ಲಾರಿ- ಕಾರು ನಡುವೆ ಅಪಘಾತ, ರಂಜಾನ್ ಹಬ್ಬದ ದಿನವೇ ದುರಂತ ಅಂತ್ಯ ಕಂಡ ಕುಟುಂಬ

Published : May 03, 2022, 10:37 PM IST
ಲಾರಿ- ಕಾರು ನಡುವೆ ಅಪಘಾತ, ರಂಜಾನ್ ಹಬ್ಬದ ದಿನವೇ ದುರಂತ ಅಂತ್ಯ ಕಂಡ ಕುಟುಂಬ

ಸಾರಾಂಶ

* ಲಾರಿ- ಕಾರು ನಡುವೆ ಭೀಕರ ಅಪಘಾತ * ಒಂದೇ ಕುಟುಂಬದ ಮೂವರು ಬಲಿ * ರಂಜಾನ್ ಹಬ್ಬದ ದಿನವೇ ದುರಂತ ಕಂಡ ಕುಟುಂಬ

ತುಮಕೂರು, (ಮೇ.03): :  ಲಾರಿ- ಕಾರು ನಡುವೆ ಸಂಭವಿಸಿದ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸಾವನಪ್ಪಿದ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಬಿಸೇಗೌಡನದೊಡ್ಡಿಯಲ್ಲಿ ನಡೆದಿದೆ. 

ರಂಜಾನ್ ದಿನವೇ ಮುಸ್ಲಿಂ ಕುಟುಂಬದಲ್ಲಿ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ಚನ್ನಪಟ್ಟಣ ಮೂಲದ ಸೈಯದ್ ಮೊಹಮ್ಮದ್ ನಜ್ಮಿ (42) ನಾಜೀಯಾ (30), ಸೈಯದ್ ಹಸ್ಸಿ (8) ಮೃತ ದುರ್ದೈವಿಗಳು.‌ ಮತ್ತೊಂದು ಮಗು ಕಾಸಿ (6) ಗಂಭೀರ ಗಾಯಗೊಂಡಿದೆ. ಗಾಯಾಳು ಕಾಸಿಯನ್ನ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಪ್ರಿಯಕರನೊಂದಿಗೆ ಸರಸಕ್ಕೆ ಅಡ್ಡಿಯಾಗಿದ್ದ ಗಂಡನ ಮರ್ಡರ್: ಕೊಲೆ ಮಾಡಿ ನಾಟಕ ಮಾಡಿದ್ದಳು ದಿಲ್ಲಿ ರಾಣಿ‌

ಸೈಯದ್ ಮೊಹಮ್ಮದ್ ನಜ್ಮಿ  ರಂಜಾನ್ ಹಬ್ಬ ಮುಗಿಸಿ ಕುಟುಂಬ‌ ಸಮೇತ ತನ್ನ ಪತ್ನಿಯ ತವರೂರು ಭದ್ರಾವತಿಗೆ ಕಾರಿನಲ್ಲಿ ತೆರಳುತ್ತಿದ್ರು. ಈ ವೇಳೆ ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗದ ಬಿಸೇಗೌಡನ ದೊಡ್ಡಿ ಬಳಿ‌ ಬರುತ್ತಿದ್ದಂತೆ ಎದುರಿಗೆ ಬರುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಮೂವರು ಸ್ಥಳದಲ್ಲೇ ಸಾವನಪ್ಪಿದ್ದಾರೆ. ಸ್ಥಳಕ್ಕೆ ಅಮೃತೂರು ಸಿಪಿಐ ಹಾಗೂ ಹುಲಿಯೂರುದುರ್ಗ ಪಿಎಸ್ ಐ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು