2 ಪುಟಗಳ ಸೂಸೈಡ್‌ ನೋಟ್‌ ಬರೆದು ವಿದ್ಯಾರ್ಥಿನಿ ಆತ್ಮಹತ್ಯೆ, ರಕ್ತದಲ್ಲಿ ಬರೆದಿತ್ತು ಆ ಒಂದು ವಾಕ್ಯ!

By Suvarna NewsFirst Published Apr 12, 2022, 9:57 AM IST
Highlights

* ಉತ್ತರ ಪ್ರದೇಶದ ಬಾಂದಾ ಜಿಲ್ಲೆಯ ಯುವಕರ ಚೇಷ್ಟೆಯಿಂದ ಬೇಸತ್ತ ಇಂಟರ್ ಮೀಡಿಯೇಟ್ ವಿದ್ಯಾರ್ಥಿನಿ 

* ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ

* ಎರಡು ಪುಟಗಳ ಸೂಸೈಡ್ ನೋಟ್ ಪತ್ತೆ

ಲಕ್ನೋ(ಏ.12): ಉತ್ತರ ಪ್ರದೇಶದ ಬಾಂದಾ ಜಿಲ್ಲೆಯ ಯುವಕರ ಚೇಷ್ಟೆಯಿಂದ ಬೇಸತ್ತ ಇಂಟರ್ ಮೀಡಿಯೇಟ್ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ವಿದ್ಯಾರ್ಥಿನಿಯ ಶವದ ಬಳಿ ಎರಡು ಪುಟಗಳ ಸೂಸೈಡ್ ನೋಟ್ ಪತ್ತೆಯಾಗಿದೆ. ಇದರಲ್ಲಿ ಬಾಲಕಿ ಯುವಕನ ಹೆಸರನ್ನೂ ಬಹಿರಂಗಪಡಿಸಿದ್ದಾಳೆ. ಯುವಕನ ಚೇಷ್ಟೆ ಹಾಗೂ ಬ್ಲಾಕ್‌ಮೇಲಿಂಗ್‌ನಿಂದಾಗಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಈ ಪ್ರಕರಣದಲ್ಲಿ ಆತ್ಮಹತ್ಯೆ ಪತ್ರದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದುವರೆಗೂ ಆರೋಪಿಯನ್ನು ಬಂಧಿಸಿಲ್ಲ. ಬಂದಾ ಜಿಲ್ಲೆಯ ದೇಹತ್ ಕೊಟ್ವಾಲಿ ವ್ಯಾಪ್ತಿಯ ಕರ್ಬೈ ಗ್ರಾಮದಲ್ಲಿ ಈ ಘಟನೆ ನಡೆದಿದೆ. ರಾಮಪ್ರಸಾದ್ ಮಗಳು 19 ವರ್ಷದ ರೋಶನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈಕೆ ಗ್ರಾಮದ ಇಂಟರ್ ಕಾಲೇಜಿನಲ್ಲಿ 12ನೇ ತರಗತಿ ವಿದ್ಯಾರ್ಥಿನಿಯಾಗಿದ್ದಾಳೆ. ಕೋಣೆಗೆ ಬೀಗ ಜಡಿದು ನೈಲಾನ್ ಹಗ್ಗದಿಂದ ನೇಣು ಬಿಗಿದುಕೊಂಡಿದ್ದಾಳೆ.

Latest Videos

ಎರಡು ಪುಟಗಳ ಸೂಸೈಡ್ ನೋಟ್ ಪತ್ತೆ

ಬಹಳ ಹೊತ್ತಿನವರೆಗೆ ಬಾಗಿಲು ಮುಚ್ಚಿದ್ದು, ಮನೆಯವರು ಬಾಗಿಲು ತೆರೆಯಲು ಯತ್ನಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಯಿತು. ನಂತರ ಸ್ಥಳಕ್ಕಾಗಮಿಸಿದ ಗ್ರಾಮಾಂತರ ಪೊಲೀಸ್ ಉಪನಿರೀಕ್ಷಕ ಭೂಪೇಂದ್ರ ಸಿಂಗ್ ಅವರು ಕೊಠಡಿಯನ್ನು ಪರಿಶೀಲಿಸಿದರು ಮತ್ತು ಎರಡು ಪುಟಗಳ ಸೂಸೈಡ್ ನೋಟ್ ಸಿಕ್ಕಿತು. ಈ ಪತ್ರವನ್ನು ಸಹೋದರಿಯನ್ನು ಉದ್ದೇಶಿಸಿ ಬರೆಯಲಾಗಿದೆ. ಇದರಲ್ಲಿ ಯುವಕನೊಬ್ಬ ಬ್ಲಾಕ್‌ಮೇಲ್ ಮಾಡಿರುವ ಬಗ್ಗೆ ಉಲ್ಲೇಖಿಸಿದ್ದಾಳೆ. ಆತ್ಮಹತ್ಯೆ ಪತ್ರದ ಕೊನೆಯಲ್ಲಿ ತಾಯಿಯನ್ನು ನೋಡಿಕೊಳ್ಳಿ ಎಂದು ರಕ್ತದಲ್ಲಿ ಬರೆಯಲಾಗಿತ್ತು. ಅದೇ ವೇಳೆಗೆ ಪೊಲೀಸರು ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ತಹ್ರೀರ್ ಆಧಾರದ ಮೇಲೆ ಪ್ರಕರಣ ದಾಖಲು

ಕಾಲೇಜಿಗೆ ಹೋಗುತ್ತಿದ್ದ ರೋಶನಿಗೆ ಗ್ರಾಮದ ಯುವಕನೊಬ್ಬ ಕಿರುಕುಳ ನೀಡುತ್ತಿದ್ದ ಎಂದು ಮೃತನ ಸಹೋದರ ತಿಳಿಸಿದ್ದಾರೆ. ಮೃತ ರೋಶನಿ ನಾಲ್ವರು ಸಹೋದರಿಯರಲ್ಲಿ ಕಿರಿಯವಳು. ಸೂಸೈಡ್ ನೋಟ್‌ ಅನ್ವಯ ಯುವಕನ ಆರೋಪಿಯಾಗಿದ್ದಾನೆ ಎಂದು ಸರ್ಕಲ್ ಆಫೀಸರ್, ನಗರ ರಾಕೇಶ್ ಕುಮಾರ್ ಸಿಂಗ್ ಹೇಳಿದ್ದಾರೆ. ತಹ್ರೀರ್ ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಮರಣೋತ್ತರ ಪರೀಕ್ಷೆಯ ವರದಿಗೂ ಕಾಯಲಾಗುತ್ತಿದೆ. ತನಿಖೆಯ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು.

ಎಲ್ಲವನ್ನೂ ಸಹಿಸಿಕೊಂಡ ಯುವತಿ ಯಾರ ಬಳಿಯೂ ಬಾಯ್ಬಿಡಲಿಲ್ಲ

ಯುವಕನೊಬ್ಬ ಕಿರುಕುಳ ನೀಡುತ್ತಿದ್ದ ವಿಚಾರವನ್ನು ವಿದ್ಯಾರ್ಥಿನಿ ಯಾರ ಬಳಿಯೂ ಹೇಳಿಕೊಂಡಿರಲಿಲ್ಲ. ರೋಶನಿ ಯುವಕನ ಕೃತ್ಯವನ್ನು ಸಹಿಸುತ್ತಲೇ ಬಂದಳು, ಮನೆಯವರಿಗೂ ಈ ಬಗ್ಗೆ ತಿಳಿಸಲಿಲ್ಲ. ಆದರೆ, ಅದೇಗೋ ಮನೆಯವರಿಗೆ ತಿಳಿದಿದ್ದು, ಇದೆಲ್ಲವನ್ನೂ ಬಿಡುವಂತೆ ಮನೆಯವರು ಹೇಳಿದ್ದರು. ಆದರೆ, ಯುವಕ ಒಪ್ಪಲಿಲ್ಲ. ಮೃತನ ಸಹೋದರ ಕೂಡ ಈ ಸತ್ಯವನ್ನು ಒಪ್ಪಿಕೊಂಡಿದ್ದಾನೆ.

click me!