಾಡಿಯ ಬಳಿ ನಡೆದಿದೆ. ಹೊಗೇನಕಲ್‌ ಫಾಲ್ಸ್‌ನ ಮಾರಿಮುತ್ತು, ಪೆನ್ನಗರಂ ತಾಲೂಕಿನ ನಲ್ಲಾಂಪಟ್ಟಿಗ್ರಾಮದ ವೃತ್ತಿಯಲ್ಲಿ ವೈದ್ಯ ಕವಿನ್‌ಕುಮಾರ್‌ ಮತ್ತು ಈತನ ಸ್ನೇಹಿತ ವಿಘ್ನೇಶ್‌ ಎಂಬುವರೆ ಬಂಧಿತ ಆರೋಪಿಗಳಾಗಿದ್ದಾರೆ.

ಗೋಪಿನಾಥಂನ ಆಲಂಬಾಡಿ ಗ್ರಾಮದ ಬಳಿ ಅಕ್ರಮ ಕಾಡು ಪ್ರವೇಶಿಸಿ, ಕೈಯಲ್ಲಿ ಬಂದೂಕು ಹಿಡಿದು ಅನುಮಾನಾಸ್ಪದ ಓಡಾಡುತ್ತಿದ್ದ ಇವರನ್ನು ಅರಣ್ಯ ಅಧಿಕಾರಿಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದ ಮೂವರನ್ನು ಸೆರೆ ಹಿಡಿದು ಅವರ ಬಳಿ ಇದ್ದಂತಹ ಬಂದೂಕು ವಶಕ್ಕೆ ಪಡೆದುಕೊಂಡಿದ್ದಾರೆ.

Shivamogga: ಲಾಂಗು-ಮಚ್ಚುಗಳೊಂದಿಗೆ ವಿಡಿಯೋ ಚಿತ್ರೀಕರಿಸಿದ ಯುವಕನ ಬಂಧನ

ಘಟನೆಯ ವಿವರ: 

ಮಂಗಳವಾರ ತಡರಾತ್ರಿ ಮೂವರ ತಂಡ ಬಂದೂಕು ಸಮೇತ ಕಾಡೊಳಗೆ ನುಸುಳುತ್ತಿದ್ದ ವೇಳೆ ಕ್ಯಾಮೆರಾಗೆ ಸಿಕ್ಕ ಮಾಹಿತಿಯಿಂದ ಎಚ್ಚೆತ್ತುಕೊಂಡ ಅರಣ್ಯ ಅಧಿಕಾರಿಗಳು ತಕ್ಷಣ ಕಾರ್ಯ ಪ್ರವೃತ್ತರಾಗಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿವಿಧೆಡೆ ಅಡಗಿಸಿಟ್ಟಿದ್ದ ಬಂದೂಕು ಸಮೇತ ಬಂಧಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಪ್ರಕರಣ ದಾಖಲು: 

ಮೂವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡ ಅರಣ್ಯಾಧಿಕಾರಿಗಳು ಹೆಚ್ಚಿನ ವಿಚಾರಣೆಗೆ ಮಹದೇಶ್ವರ ಬೆಟ್ಟಪೊಲೀಸರ ವಶಕೆ ನೀಡಿ, ಅರಣ್ಯಾಧಿಕಾರಿಗಳು ನೀಡಿದ ದೂರಿನ ಅನ್ವಯ ಮಹದೇಶ್ವರಬೆಟ್ಟಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಆರಂಭಿಸಿದ್ದಾರೆ. ದಾಳಿಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳಾದ ಎಸಿಎಫ್‌ ಅಂಕರಾಜ್‌, ವಲಯ ಅರಣ್ಯ ಅಧಿಕಾರಿ ಲೋಕೇಶ್‌, ಡಿಆರ್‌ಎಫ್‌ಒ ದಿನೇಶ್‌ ಮತ್ತು ಸಿಬ್ಬಂದಿ ಇದ್ದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ
ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?