PSI Recruitment Scam: ಕಾಶ್ಮೀರದಲ್ಲೆಲ್ಲ ಹುಡುಕಿ ಕೊನೆಗೆ ಪುಣೆಯಲ್ಲಿ ದಿವ್ಯಾ ಹಾಗರಗಿ ಪತ್ತೆ!

Published : Apr 30, 2022, 03:10 AM IST
PSI Recruitment Scam: ಕಾಶ್ಮೀರದಲ್ಲೆಲ್ಲ ಹುಡುಕಿ ಕೊನೆಗೆ ಪುಣೆಯಲ್ಲಿ ದಿವ್ಯಾ ಹಾಗರಗಿ ಪತ್ತೆ!

ಸಾರಾಂಶ

ಪಿಎ​ಸ್‌ಐ ಹಗ​ರ​ಣದ ಪ್ರಮುಖ ಆರೋಪಿ ಎಂದೇ ಗುರು​ತಿ​ಸ​ಲಾ​ಗಿ​ರುವ ದಿವ್ಯಾ ಹಾಗ​ರಗಿ ಮತ್ತು ತಂಡ 18 ದಿನ ಸಿಐ​ಡಿ ಪೊಲೀ​ಸರ ಕಣ್ಣು ತಪ್ಪಿಸಿ ತಲೆ ಮರೆ​ಸಿ​ಕೊಂಡಿದ್ದೇ ಒಂದು ರೋಚಕ ಕತೆ. 

ಕಲಬುರಗಿ (ಏ.30): ಪಿಎ​ಸ್‌ಐ ಹಗ​ರ​ಣದ (PSI Recruitment Scam) ಪ್ರಮುಖ ಆರೋಪಿ ಎಂದೇ ಗುರು​ತಿ​ಸ​ಲಾ​ಗಿ​ರುವ ದಿವ್ಯಾ ಹಾಗ​ರಗಿ (Divya Hagaragi) ಮತ್ತು ತಂಡ 18 ದಿನ ಸಿಐ​ಡಿ ಪೊಲೀ​ಸರ (Police) ಕಣ್ಣು ತಪ್ಪಿಸಿ ತಲೆ ಮರೆ​ಸಿ​ಕೊಂಡಿದ್ದೇ ಒಂದು ರೋಚಕ ಕತೆ. ಪಿಎ​ಸ್‌ಐ ಪರೀಕ್ಷೆಯ ಒಎಂಆರ್‌ ಶೀಟ್‌ ತಿದ್ದು​ಪಡಿ ಸಂಗತಿ ಹೊರಬೀಳು​ತ್ತಿ​ದ್ದಂತೆ ದಿವ್ಯಾ ಇಡೀ ಹಗ​ರ​ಣದ ಕೇಂದ್ರ ಬಿಂದು​ವಾ​ಗಿದ್ದಳು. ಪ್ರಕ​ರ​ಣ​ವನ್ನು ಸಿಐ​ಡಿಗೆ (CID) ವಹಿಸಿ ಸರ್ಕಾರ ಆದೇಶ ಹೊರ​ಡಿ​ಸು​ತ್ತಿ​ದ್ದಂತೆ ದಿವ್ಯಾ ನಾಪ​ತ್ತೆ​ಯಾ​ಗಿ​ದ್ದಳು. ತನ್ನ ತಂಡ​ದೊಂದಿಗೆ ನಿಂತಲ್ಲಿ ನಿಲ್ಲ​ದೆ 18 ದಿನ ಅನೇಕ ಊರೂರು ಸುತ್ತಿ​ದ್ದಾ​ಳೆ.

ಸಿಐಡಿಯ ದಿಕ್ಕು ತಪ್ಪಿ​ಸಲು ಕಾಶ್ಮೀ​ರಕ್ಕೆ ತೆರ​ಳಿ​ದ್ದಾರೆ ಎನ್ನುವ ಸುಳಿ​ವು​ಗ​ಳನ್ನು ನೀಡು​ವ​ಲ್ಲಿಯೂ ದಿವ್ಯಾ ಯಶ​ಸ್ವಿ​ಯಾ​ಗಿ​ದ್ದಳು. ಇತ್ತ ಸಿಐಡಿ 6 ತಂಡ​ಗ​ಳನ್ನು ರಚಿ​ಸಿ​ಕೊಂಡು ಕಲ​ಬು​ಗ​ರಿ​ಯಿಂದ ಕಾಶ್ಮೀ​ರ​ದ​ವ​ರೆಗೂ ಹುಡು​ಕಾಟ ನಡೆ​ಸಿ​ತ್ತು. ದಿವ್ಯಾ ಮತ್ತು ತಂಡ ಏ.2ರಂದೇ ತಮ್ಮ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿ​ಕೊಂಡಿ​ದ್ದರು. ಇತ್ತ ಏ.12ರಿಂದ ಆರೋ​ಪಿ​ಗ​ಳಿ​ಗಾಗಿ ಸಿಐಡಿ ತೀವ್ರ ಹುಡು​ಕಾಟ ಶುರು ಮಾಡಿತ್ತು. ಇತ್ತ ದಿವ್ಯಾ ಮತ್ತು ಗ್ಯಾಂಗ್‌ ಹೋದ​ಲೆ​ಲ್ಲ ​ಮೊ​ಬೈಲ್‌ ಮತ್ತು ಸಿಮ್‌ ಕಾರ್ಡ್‌​ಗ​ಳನ್ನು ಬದ​ಲಿ​ಸಿ​ದ್ದರು. ಅಲ್ಲದೆ ತಮ್ಮ ಕಾರಿನ ಡ್ರೈವರ್‌ ಮೊಬೈಲನ್ನು ಕೂಡ ಸ್ವಿಚ್‌​ಆಫ್‌ ಮಾಡಿ​ದ್ದರು. ಅದು ಯಾವ​ಗಲೋ ಒಮ್ಮೊಮ್ಮೆ ಆನ್‌ ಆಗು​ತ್ತಿತ್ತು. 

Divya hagargiಗೆ ಆಶ್ರಯ ನೀಡಿದ್ದ ಮಹಾ ಉದ್ಯಮಿಯೂ ಅರೆಸ್ಟ್

ಇದರ ಜಾಡು ಹಿಡಿದ ಸಿಡಿಐಗೆ ದಿವ್ಯಾ ರಾಜ್ಯದ ಗಡಿ ದಾಟಿ​ದ್ದಾರೆ ಎನ್ನುವ ಸುಳಿವು ಸಿಕ್ಕಿತ್ತು. ಆದರೆ ಯಾವುದೂ ಕೂಡ ಖಚಿ​ತ​ವಾ​ಗು​ತ್ತಿ​ರ​ಲಿಲ್ಲ. ಹೀಗಾಗಿ ಸಿಐ​ಡಿಗೆ ದಿವ್ಯಾ ಜಾಡು ಹಿಡಿ​ಯು​ವುದು ದೊಡ್ಡ ಸವಾ​ಲಾಗಿ ಪರಿ​ಣ​ಮಿ​ಸಿ​ತ್ತು. ಪ್ರತಿ ಬಾರಿಯೂ ಆಕೆ ತಲೆ ಮರೆ​ಸಿ​ಕೊಳ್ಳಲು ಹಲ​ವರು ಸಹಾಯ ಮಾಡಿ​ದ್ದಾರೆ ಎನ್ನ​ಲಾ​ಗಿದೆ. ಆದರೆ ಇದನ್ನು ಸಿಐಡಿ ಖಚಿತ ಪಡಿ​ಸು​ತ್ತಿ​ಲ್ಲ. ಇತ್ತ ಸಿಐಡಿ ಬಲೆಯಿಂದ ತಪ್ಪಿಸಿಕೊಳ್ಳಲು ಮೊದಲು ಆಲಮೇಲ ಮಾರ್ಗವಾಗಿ ಸಂಚಾರ ಶುರು ಮಾಡಿದ ದಿವ್ಯಾ ಮತ್ತು ತಂಡ ಮುಂದೆ 4 ದಿನ ವಿಜಯಪುರ, ನಂತರ ಸೊಲ್ಲಾಪುರ, ಅಲ್ಲಿಂದ ಮತ್ತೆ ಕಲಬುರಗಿಗೆ ಬಂದು ತಲೆ ಮರೆಸಿಕೊಂಡಿತ್ತು. 

ಬಳಿ​ಕ ಪುಣೆಗೆ ಸಾಗಿ ಅಲ್ಲಿ ಉದ್ಯ​ಮಿಯ ಸುರೇಶ್‌ ಕಾಟೆ​ಗಾಂವ್‌ ಮನೆಯಲ್ಲಿ ಆಸರೆ ಪಡೆದಿತ್ತು. 18 ದಿನಗಳಲ್ಲಿ ದಿವ್ಯಾ 5 ದಿನ ಕಲಬುರಗಿ ಹೊರ ವಲಯದಲ್ಲೇ ಇದ್ದಳು ಎಂಬ ಮಾಹಿತಿ ಇದೆ. ಇವೆಲ್ಲದ್ದಕ್ಕೂ ಸಿಐಡಿ ವಿಚಾರಣೆಯೇ ಇದನ್ನು ಖಚಿತ ಪಡಿಸಬೇಕಿದೆ. ಆಸ​ರೆ​ ಪಡೆದ ಮನೆ ಬಾಗಿ​ಲ​ಲ್ಲೇ ಸಿಐಡಿ ಕಂಡು ದಿವ್ಯಾ ಗಡ​ಗ​ಡ!; 18 ದಿನ ಸಿಐಡಿ ಕಣ್ಣು ತಪ್ಪಿಸಿ ತಲೆ ಮರೆ​ಸಿ​ಕೊಂಡಿದ್ದ ಪಿಎಸ್‌ಐ ಹಗರಣದ ರೂವಾರಿ ದಿವ್ಯ ಹಾಗರಗಿ ಕೊನೆಗೂ ಸಿಕ್ಕಿದ್ದು ಮಹಾ​ರಾ​ಷ್ಟ್ರದ ಪುಣೆ​ಯ​ಲ್ಲಿ. ದಿವ್ಯಾ ಮತ್ತು ಆಕೆಯ ಪಟಾ​ಲಂನನ್ನು ಬಂಧಿ​ಸಲು ಸಿಐಡಿ 6 ತಂಡ ರಚಿಸಿಕೊಂಡು ಕಲಬುರಗಿಯಿಂದ ಕಾಶ್ಮೀರವರೆಗೂ ಸುತ್ತಾಡಿತ್ತು.

ಆಕೆ ಪುಣೆಯಲ್ಲಿದ್ದಾಳೆಂಬ ಸುಳಿವು ಸಿಕ್ಕ 11 ತಾಸಿ​ನಲ್ಲೇ ದಿವ್ಯಾ ಮತ್ತವರ 6 ಜನ​ರ ಪಟಾಲಂ​ನ​ನ್ನು ಬಂಧಿಸಿದ್ದಾ​ರೆ. ಹಗರಣದ ರೂವಾರಿ ದಿವ್ಯಾ ಪುಣೆಯಲ್ಲಿದ್ದಾಳೆಂದು ಗೊತ್ತಾಗಿದ್ದೆ ಗುರುವಾರ ಸಂಜೆ 6.30ಕ್ಕೆ, ದಿವ್ಯಾಳ ಆಪ್ತೆ ಶಹಾಬಾದ್‌ನ ಜ್ಯೋತಿ ಪಾಟೀಲ್‌ ಮೊಬೈಲ್‌ನಿಂದ ಈ ಸಂಗತಿ ಗೊತ್ತಾಗಿದ್ದೇ ತಡ ಸಿಐಡಿ ವಿಳಂಬ ಮಾಡದೆ ಪುಣೆ ದಾರಿ ಹಿಡಿದಿತ್ತು. ಪುಣೆಯ ಉದ್ಯಮಿ ಸುರೇಶ ಕಾಯೆಗಾಂವ್‌ ಆಸರೆ ನೀಡಿರೋ ಸುಳಿವು ಜ್ಯೋತಿ ನೀಡಿದ್ದಳು. ಜ್ಯೋತಿ ಪಾಟೀಲ್‌ ಮೂಲಕವೇ ಮಹತ್ವದ ವ್ಯಕ್ತಿಯೊಬ್ಬರಿಗೆ ಕರೆ ಮಾಡಿಸಿದ ಸಿಐಡಿ, ಆ ಕರೆ ಮೂಲಕ ದಿವ್ಯಾ ಇರು​ವಿ​ಕೆ​ಯನ್ನು ಖಚಿ​ತ​ಪ​ಡಿ​ಸಿ​ಕೊಂಡಿತು.

ಮಹಾರಾಷ್ಟ್ರ ಪೊಲೀಸ್‌ ನೆರವಿನಿಂದ ಪುಣೆಯಲ್ಲಿರೋ ಉದ್ಯ​ಮಿ ಸುರೇಶ್‌ ಕಾಟೆಗಾಂವ್‌ ಮನೆ ಮೇಲೆ ದಾಳಿ ನಡೆಸಿತ್ತು. ಮ​ಧ್ಯರಾತ್ರಿ 2.30ಕ್ಕೆ ನಡೆದ ದಾಳಿಯಲ್ಲಿ ಸುರೇಶ್‌ ಕಾಟೆ​ಗಾಂವ್‌, ದಿವ್ಯಾಳನ್ನು ತನ್ನ ಇನ್ನೊಂದು ಮನೆಯಲ್ಲಿಟ್ಟಿದ್ದಾಗಿ ಬಾಯಿಬಿಟ್ಟ. ಆತನನ್ನೇ ಮುಂದಿ​ಟ್ಟು​ಕೊಂಡು ಬಂದ ಸಿಐಡಿ ರಾತ್ರಿಯೇ ದಿವ್ಯಾ ತಂಗಿದ್ದ ಮನೆ ಬಾಗಿಲು ಬಡಿದಿದ್ದಾರೆ. ಹೊರಗಡೆಯಿಂದ ಸುರೇಶ್‌ ತಾನು ಬಂದಿದ್ದಾಗಿ ಹೇಳಿದಾಗ ಒಳಗಿದ್ದ ದಿವ್ಯಾ, ಬಾಗಿಲು ತೆರೆಯುತ್ತಿ​ದ್ದಂತೆ ಎದು​ರಿ​ಗೆ ಕಂಡದ್ದು ಡಿವೈಎಸ್ಪಿ ಶಂಕರಗೌಡ ಪಾಟೀಲ್‌ ಮತ್ತವರ ತಂಡ. ತಾನಡಿಗಿದ್ದ ಮನೆ ಮನೆ ಮುಂದೆಯೇ ಸಿಐಡಿ ತಂಡ​ವನ್ನು ಕಂಡು ದಿವ್ಯಾ ಕಂಗಾಲು, ಏನೊಂದೂ ತೋಚದೆ ಹೌಹಾರಿದ್ದಾಳೆ, ತಡವರಿಸಿದ್ದಾಳೆ, ತನ್ನ ಮುಂದೆಯೇ ಏನಾಗುತ್ತದೆ ಎಂಬುದು ಅರಿವಿಗೆ ಬಾರದಂತೆ ದಿಗ್ಭ್ರಾಂತಳಾಗಿದ್ದಾಳೆ.

ಕರ್ನಾಟಕದಲ್ಲಿ 'ಸಿಂಘಂ'ನಂಥ ಅಧಿಕಾರಿಗಳಿದ್ರೂ ಪಿಎಸ್‌ಐ ಅಕ್ರಮ ಹೇಗಾಯ್ತು?: ಡಿ. ರೂಪಾ ಪ್ರಶ್ನೆ

11 ಗಂಟೆಯಲ್ಲೇ ಕಾರಾರ‍ಯಚರಣೆ ಖತಂ: ಇದೇ ಸ್ಥಿತಿಯಲ್ಲಿ ದಿವ್ಯಾಳ ವಶಕ್ಕೆ ಪಡೆದ ಸಿಐಡಿ ಶಂಕರಗೌಡ ಪಾಟೀಲ್‌ ಅದೇ ಮನೆಯಲ್ಲಿದ್ದ ಜ್ಞಾನ ಜ್ಯೋತಿ ಶಾಲೆಯ ಶಿಕ್ಷಕಿಯರಾದ ಅರ್ಚನಾ, ಸುನಿತಾರನ್ನು ವಶಕ್ಕೆ ಪಡೆದಿದ್ದಾರೆ. ಜೊತೆಗೆ ಆಶ್ರಯ ನೀಡಿದ್ದ ಸುರೇಶ ಕಾಟೇಗಾಂವ ಮತ್ತು ಆ ಮನೆಯಲ್ಲಿ ಅವರಿಗೆ ಸಹಾಯಕ್ಕಾಗಿ ಇದ್ದ ಕಾಳಿದಾಸ ಎನ್ನುವ ವ್ಯಕ್ತಿಯ ಬಂಧಿಸಿ ಬೆಳಗಿನ 5ಗಂಟೆಗೆ ಎಲ್ಲಾ ಕೆಲಸ ಮುಗಿಸಿ ಮಧ್ಯಾಹ್ನ 12ಕ್ಕೆ ಕಲಬುರಗಿಗೆ ಬಂದಿಳಿದಿದರು. 18 ದಿನಗಳ ಕಾಲ ತಲೆಮರೆಸಿಕೊಂಡಿದ್ದ ದಿವ್ಯಾ ಹಾಗೂ ತಂಡದ ಹಲವರು ಸೆರೆ ಸಿಕ್ಕರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚಿಕ್ಕಮಗಳೂರು: ಬ್ಯಾನರ್ ಗಲಾಟೆ, ಕಾಂಗ್ರೆಸ್ ಮುಖಂಡನ ಬರ್ಬರ ಹತ್ಯೆ, ಬಜರಂಗದಳ ಕಾರ್ಯಕರ್ತರ ಮೇಲೆ ಶಂಕೆ!
ಮಿರ್ಜಾ ಇಸ್ಮಾಯಿಲ್ ಮೊಮ್ಮಗಳ ಹಂತಕನಿಗೆ ಜೈಲೇ ಗತಿ, ಏನಿದು ಪ್ರಕರಣ?