ರೈಲ್ವೆಯಲ್ಲಿ ಕೆಲಸ ಕೊಡಿಸೋದಾಗಿ ಲಕ್ಷಾಂತರ ರು. ಪೀಕಿದ ನೌಕರ..!

Kannadaprabha News   | Asianet News
Published : Sep 11, 2020, 08:49 AM ISTUpdated : Sep 11, 2020, 09:16 AM IST
ರೈಲ್ವೆಯಲ್ಲಿ ಕೆಲಸ ಕೊಡಿಸೋದಾಗಿ ಲಕ್ಷಾಂತರ ರು. ಪೀಕಿದ ನೌಕರ..!

ಸಾರಾಂಶ

ಚಮನ್‌ಸಿಂಗ್‌ ಹಾಗೂ ತಿಮ್ಮಯ್ಯ ಎಂಬುವರ ವಿರುದ್ಧ ಸಿಟಿ ರೈಲ್ವೆ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲು|  ರೈಲ್ವೆ ಇಲಾಖೆಯ ಸಿ ಗ್ರೂಪ್‌ ನೌಕರ ಹುದ್ದೆ ಕೊಡಿಸುತ್ತೇನೆ ಎಂದು 8 ಲಕ್ಷ ಕೇಳಿದ್ದ ತಿಮ್ಮಯ್ಯ, ಇದನ್ನು ನಂಬಿದ ಪ್ರವೀಣಕುಮಾರ್‌ ಹಂತ-ಹಂತವಾಗಿ ಆರೋಪಿಗಳಿಗೆ ಮೂರು ಲಕ್ಷ ಹಣ ನೀಡಿದ್ದ| 

ಬೆಂಗಳೂರು(ಸೆ.11): ರೈಲ್ವೆ ಇಲಾಖೆಯಲ್ಲಿ ಕೆಲಸ ಹಾಗೂ ನಿವೇಶನ ಕೊಡಿಸುವುದಾಗಿ ಹಣ ಪಡೆದು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಈ ಸಂಬಂಧ ಬಾಬು, ಚಮನ್‌ಸಿಂಗ್‌ ಹಾಗೂ ತಿಮ್ಮಯ್ಯ ಎಂಬುವರ ವಿರುದ್ಧ ಸಿಟಿ ರೈಲ್ವೆ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ವಂಚನೆಗೊಳಗಾದ ಪ್ರವೀಣ್‌ ಕುಮಾರ್‌ ಎಂಬುವರು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಗದಗ: ಕಾರ್‌ ಆಸೆಗೆ ಬಿದ್ದು ಲಕ್ಷಾಂತರ ರೂ. ಕಳೆದುಕೊಂಡ ತಾಯಿ-ಮಗಳು..!

ಪ್ರವೀಣ್‌ಕುಮಾರ್‌ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದು, ತಿಮ್ಮಯ್ಯನ ಪರಿಚಯವಾಗಿತ್ತು. ಈ ವೇಳೆ ತಿಮ್ಮಯ್ಯ, ಆರೋಪಿ ಬಾಬು ಎಂಬಾತನ ಬಳಿ ಕರೆದೊಯ್ದಿದ್ದ. ರೈಲ್ವೆ ಇಲಾಖೆಯ ಸಿ ಗ್ರೂಪ್‌ ನೌಕರ ಹುದ್ದೆ ಕೊಡಿಸುತ್ತೇನೆ ಎಂದು 8 ಲಕ್ಷ ಕೇಳಿದ್ದ. ಇದನ್ನು ನಂಬಿದ ಪ್ರವೀಣಕುಮಾರ್‌ ಹಂತ-ಹಂತವಾಗಿ ಆರೋಪಿಗಳಿಗೆ ಮೂರು ಲಕ್ಷ ಹಣ ನೀಡಿದ್ದ. ಹಣ ನೀಡಿ ಮೂರು ವರ್ಷವಾದರೂ ಕೆಲಸವನ್ನು ಕೊಡಿಸಲ್ಲ, ಹಣವನ್ನು ವಾಪಸ್‌ ನೀಡಿಲ್ಲ. ಹಣ ಪಡೆದು ವಂಚನೆ ಮಾಡಿರುವ ಆರೋಪಿ ವಿರುದ್ಧ ಕ್ರಮಕೈಗೊಳ್ಳುವಂತೆ ದೂರು ನೀಡಿದ್ದಾರೆ.

ತಿಮ್ಮಯ್ಯ ನಿವೃತ್ತ ಸರ್ಕಾರಿ ಕಾರು ಚಾಲಕನಾಗಿದ್ದರೆ, ಬಾಬು ರೈಲ್ವೆ ಇಲಾಖೆಯ ಉದ್ಯೋಗಿಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಇದೇ ರೀತಿ ಬಾಬು ರೈಲ್ವೆ ಹೌಸಿಂಗ್‌ ಸೊಸೈಟಿಯಲ್ಲಿ ನಿವೇಶನ ಕೊಡಿಸುವುದಾಗಿ ರಾಚಯ್ಯ ಮತ್ತು ಗಿರೀಶ್‌ ಎಂಬುವರಿಂದ 4.25 ಲಕ್ಷ ಹಣ ಪಡೆದು ವಂಚಿಸಿದ್ದಾನೆ. ಈ ಸಂಬಂಧ ಕೂಡ ಪ್ರತ್ಯೇಕ ದೂರು ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ನನ್ನ ಜೊತೆಗೂ ಬಾ: ಗೆಳೆಯನ ಗರ್ಲ್‌ಫ್ರೆಂಡ್‌ಗೆ ಸಂದೇಶ: ಪ್ರಶ್ನಿಸಿದ್ದಕ್ಕೆ ಸ್ನೇಹಿತನನ್ನೇ ಕೊಂದು ಪೀಸ್ ಪೀಸ್ ಮಾಡಿದ
The Devil Movie: ಕಾಲವೇ ಸತ್ಯ ಹೇಳುತ್ತದೆ. ಸಮಯವೇ ಉತ್ತರಿಸುತ್ತದೆ-ಜೈಲಿನಿಂದಲೇ Darshan ಮೆಸೇಜ್