ಬಸವಕಲ್ಯಾಣ: ಹಾಡುಹಗಲೇ ಮಹಿಳೆಯ ಚಿನ್ನದ ಸರ ಕಿತ್ತು ಖದೀಮರು ಪರಾರಿ, ಬೆಚ್ಚಿಬಿದ್ದ ಜನತೆ

By Girish GoudarFirst Published Oct 2, 2024, 9:10 PM IST
Highlights

ಬಸವಕಲ್ಯಾಣ ನಗರದ ಪಾರ್ವತಿ ಕ್ಲೀನಿಕ್ ಬಳಿ‌ ಮಹಿಳೆ ಒಬ್ಬರೆ ಹೋಗುತ್ತಿರೋದನ್ನ ಗಮನಿಸಿದ ಖದೀಮರು ಬೈಕ್ ಮೇಲೆ ಬಂದು 16 ಗ್ರಾಂ ತೂಕದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಕಳ್ಳರಿಗಾಗಿ ಬಲೆ ಬೀಸಿದ ಪೊಲೀಸರು 

ಬೀದರ್(ಅ.02):  ಹಾಡಹಗಲೇ ಮಹಿಳೆಯೊಬ್ಬಳ ಕತ್ತಿನಲ್ಲಿದ್ದ ಸರ ಕಿತ್ತುಕೊಂಡ ಹೋದ ಘಟನೆ ಬೀದರ್ ಜಿಲ್ಲೆ ಬಸವಕಲ್ಯಾಣ ನಗರದಲ್ಲಿ ಇಂದು(ಬುಧವಾರ) ನಡೆದಿದೆ.  ನಗರದ ಪಾರ್ವತಿ ಕ್ಲೀನಿಕ್ ಬಳಿ‌ ಮಹಿಳೆ ಒಬ್ಬರೆ ಹೋಗುತ್ತಿರೋದನ್ನ ಗಮನಿಸಿದ ಖದೀಮರು ಬೈಕ್ ಮೇಲೆ ಬಂದು 16 ಗ್ರಾಂ ತೂಕದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ. 

ಬಸವಕಲ್ಯಾಣ ತಾಲೂಕಾ ಪಂಚಾಯತ್ ಸಭಾಂಗಣದಲ್ಲಿ ಎರಡು ದಿನಗಳಿಂದ ಗ್ರಂಥಪಾಲಕರಿಗೆ ತರಬೇತಿ ನಡೆಯುತ್ತಿದ್ದು, ತರಬೇತಿಗಾಗಿ ಆಗಮಿಸಿದ್ದ ಉಜಳಂಬ ಗ್ರಾಮದಲ್ಲಿ ಗ್ರಂಥಪಾಲಕಿ ಕಿಟ್ಟಾ ಗ್ರಾಮದ ಮಾಲಾಶ್ರೀ ಎಂಬ ಮಹಿಳೆ ಸರವನ್ನ ಖದೀಮರು ಕದ್ಯೊಯ್ದಿದ್ದಾರೆ. 

Latest Videos

ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಆಸೆ ತೋರಿಸಿ ₹28.40 ಲಕ್ಷ ಪಂಗನಾಮ

ಮಹಿಳೆ ಬಸವಕಲ್ಯಾಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಖದೀಮರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಇನ್ನು ಬೆಳಿಗ್ಗೆ 10 ಗಂಟೆಗೆ ಈ ಘಟನೆ ನಡೆದಿದ್ದು, ನಗರವಾಸಿಗಳು ಆತಂಕಕೊಳಗಾಗಿದ್ದು, ಕೂಡಲೇ ಖದೀಮರನ್ನ ಬಂಧಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.

click me!