ಕಲಬುರಗಿ: ತಂದೆಗೆ ಚಾಕುವಿನಿಂದ ತಿವಿದ ಮಗ

Published : Jul 19, 2023, 11:00 PM IST
ಕಲಬುರಗಿ: ತಂದೆಗೆ ಚಾಕುವಿನಿಂದ ತಿವಿದ ಮಗ

ಸಾರಾಂಶ

ಆಳಂದ ಚೆಕ್‌ಪೋಸ್ಟ್‌ ಹತ್ತಿರದ ಶಿವಲಿಂಗೇಶ್ವರ ಕಾಲೋನಿಯ ದಿಲೀಪ್‌ ರಾಠೋಡ್‌ ಎಂಬುವವರಿಗೆ ಅವರ ಹಿರಿಯ ಮಗ ಸುರೇಶ ರಾಠೋಡ ಚಾಕುವಿನಿಂದ ಕೈಗೆ ತಿವಿದು ಪರಾರಿಯಾಗಿದ್ದಾನೆ. 

ಕಲಬುರಗಿ(ಜು.19): ಹಣ ನೀಡುವಂತೆ ತಂದೆಗೆ ಪೀಡಿಸಿದ ಮಗನೊಬ್ಬ ಹಣ ನೀಡದೇ ಇದ್ದಾಗ ತಂದೆಗೆ ಚಾಕುವಿನಿಂದ ಕೈಗೆ ತಿವಿದು ಪರಾರಿಯಾಗಿರುವ ಘಟನೆ ನಗರದಲ್ಲಿ ನಡೆದಿದೆ. 

ನಗರದ ಆಳಂದ ಚೆಕ್‌ಪೋಸ್ಟ್‌ ಹತ್ತಿರದ ಶಿವಲಿಂಗೇಶ್ವರ ಕಾಲೋನಿಯ ದಿಲೀಪ್‌ ರಾಠೋಡ್‌ ಎಂಬುವವರಿಗೆ ಅವರ ಹಿರಿಯ ಮಗ ಸುರೇಶ ರಾಠೋಡ ಚಾಕುವಿನಿಂದ ಕೈಗೆ ತಿವಿದು ಪರಾರಿಯಾಗಿದ್ದಾನೆ. 

ಕಲಬುರಗಿ: ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ಜೀವ ಬೆದರಿಕೆ

ತರಕಾರಿ ವ್ಯಾಪಾರಿಯಾಗಿರುವ ದಿಲೀಪ್‌ ರಾಠೋಡ್‌ ಅವರ ಹಿರಿಯ ಮಗ ಸುರೇಶ ರಾಠೋಡ್‌ 15 ಸಾವಿರ ರುಪಾಯಿ ನೀಡುವಂತೆ ಪೀಡಿಸಿದ್ದಾನೆ. ಆಗ ಅವರು ಹಣ ನೀಡಲು ನಿರಾಕರಿಸಿದಾಗ ಕುಪಿತನಾದ ಸುರೇಶ ಚಾಕುವಿನಿಂದ ಕೈಗೆ ತಿವಿದು ಪರಾರಿಯಾಗಿದ್ದಾನೆ. 

ಈ ಸಂಬಂಧ ಸುರೇಶ ರಾಠೋಡ್‌ ಮತ್ತು ಇದಕ್ಕೆ ಪ್ರಚೋದನೆ ನೀಡಿದ ರವಿ ರಾಠೋಡ್‌ ವಿರುದ್ಧ ದಿಲೀಪ್‌ ರಾಠೋಡ್‌ ಅವರು ಚೌಕ್‌ ಪೊಲೀಸ್‌ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕ್ಯಾಸ್ಟ್ರೋಲ್ ಬ್ರಾಂಡ್‌ನ ನಕಲಿ ಎಂಜಿನ್ ಆಯಿಲ್ ಉತ್ಪಾದನೆ ಮಾಡುತ್ತಿದ್ದ ಘಟಕದ ಮೇಲೆ ದಾಳಿ
ಕೋಲಾರ: ಅಪ್ಪ- ಅಮ್ಮನ ವಿಚ್ಚೇದನಕ್ಕೆ ಮನನೊಂದು 26 ವರ್ಷದ ಪುತ್ರ ಆತ್ಮ*ಹತ್ಯೆ!