Crime News: ಬಾವನ ಮರ್ಮಾಂಗಕ್ಕೆ ಬಿಸಿ ನೀರು ಸುರಿದ ಅತ್ತಿಗೆ: ಕಾರಣ ಇಷ್ಟೇ

Published : Jun 17, 2022, 09:57 PM ISTUpdated : Jun 17, 2022, 10:01 PM IST
Crime News: ಬಾವನ ಮರ್ಮಾಂಗಕ್ಕೆ ಬಿಸಿ ನೀರು ಸುರಿದ ಅತ್ತಿಗೆ: ಕಾರಣ ಇಷ್ಟೇ

ಸಾರಾಂಶ

ಶುಕ್ರವಾರ ಮನೆಯಲ್ಲಿ ಜಮೀನಿನ ವಿಚಾರವಾಗಿ ಸಣ್ಣಪುಟ್ಟ ಜಗಳವಾಗಿತ್ತು ಎಂದು ಗಾಯಗೊಂಡ ಯುವಕನ ಪತ್ನಿ ತಿಳಿಸಿದ್ದಾರೆ

ಪಾಟ್ನಾ (ಜೂ. 17): ಕೆಲವೊಮ್ಮೆ ಮನೆಯಲ್ಲಿ ಸಣ್ಣ ವಿಷಯಗಳಿಗಾಗುವ ಜಗಳ ತಾರಕಕ್ಕೇರಿ ಅವಾಂತರಕ್ಕೆ ಕಾರಣವಾಗುತ್ತದೆ. ಇಂತಹದೊಂದು ಘಟನೆ ಬಿಹಾರದ ರಾಜಧಾನಿಯಲ್ಲಿ ನಡೆದಿದೆ. ಪಾಟ್ನಾದಲ್ಲಿ ಅತ್ತಿಗೆ ಕೋಪದಲ್ಲಿ ಮಾಡಿದ ಕೃತ್ಯಕ್ಕೆ ಈಗ ಎಲ್ಲರೂ ಬೆಚ್ಚಿಬಿದ್ದಿದ್ದಾರೆ. ಮನೆಯಲ್ಲಿ ನಡೆದ ಜಗಳದ ನಡುವೆಯೇ ಸಿಟ್ಟಿಗೆದ್ದ ಅತ್ತಿಗೆ, ಬಾವನ ಗುಪ್ತಾಂಗದ ಮೇಲೆ ಕುದಿಯುವ ನೀರನ್ನು ಸುರಿದಿದ್ದಾಳೆ. ಬಿಸಿ ನೀರು ಮೈಮೇಲೆ ಬಿದ್ದ ತಕ್ಷಣ ಯುವಕ ಕಿರುಚಲು ಆರಂಭಿಸಿದ್ದು ಮನೆಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ.

ಗಾಯಾಳುವನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಕೃತ್ಯದ ನಂತರ ಅತ್ತಿಗೆ ಇದನ್ನು ಏಕೆ ಮಾಡಿದೆ ಎಂದು ಕೂಡ ವಿವರಿಸಿದ್ದಾಳೆ. ಈ ವಿಷಯ ಭೂ ವಿವಾದಕ್ಕೆ ಸಂಬಂಧಿಸಿದ್ದು ಇದರಿಂದ ಕೋಪಗೊಂಡ ಮಹಿಳೆ ಈ ಕೃತ್ಯ ಎಸಗಿದ್ದಾಳೆ ಎಂದು ಬಳಿಕ ತಿಳಿದುಬಂದಿದೆ. 

ವಾಸ್ತವವಾಗಿ, ಫತುಹಾದ ಮಕ್ಸೂದ್‌ಪುರ ಪ್ರದೇಶದ ಮನೆಯೊಂದರಲ್ಲಿ ಜಮೀನಿನ ಬಗ್ಗೆ ವಿವಾದವಿತ್ತು. ಈ ವಿಚಾರವಾಗಿ ಮನೆಯಲ್ಲಿ ಚರ್ಚೆಯಾಗುತ್ತಿತ್ತು. ಶುಕ್ರವಾರವೂ ಜಮೀನಿನ ಹಕ್ಕು ವಿಚಾರವಾಗಿ ಕುಟುಂಬಸ್ಥರು ಜಗಳವಾಡಿದ್ದರು. ಈ ವಿಚಾರದಲ್ಲಿ ಸಿಟ್ಟಿಗೆದ್ದ ಅತ್ತಿಗೆ ಬಾವನ ಗುಪ್ತಾಂಗದ ಮೇಲೆ ಬಿಸಿ ನೀರು ಎರಚಿದ್ದಾಳೆ. 

ಇದನ್ನೂ ಓದಿ: ವ್ಯಾಪಾರದಲ್ಲಿ ನಷ್ಟ: 3 ವರ್ಷದ ಮಗಳ ಮೇಲೆ ವಾಮಾಚಾರ ಮಾಡಿ ಕೊಂದ ತಂದೆ

ಘಟನೆ ಬಳಿಕ ಯುವಕ ಜೋರಾಗಿ ಅಳಲು ಪ್ರಾರಂಭಿಸಿದ್ದು ಮನೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.  ಘಟನೆಯಲ್ಲಿ ಬಾವನ ಖಾಸಗಿ ಅಂಗಗಳು ಸುಟ್ಟು ಕರಕಲಾಗಿವೆ. ಈ ಬೆನ್ನಲ್ಲೇ ಗಾಯಾಳು ಮಿಥ್ಲೇಶ್ ಕುಮಾರ್ ಅವರ ಪತ್ನಿ ಶೋಭಾದೇವಿ ಅವರು ಫತುಹಾ ಠಾಣೆಗೆ ಲಿಖಿತ ದೂರು ನೀಡಿದ್ದಾರೆ. 

ಗಾಯಗೊಂಡ ಯುವಕನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಶುಕ್ರವಾರ ಮನೆಯಲ್ಲಿ ಜಮೀನಿನ ವಿಚಾರವಾಗಿ ಸಣ್ಣಪುಟ್ಟ ಜಗಳವಾಗಿತ್ತು ಎಂದು ಗಾಯಗೊಂಡ ಯುವಕನ ಪತ್ನಿ ತಿಳಿಸಿದ್ದಾರೆ. "ಇದರಲ್ಲಿ ನನ್ನ ಮತ್ತು ಅವಳ ನಡುವೆ ಜಗಳವಾಗಿತ್ತು. ಅದರ ನಂತರ ಅವಳು ನನ್ನ ಗಂಡನ ಮೇಲೆ ಬಿಸಿ ನೀರನ್ನು ಎಸೆದಳು, ಇದರಿಂದಾಗಿ ಅವರ ಜನನಾಂಗವು ಸುಟ್ಟುಹೋಯಿತುʼ ಎಂದು ಪತ್ನಿ ಹೇಳಿದ್ದಾಳೆ.  ಪೊಲೀಸರು ಪ್ರಕರಣ ದಾಖಲಿಸಿ ತನಿಖೆಯನ್ನು ಮುಂದುವರೆಸಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!
ಕೊಪ್ಪಳ: ಹಸೆಮಣೆ ಏರಬೇಕಿದ್ದ ಜೋಡಿ ಮಸಣಕ್ಕೆ - ಪ್ರಿ-ವೆಡ್ಡಿಂಗ್ ಶೂಟಿಂಗ್ ಮುಗಿಸಿ ವಾಪಸಾಗುವಾಗ ಭೀಕರ ದುರಂತ!