
ಚೆನ್ನೈ(ಜೂ.25): ಮುಪ್ಪಿನಲ್ಲಿ ಚಪಲ ಜಾಸ್ತಿ ಎಂಬ ಮಾತಿದೆ. ಇದಕ್ಕೆ ಉದಾಹರಣೆ ಎಂಬಂತೆ 60 ವರ್ಷ ದಾಟಿದ ವೃದ್ಧನೊಬ್ಬ 16 ವರ್ಷದ ಬಾಲಕಿಯೊಬ್ಬಳಿಗೆ ಲವ್ ಲೆಟರ್ ನೀಡಿದ ಘಟನೆಯೊಂದು ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ.
ಹೋಮಕುಂಡದಲ್ಲಿ ಸುಟ್ಟಿದ್ದರು; ಉದ್ಯಮಿ ಭಾಸ್ಕರ ಶೆಟ್ಟಿ ಹತ್ಯೆ ಆರೋಪಿಗೆ ಷರತ್ತುಬದ್ಧ ಜಾಮೀನು
66 ವರ್ಷದ ಮೊಹಮ್ಮದ್ ಬಾಹಿರ್ ಬಾಷಾ ಎಂಬಾತನೇ ಈ ಚಪಲಚನ್ನಿಗರಾಯ. ವೃದ್ಧ ನೀಡಿದ ಪ್ರೇಮಪತ್ರದಿಂದ ಶಾಕ್ ಆದ ಬಾಲಕಿ ಅದನ್ನು ತನ್ನ ತಾಯಿಗೆ ತೋರಿಸಿದ್ದಾಳೆ. ಬಳಿಕ ಪೋಷಕರು ಬಾಷಾನನ್ನು ತರಾಟೆಗೆ ತೆಗೆದುಕೊಂಡಿದ್ದರಿಂದ ಆತ ಕ್ಷಮಾಪಣೆ ಕೇಳಿದ್ದ. ಆದರೆ, ಇಷ್ಟಕ್ಕೇ ಸುಮ್ನನಾಗದ ಆತ, ಬಾಲಕಿಗೆ ಮತ್ತೊಮ್ಮೆ ಲವ್ ಲೆಟರ್ ಕೊಟ್ಟು ಬೆದರಿಕೆ ಹಾಕಿದ್ದ.
ಬಳಿಕ ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಬಾಷಾ ಈಗ ಸೆಂಟ್ರಲ್ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ