ರಾಯ​ಚೂರು: ಹಣ​ಕ್ಕಾಗಿ ತಂದೆಯನ್ನೇ ಕೊಂದು ರಸ್ತೆ ಪಕ್ಕ ಹೂತಿಟ್ಟ ಪಾಪಿ ಮಗ..!

Published : Jul 20, 2023, 12:30 AM IST
ರಾಯ​ಚೂರು: ಹಣ​ಕ್ಕಾಗಿ ತಂದೆಯನ್ನೇ ಕೊಂದು ರಸ್ತೆ ಪಕ್ಕ ಹೂತಿಟ್ಟ ಪಾಪಿ ಮಗ..!

ಸಾರಾಂಶ

ರಾಯಚೂರು ತಾಲೂಕಿನ ವಡ್ಲೂರು ಗ್ರಾಮದಲ್ಲಿ ಘಟನೆ ನಡೆದಿದೆ. ಪ್ರಕರಣ ತಡ​ವಾಗಿ ಬೆಳ​ಕಿಗೆ ಬಂದಿದೆ. ವಡ್ಲೂರು ಗ್ರಾಮದ ನಿವಾಸಿ ಶಿವ​ನಪ್ಪ ಹತ್ಯೆಯಾದ ತಂದೆ​. ಈತನ ಮಗ ಈರ​ಣ್ಣ ಎಂಬಾತ ಕೊಲೆಗಾರ.

ರಾಯ​ಚೂರು(ಜು.20): ಭೂಸ್ವಾಧೀನ ಪರಿ​ಹಾರದ ಹಣ​ಕ್ಕಾಗಿ ಮಗ​ನೇ ತಂದೆ​ಯನ್ನು ಕೊಲೆ ಮಾಡಿ, ಮೃತದೇಹವನ್ನು ಗುಟ್ಟಾಗಿ ಹೂತಿಟ್ಟ ಘಟನೆ ರಾಯಚೂರು ತಾಲೂಕಿನ ವಡ್ಲೂರು ಗ್ರಾಮದಲ್ಲಿ ತಡ​ವಾಗಿ ಬೆಳ​ಕಿಗೆ ಬಂದಿದೆ. ವಡ್ಲೂರು ಗ್ರಾಮದ ನಿವಾಸಿ ಶಿವ​ನಪ್ಪ (70) ಹತ್ಯೆಯಾದ ದುರ್ದೈವಿ ತಂದೆ​. ಈತನ ಮಗ ಈರ​ಣ್ಣ ಎಂಬಾತ ಕೊಲೆಗಾರ.

ಭಾರತ್‌ ಮಾಲಾ ರಾಷ್ಟ್ರೀಯ ಹೆದ್ದಾರಿ ಯೋಜನೆಗಾಗಿ ಇವರು ತಮ್ಮ ಜಮೀನು ನೀಡಿದ್ದರು. ಇದರಿಂದ ಬಂದ ಪರಿ​ಹಾ​ರದ ಹಣ​ಕ್ಕಾಗಿ ತಂದೆ ಹಾಗೂ ಮಗನ ನಡುವೆ 15 ದಿನಗಳ ಹಿಂದೆ ಗಲಾ​ಟೆ​ಯಾ​ಗಿತ್ತು. ಈ ವೇಳೆ, ಕೋಪ​ಗೊಂಡ ಈರಣ್ಣ, ತಂದೆ ತಲೆಗೆ ಕಬ್ಬಿ​ಣ​ದ ರಾಡ್‌ನಿಂದ ಹೊಡೆದು ಹತ್ಯೆ ಮಾಡಿದ್ದ. ನಂತರ, ಯಾರಿಗೂ ಅನು​ಮಾನ ಬಾರ​ದಂತೆ ಶವ​ವನ್ನು ಹೆದ್ದಾರಿ ಪಕ್ಕದ ಮಣ್ಣಲ್ಲಿ ಹೂತಿ​ಟ್ಟಿದ್ದ. ನಂತರ, ಮನೆಗೆ ಬಂದು ತಂದೆ ಕಾಣೆಯಾಗಿದ್ದಾನೆ ಎಂಬ ನಾಟಕವಾಡಿದ್ದ. ತಾಯಿ ಜೊತೆ ತಾನೇ ಪೊಲೀಸ್‌ ಠಾಣೆಗೆ ಹೋಗಿ, ತಂದೆ ಕಾಣೆ​ಯಾ​ಗಿ​ದ್ದಾ​ನೆಂದು ದೂರು ಕೊಟ್ಟಿ​ದ್ದ.

Bengaluru : ಜನ್ಮವಿತ್ತ ತಂದೆ-ತಾಯಿಯನ್ನೇ ಕೊಲೆಗೈದು ಪರಾರಿಯಾದ ಸೈಕೋ ಪುತ್ರ

ಮೃತನ ಸಹೋದರರು ಅನುಮಾನಗೊಂಡು ಈತನನ್ನು ವಿಚಾರಿಸಿದಾಗ ಹೆದರಿ ಸತ್ಯ ಬಾಯಿಬಿಟ್ಟ. ಬಳಿಕ, ತಾನೇ ಪೊಲೀಸರಿಗೆ ಶರಣಾಗಿದ್ದಾನೆ. ಪ್ರಕರಣದ ತನಿಖೆ ನಡೆಯುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕ್ಯಾಸ್ಟ್ರೋಲ್ ಬ್ರಾಂಡ್‌ನ ನಕಲಿ ಎಂಜಿನ್ ಆಯಿಲ್ ಉತ್ಪಾದನೆ ಮಾಡುತ್ತಿದ್ದ ಘಟಕದ ಮೇಲೆ ದಾಳಿ
ಕೋಲಾರ: ಅಪ್ಪ- ಅಮ್ಮನ ವಿಚ್ಚೇದನಕ್ಕೆ ಮನನೊಂದು 26 ವರ್ಷದ ಪುತ್ರ ಆತ್ಮ*ಹತ್ಯೆ!