ಪೋಷಕರು ಕೊಟ್ಟ ಸಿಹಿಯೂ ರಾಗಿಣಿಗಿಲ್ಲ, ಜೈಲಿನಲ್ಲೇ ದೀಪಾವಳಿ!

Published : Nov 16, 2020, 07:58 PM ISTUpdated : Nov 16, 2020, 07:59 PM IST
ಪೋಷಕರು ಕೊಟ್ಟ ಸಿಹಿಯೂ ರಾಗಿಣಿಗಿಲ್ಲ, ಜೈಲಿನಲ್ಲೇ ದೀಪಾವಳಿ!

ಸಾರಾಂಶ

 ಪರಪ್ಪನ ಅಗ್ರಹಾರ ಜೈಲಿನಲ್ಲಿ ದೀಪಾವಳಿ ಆಚರಣೆ/ ದೀಪಾವಳಿ ಆಚರಣೆಯಲ್ಲಿ ಕೈದಿಗಳ ಜೊತೆ ಸಂಜನಾ ಹಾಗೂ ರಾಗಿಣಿ/ ದೀಪಾವಳಿ ಹಿನ್ನೆಲೆಯಲ್ಲಿ ಜೈಲಿನ ಅಧಿಕಾರಿಗಳಿಗೆ ಹಾಗೂ ರಾಗಿಣಿಗೆ ಸ್ವೀಟ್ ತಂದಿದ್ದ ಪೋಷಕರು ಜೈಲಾಧಿಕಾರಿಗಳಿಂದ ನಿನ್ನೆ ಸ್ವೀಟ್ ಸ್ವೀಕರಿಸಲು ನಿರಾಕರಣೆ/ ಜೈಲಧಿಕಾರಿಗಳ ಬಳಿ ಹಲವು ಬಾರಿ ಮನವಿ ಮಾಡಿಕೊಂಡ ರಾಗಿಣಿ ಪೋಷಕರು.

ಬೆಂಗಳೂರು(ನ. 16)  ಪರಪ್ಪನ ಅಗ್ರಹಾರ ಜೈಲಿನಲ್ಲಿ ದೀಪಾವಳಿ ಆಚರಣೆ ಮಾಡಲಾಗಿದೆ. ದೀಪಾವಳಿ ಆಚರಣೆಯಲ್ಲಿ ಕೈದಿಗಳ ಜೊತೆ ನಟಿ ಸಂಜನಾ ಹಾಗೂ ರಾಗಿಣಿ ಪಾಲ್ಗೊಂಡಿದ್ದಾರೆ. 

ದೀಪಾವಳಿ ಹಿನ್ನೆಲೆಯಲ್ಲಿ ಜೈಲಿನ ಅಧಿಕಾರಿಗಳಿಗೆ ಹಾಗೂ ರಾಗಿಣಿಗೆ ರಾಗಿಣಿ ಪೋಷಕರು ಸ್ವೀಟ್ ನೀಡಿದ್ದಾರೆ. ಆದರೆ ಜೈಲಾಧಿಕಾರಿಗಳು ಸ್ವೀಟ್ ಸ್ವೀಕರಿಸಲು ನಿರಾಕರಣೆ ಮಾಡಿದ್ದಾರೆ. ಜೈಲಧಿಕಾರಿಗಳ ಬಳಿ ಹಲವು ಬಾರಿ ರಾಗಿಣಿ ಪೋಷಕರು ಮನವಿ ಮಾಡಿಕೊಂಡಿದ್ದಾರೆ.  ಸೆಲೆಬ್ರಿಟಿ ಹಿನ್ನೆಲೆಯಲ್ಲಿ ಸ್ವೀಟ್ ಪಡೆದುಕೊಳ್ಳದಂತೆ ಜೈಲಧಿಕಾರಿಗಳ ಸೂಚನೆ ಇರುವುದರಿಂದ ಕಿರಿಯ ಅಧಿಕಾರಿಗಳು ಅದರಂತೆ ನಡೆದುಕೊಂಡಿದ್ದಾರೆ.

ಹೊಸ ಬಟ್ಟೆಗಾಗಿ ನಟಿಮಣಿಯರ ಪರದಾಟ

ದೀಪಾವಳಿ ಹಿನ್ನೆಲೆಯಲ್ಲಿ ರಾಗಿಣಿ ಗ್ರೀಟಿಂಗ್ ತಯಾರು ಮಾಡಿದ್ದಾರೆ ಅಧಿಕಾರಿಗಳಿಗೆ ನೀಡಲು ಪೇಪರ್ ಸೇರಿದಂತೆ ಇತರೆ ವಸ್ತುಗಳಿಂದ ಗ್ರೀಟಿಂಗ್ ತಯಾರಿ ಮಾಡಿದ್ದಾರೆ ಮೂರುದಿನಗಳಿಂದ ಅಧಿಕಾರಿಗಳಿಗೆ ನೀಡಲು ಮುಂದಾದ ರಾಗಿಣಿ. ಆದರೆ  ಗ್ರೀಟಿಂಗ್ ಸ್ವೀಕರಿಸಲು ಸಹ ಜೈಲಿನ ಅಧಿಕಾರಿಗಳು ನಿರಾಕರಿಸಿದ್ದಾರೆ.

ಜೈಲಿನ ಉಳಿದ ಕೈದಿಗಳೊಂದಿಗೆ ರಾಗಿಣಿ ಮತ್ತು ಸಂಜನಾ ದೀಪಾವಳಿ ಆಚರಣೆ ಮಾಡಲಿದ್ದಾರೆ. ವರ್ಷವರ್ಷವೂ ಅಭಿಮಾನಿಗಳಿಗೆ ಸೋಶಿಯಲ್ ಮೀಡಿಯಾ ಮುಖೇನ ವಿಶ್ ಮಾಡುತ್ತಿದ್ದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ