
ಬೆಂಗಳೂರು (ಜೂ.15): ಚಿತ್ರದುರ್ಗ ರೇಣುಕಾ ಸ್ವಾಮಿ ಕೊಲೆ ಪ್ರಕರಣ ಸಂಬಂಧ ಇಂದು ನಟ ದರ್ಶನ್ರನ್ನ ಕೋರ್ಟ್ಗೆ ಹಾಜರುಪಡಿಸುವ ವೇಳೆ ಅಪರಿಚಿತರು ರಿಪೋರ್ಟರ್ ಮೇಲೆ ಹಲ್ಲೆ ಮಾಡಿದ ಘಟನೆ ನಡೆದಿದೆ.
ರಕ್ಷಿತ್ ಗೌಡ, ಹಲ್ಲೆಗೊಳಗಾದ ರಿಪೋರ್ಟರ್, ರಕ್ತ ಬರುವ ಹಾಗೆ ಹೊಡೆದು ಪರಾರಿಯಾಗಿರುವ ಆಗಂತುಕರು. ಇಂಡಿಯನ್ ಎಕ್ಸ್ಪ್ರೆಸ್ ರಿಪೋರ್ಟರ್ ಆಗಿರುವ ರಕ್ಷಿತ್ ಗೌಡ. ಇಂದು ನಟ ದರ್ಶನ್ರನ್ನ ಕೋರ್ಟ್ಗೆ ಹಾಜರುಪಡಿಸುವ ವೇಳೆ ನೃಪತುಂಗ ರಸ್ತೆಯಲ್ಲಿರೋ ಕೋರ್ಟ್ ಆವರಣಕ್ಕೆ ಹೋಗಿದ್ದರು. ಕೋರ್ಟ್ ಆವರಣದಲ್ಲಿ ಮೊಬೈಲ್ ಹಿಡಿದು ನಿಂತಿದ್ದ ವೇಳೆ ದಾಳಿ ಮಾಡಿರುವ ದುಷ್ಕರ್ಮಿಗಳು. ಯಾರೋ ನೀನು ಅಂತಾ ಕೇಳಿದ್ದಾರೆ. ಮೀಡಿಯಾದವರು ಎಂದು ಹೇಳುತ್ತಿದ್ದಂತೆ ಅವಾಚ್ಯವಾಗಿ ನಿಂದಿಸಿ ರಕ್ತ ಬರುವ ಹಾಗೆ ಹೊಡೆದು ಪರಾರಿಯಾಗಿದ್ದಾರೆ.
ಏನೇ ಕೇಳು, ಏನೇ ಹೇಳು ಕಣ್ಣೀರೇ ನನಗೀಗ, ಪೊಲೀಸ್ ಕಸ್ಟಡಿಯಲ್ಲಿ ನಟ ದರ್ಶನ್ ಜರ್ಝರಿತ
ಹಲ್ಲೆ ಘಟನೆ ಸಂಬಂಧ ದುಷ್ಕರ್ಮಿಗಳ ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಎನ್ಸಿಆರ್ ದಾಖಲು ಮಾಡಿಕೊಂಡ ಪೊಲೀಸರು ಅಪರಿಚಿತರ ಪತ್ತೆಗೆ ಮುಂದಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ