
ಬೆಂಗಳೂರು(ಜ.31): ಪರಿಚಿತರ ಮನೆಯಲ್ಲಿ ಅರ್ಧ ಕೆ.ಜಿ. ಚಿನ್ನಾಭರಣ ಕದ್ದು ಎರಡು ವರ್ಷದ ಬಳಿಕ ಈಜು ತರಬೇತುದಾರನೊಬ್ಬ ಕೆ.ಪಿ.ಅಗ್ರಹಾರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಮಾಗಡಿ ರಸ್ತೆಯ ಕೆ.ಪಿ.ಅಗ್ರಹಾರ ರೇಣುಕಾ ಪ್ರಸಾದ್ ಬಂಧಿತನಾಗಿದ್ದು, ಆರೋಪಿಯಿಂದ 20 ಲಕ್ಷ ಮೌಲ್ಯದ 506 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ತನ್ನ ವಿದ್ಯಾರ್ಥಿ ಸಿರಿಗಂಧ ಎಂಬುವರ ಮನೆಯಲ್ಲಿ ಮೊಬೈಲ್ ಕಳ್ಳತನವಾಗಿತ್ತು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಆ ದಿನ ಮನೆಗೆ ಬಂದಿದ್ದ ಈಜು ತರಬೇತುದಾರ ರೇಣುಕಾ ಪ್ರಸಾದ್ನನ್ನು ಶಂಕೆ ಮೇರೆಗೆ ವಶಕ್ಕೆ ಪಡೆದು ವಿಚಾರಿಸಿದಾಗ ಸತ್ಯ ಬಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಮಂತ್ರಣ ನೀಡಲು ಬಂದು ಕಾರು ಕಳೆದುಕೊಂಡರು!
ಕೆ.ಪಿ.ಅಗ್ರಹಾರದಲ್ಲಿ ತನ್ನ ಕುಟುಂಬದ ಜತೆ ನೆಲೆಸಿದ್ದ ರೇಣುಕಾ ಪ್ರಸಾದ್, ವಿಜಯನಗರದ ಈಜು ಕೋಳದಲ್ಲಿ ತರಬೇತುದಾರನಾಗಿದ್ದ. 3 ವರ್ಷಗಳಿಂದ ಈಜು ಕಲಿಯಲು ಬರುತ್ತಿದ್ದ ಸಿರಿಗಂಧನ ಪರಿಚಯವಾಗಿತ್ತು. ಬಳಿಕ ಆತನ ಕುಟುಂಬದೊಂದಿಗೆ ರೇಣುಕಾ ಪ್ರಸಾದ್ಗೆ ಆತ್ಮೀಯತೆ ಬೆಳೆದಿದೆ. ಕೆ.ಪಿ.ಅಗ್ರಹಾರದಲ್ಲಿದ್ದ ವಿದ್ಯಾರ್ಥಿ ಮನೆಗೆ ಆಗಾಗ್ಗೆ ಆರೋಪಿ ಹೋಗಿ ಬರುತ್ತಿದ್ದ. 2 ವರ್ಷಗಳ ಹಿಂದೆ ಅವರ ಮನೆಯಲ್ಲಿ 20 ಲಕ್ಷ ಮೌಲ್ಯದ ಆಭರಣ ಕದ್ದಿದ್ದ. ಕೃತ್ಯ ನಡೆದ ಕೆಲ ದಿನಗಳ ಮುನ್ನ ಅವರ ಕುಟುಂಬ ತಮಿಳುನಾಡಿಗೆ ಪ್ರವಾಸ ಹೋಗಿತ್ತು. ಹೀಗಾಗಿ ಪ್ರವಾಸದ ವೇಳೆ ಆಭರಣ ಕಳೆದುಕೊಂಡಿರಬಹುದು ಎಂದು ಭಾವಿಸಿ ಸುಮ್ಮನಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಫೆ.25ರಂದು ಸಿರಿಗಂಧನ ಮನೆಗೆ ರೇಣುಕಾ ಪ್ರಸಾದ್ ಹೋಗಿದ್ದ. ಅದೇ ದಿನ ಅವರ ಮನೆಯಲ್ಲಿ ಮೊಬೈಲ್ ಕಳವಾಗಿತ್ತು. ಆದರೆ ಆ ದಿನ ರೇಣುಕಾ ಪ್ರಸಾದ್ ಹೊರತುಪಡಿಸಿ ಸಿರಿಗಂಧನ ಮನೆಗೆ ಹೊರಗಿನವರು ಯಾರೂ ಬಂದಿರಲಿಲ್ಲ. ಇದರಿಂದ ಆತನ ಮೇಲೆ ಶಂಕೆಗೊಂಡ ಕುಟುಂಬದವರು, ಪೊಲೀಸರಿಗೆ ದೂರು ನೀಡಿದ್ದರು. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಆಭರಣ ಕಳ್ಳತನವೂ ಬಯಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ