
ಮುಂಬೈ(ಮೇ 03) ಇಂಡಿಯನ್ ಪ್ರೀಮಿಯಂ ಲೀಗ್ (ಐಪಿಎಲ್) ಆಟ ಆಡಲು ಅವಕಾಶ ಮಾಡಿಕೊಡುತ್ತೇವೆ ಎಂದು ನಂಬಿಸಿ ಯುವಕನಿಗೆ ಬರೋಬ್ಬರಿ 30 ಲಕ್ಷ ರೂ ವಂಚಿಸಲಾಗಿದೆ.
ಮುಂಬೈನ 18 ವರ್ಷದ ಯುವಕ ವಂಚನೆಗೆ ಒಳಗಾಗಿದ್ದಾನೆ. ನಟ ಶಾರುಖ್ ಖಾನ್ ಒಡೆತನದ ಐಪಿಎಲ್ ತಂಡವಾದ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ನಲ್ಲಿ ಸ್ಥಾನ ನೀಡುತ್ತೇವೆ ಎಂದು ನಂಬಿಸಿದ್ದರು.
ಯುವಕನ ತಂದೆ ಮೈಕ್ರೋಫೈನಾನ್ಸ್ ಕಂಪನಿಗೆ ಉಪಾಧ್ಯಕ್ಷ. ಇವರ ಕುಟುಂಬ ಮುಲುಂಡ್ನಲ್ಲಿ ನೆಲೆಸಿದೆ. ಕರ್ನಾಟಕ ಸ್ಪೋರ್ಟ್ಸ್ ಕ್ಲಬ್ಗೆ ಜಾಯಿನ್ ಆಗಿರುವ ಯುವಕ ಪ್ರಾಕ್ಟೀಸ್ ಮಾಡುತ್ತಿದ್ದ.
ಈ ವರ್ಷದ ಆರಂಭದಲ್ಲಿ ಯುವಕ ಪುಷ್ಕರ್ ತಿವಾರಿ ಎಂಬುವರನ್ನು ಭೇಟಿ ಮಾಡಿದ್ದಾನೆ. ತಾನು ಹಿಮಾಚಲ ಪ್ರದೇಶದ ಪರವಾಗಿ ಕ್ರಿಕೆಟ್ ಆಡುತ್ತೇನೆ ಎಂದು ತಿವಾರಿ ಯುವಕನನ್ನು ನಂಬಿಸಿದ್ದಾನೆ . ಮಹಾರಾಷ್ಟ್ರದ ಪರವಾಗಿ ಆಡುವ ಯತ್ನ ಮಾಡಬೇಡ.. ಅಲ್ಲಿ ಸಮಸ್ಯೆಗಳಿವೆ ನಿನಗೆ ಬೇರೆ ತಂಡದಲ್ಲಿ ಸ್ಥಾನ ಮಾಡಿಕೊಡುತ್ತೇನೆ ಎಂಧು ನಂಬಿಸಿದ್ದಾರೆ.
ಸಿಎಸ್ಕೆ ತಂಡಕ್ಕೆ ಕೊರೋನಾಘಾತ; ಮೂವರಿಗೆ ಸೋಂಕು
ಇದಾದ ಮೇಲೆ ಇಬ್ಬರ ನಡುವೆ ಮಾತುಕತೆ ನಡೆದಿದೆ. ಮಾರ್ಚ್ ನಲ್ಲಿ ಕರೆ ಮಾಡಿದ ತಿವಾರಿ ಈಗ ಒಂದು ಅವಕಾಶ ಬಂದಿದೆ ಎಂದು ಹೇಳಿದ್ದಾನೆ. ಕೋಲ್ಕತ್ತಾ ತಂಡಕ್ಕೆ ಒಬ್ಬ ಬೌಲರ್ ಅಗತ್ಯಿದೆ ಎಂಬುದು ಚರ್ಚೆಯಾಗಿದೆ.
ಸ್ಥಾನ ಪಡೆದುಕೊಳ್ಳಬೇಕು ಎಂದರೆ ಮೂವತ್ತು ಲಕ್ಷ ರೂ. ಕೂಡಲೇ ನೀಡಬೇಕು ಎಂದು ನಂಬಿಸಿದ್ದಾರೆ. ಇದನ್ನು ನಂಬಿದ ಕುಟುಂಬ ಎರಡು ಹಂತದಲ್ಲಿ ಹಣ ಸಂದಾಯ ಮಾಡಿದೆ. ಹಣ ಕೊಟ್ಟ ಮೇಲೆ ಪೋನ್ ಕರೆ ಸ್ವೀಕಾರ ಮಾಡುವುದನ್ನು ನಿಲ್ಲಿಸಲಾಗಿದೆ. ಅನುಮಾನಗೊಂಡ ಕುಟುಂಬ ಪೊಲೀಸರ ಮೊರೆ ಹೋಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ