ಕಲಘಟಗಿ: ಅಂಚೆ ಕಚೇ​ರಿಗೆ ಕನ್ನ ಹಾಕಿದ ಖದೀಮರು

Kannadaprabha News   | Asianet News
Published : Feb 17, 2021, 10:05 AM IST
ಕಲಘಟಗಿ: ಅಂಚೆ ಕಚೇ​ರಿಗೆ ಕನ್ನ ಹಾಕಿದ ಖದೀಮರು

ಸಾರಾಂಶ

ಅಂಚೆ ಕಚೇ​ರಿಯ ಹಿಂಬ​ದಿ​ಯ ಕಿಟ​ಕಿಯ ಕಬ್ಬಿ​ಣದ ಸರ​ಳು​ಗ​ಳನ್ನು ಮುರಿದು ಒಳ​ನುಗ್ಗಿ ಕಳ್ಳ​ತನ| ಧಾರವಾಡ ಜಿಲ್ಲೆಯ ಕಲಘಟಗಿ ಪಟ್ಟಣ| ಸಿಸಿ ಕ್ಯಾಮೆರಾಕ್ಕೆ ಬಟ್ಟೆ ಮುಸುಕು ಹಾಕಿ ಭದ್ರ​ತೆಯ ಕೊಠ​ಡಿ​ಯ​ಲ್ಲಿದ್ದ ಸೇಫ್‌ ಲಾಕರ್‌ ಒಡೆದು ಕಳ್ಳ​ತನ| 

ಕಲಘಟಗಿ(ಫೆ.17): ಪಟ್ಟಣದ ಬಸ್‌ ನಿಲ್ದಾಣದ ಹತ್ತಿರ ಇರುವ ಅಂಚೆ ಕಚೇ​ರಿಗೆ ಸೋಮವಾರ ತಡ​ರಾ​ತ್ರಿ ಕನ್ನ ಹಾಕಿದ ಖದೀ​ಮರು 1.40 ಲಕ್ಷ ನಗದು ಹಾಗೂ ಸಿಸಿ ಕ್ಯಾಮೆರಾ ಡಿವಿ​ಆರ್‌ ಕಳ್ಳ​ತನ ಮಾಡಿ​ದ್ದಾರೆ.

ಅಂಚೆ ಕಚೇ​ರಿಯ ಹಿಂಬ​ದಿ​ಯ ಕಿಟ​ಕಿಯ ಕಬ್ಬಿ​ಣದ ಸರ​ಳು​ಗ​ಳನ್ನು ಮುರಿದು ಒಳ​ನುಗ್ಗಿ ಈ ಕಳ್ಳ​ತನ ಮಾಡಿ​ದ್ದಾರೆ. ಸಿಸಿ ಕ್ಯಾಮೆರಾಕ್ಕೆ ಬಟ್ಟೆ ಮುಸುಕು ಹಾಕಿ ಭದ್ರ​ತೆಯ ಕೊಠ​ಡಿ​ಯ​ಲ್ಲಿದ್ದ ಸೇಫ್‌ ಲಾಕರ್‌ ಒಡೆದು ಈ ಕಳ್ಳ​ತನ ನಡೆ​ಸಿ​ದ್ದಾ​ರೆ. ಜತೆಗೆ ಸುಳಿವು ಬಿಡ​ಬಾ​ರ​ದೆಂದು ಸಿಸಿ ಟಿವಿ ಡಿವಿ​ಆರ್‌ ಸಹ ಕದ್ದೊ​ಯ್ದಿ​ದ್ದಾರೆ.

ಪೊಲೀಸ್‌ ಠಾಣೆ ಪಕ್ಕದಲ್ಲೇ ವಾಸವಿದ್ದ ಎಟಿಎಂ ಕಳ್ಳ..!

ಈ ವಿಷಯ ಮಂಗಳವಾರ ಬೆಳಗ್ಗೆ ಬೆಳಕಿಗೆ ಬಂದಿದ್ದು, ಸ್ಥಳಕ್ಕೆ ಜಿಲ್ಲಾ ಉಪಪೊಲೀಸ್‌ ವರಿಷ್ಠಾಧಿಕಾರಿ ರಾಮನಗೌಡ ಹಟ್ಟಿಹಾಗೂ ಅಂಚೆ ಕಚೇ​ರಿಯ ಮೇಲಧಿಕಾರಿಗಳು ಬಂದು ಪರಿಶೀಲಿಸಿದರು. ಈ ಕುರಿತು ಕಲಘಟಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಪಿಐ ಪ್ರಭು ಸೂರಿನ ಪ್ರಕರಣದ ತನಿಖೆ ಕೈಗೊಂಡಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು