
ಹರ್ಯಾಣ(ಏ. 22) ಹರ್ಯಾಣದಿಂದ ವಿಚಿತ್ರ ಪ್ರಕರಣವೊಂದು ವರದಿಯಾಗಿದೆ. ಹರಿಯಾಣದ ಜಿಂದ್ನಲ್ಲಿ 1,700 ಡೋಸ್ ಕೊರೋನಾ ಲಸಿಕೆ ಕದ್ದು ಪರಾರಿಯಾಗಿದ್ದವ ಬ್ಯಾಗ್ ಹಿಂದಕ್ಕೆ ತಂದುಕೊಟ್ಟಿದ್ದಾನೆ.
ಚೀಲ ಹಿಂದಕ್ಕೆ ಕೊಟ್ಟಿದ್ದು ಅಲ್ಲದೆ ಕ್ಷಮೆ ಕೇಳಿ ಚೀಟಿಯೊಂದನ್ನು ಬರೆದಿದ್ದಾನೆ. "ಕ್ಷಮಿಸಿ, ಇದು ಕರೋನಾಗೆ ಔಷಧಿಗಳೆಂದು ನನಗೆ ತಿಳಿದಿರಲಿಲ್ಲ ಎಂದು ಹೇಳಿದ್ದಾನೆ.
ಮನೆ ಮುಂದೆ ಕಾರು ನಿಲ್ಲಿಸುವ ಬೆಂಗಳೂರಿಗರೇ ಎಚ್ಚರ!
ಜಿಂದ್ ಜನರಲ್ ಆಸ್ಪತ್ರೆಯಿಂದ ಕಳ್ಳ ಚೀಲ ಕಳ್ಳತನ ಮಾಡಿದ್ದ.ಪೊಲೀಸರು ಆರೋಪಿಯ ಹುಡುಕಾಟವನ್ನು ಶುರು ಮಾಡಿದ್ದರು. ಗುರುವಾರ ಮಧ್ಯಾಹ್ನ ಸಿವಿಲ್ ಲೈನ್ಸ್ ಪೊಲೀಸ್ ಠಾಣೆ ಹೊರಗಿನ ಟೀ ಶಾಪ್ ಗೆ ಮೆಡಿಸಿನ್ ಇದ್ದ ಬ್ಯಾಗನ್ನು ಕಳ್ಳ ತಲುಪಿಸಿದ್ದಾನೆ. ಪೊಲೀಸರಿಗೆ ಇದು ಆಹಾರದ ಪೊಟ್ಟಣ ತಲುಪಿಸಿ ಎಂದು ಕೊಟ್ಟು ಹೋಗಿದ್ದಾನೆ.
ಹರ್ಯಾಣದಲ್ಲಿಯೂ ಕೊರೋನಾ ಅಬ್ಬರ ಮುಂದುವರಿದಿದ್ದು ಎಲ್ಲ ಅಂಗಡಿಗಳನ್ನು ಸಂಜೆ ಆರಕ್ಕೆ ಕ್ಲೋಸ್ ಮಾಡಲು ಸೂಚಿಸಲಾಗಿದೆ. ಕರ್ನಾಟಕದಲ್ಲಿಯೂ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದ್ದು ವಾಣಿಜ್ಯ ಚಟುವಟಿಕೆಗಳಿಗೆ ಬ್ರೇಕ್ ಹಾಕಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ