ಇಂಜೆಕ್ಷನ್ ಕೊಟ್ಟು ಮಹಿಳೆಯರೊಂದಿಗೆ...... ಒದೆ ಬೀಳಲಿದೆ ಕಳ್ಳ ಸನ್ಯಾಸಿಗೆ!

Suvarna News   | Asianet News
Published : Feb 04, 2020, 05:48 PM ISTUpdated : Feb 04, 2020, 06:13 PM IST
ಇಂಜೆಕ್ಷನ್ ಕೊಟ್ಟು ಮಹಿಳೆಯರೊಂದಿಗೆ...... ಒದೆ ಬೀಳಲಿದೆ ಕಳ್ಳ ಸನ್ಯಾಸಿಗೆ!

ಸಾರಾಂಶ

ಢೋಂಗಿ ಬಾಬಾಗಳ ಕುರಿತು ಎಚ್ಚರಿಕೆಯಿಂದ ಇರಿ| ಮತ್ತು ತರಿಸುವ ಇಂಜೆಕ್ಷನ್ ನೀಡಿ ಮಹಿಳಾ ಭಕ್ತರೊಂದಿಗೆ ಅಸಭ್ಯ ವರ್ತೆನೆ ಆರೋಪ| ಢೋಂಗಿ ಬಾಬಾನ ಕರ್ಮಕಾಂಡ ಫೋಟೋದಲ್ಲಿ ಸೆರೆ| ಉತ್ತರಪ್ರದೇಶದ ಶಾಹಜಾಂಪುರ್’ನ ಢೋಂಗಿ ಬಾಬಾ  ಅನುಜ್ ಚೇತನ್ ಸರಸ್ವತಿ| ಮಹಿಳೆಯನ್ನು ಮೈ ಮಾರುವ ಧಂಧೆಗೆ ದೂಡುತ್ತಿದ್ದ ಐವರು ಮಡದಿಯರ ಗಂಡ| ಢೋಂಗಿ ಬಾಬಾನ ಪತ್ತೆಗೆ ಜಾಲ ಬೀಸಿದ ಯುಪಿ ಪೊಲೀಸರು| 

ಶಾಹಜಾಂಪುರ್(ಫೆ.04): ಢೋಂಗಿ ಬಾಬಾಗಳ ಕುರಿತು ಎಚ್ಚರಿಕೆಯಿಂದ ಇರಿ ಎಂಬ ಮನವಿಯ ಹೊರತಾಗಿಯೂ, ಮಹಿಳಾ ಭಕ್ತರು ಮೋಸ ಹೋಗುವ ಘಟನೆಗಳಿಗೆ ಕಮ್ಮಿ ಏನಿಲ್ಲ.

ಅದರಂತೆ ಮಹಿಳಾ ಭಕ್ತರಿಗೆ ಮತ್ತು ತರಿಸುವ ಇಂಜೆಕ್ಷನ್ ನೀಡಿ ಅವರೊಂದಿಗೆ ಅಸಭ್ಯ ವರ್ತನೆ ತೋರುತ್ತಿದ್ದ ಢೋಂಗಿ ಬಾಬಾನೋರ್ವ ಸದ್ಯದಲ್ಲೇ ಕಂಬಿ ಎಣಿಸಲಿದ್ದಾನೆ.

ಉತ್ತರಪ್ರದೇಶದ ಶಾಹಜಾಂಪುರ್’ನ ಢೋಂಗಿ ಬಾಬಾ ಅನುಜ್ ಚೇತನ್ ಸರಸ್ವತಿಯ ಅಸಲಿ ಬಂಡವಾಳ ಬಯಲಾಗಿದ್ದು, ಸತ್ಸಂಗದ ನೆಪದಲ್ಲಿ ಮಹಿಳೆಯರನ್ನು ಮಂಚಕ್ಕೆ ಕರೆಯುತ್ತಿದ್ದ ಪಾಪಿಗಾಗಿ ಪೊಲೀಸರು ಹಡುಕಾಟ ಆರಂಭಿಸಿದ್ದಾರೆ.

ಈಗಾಗಲೇ ಐಧು ಮದುವೆಯಾಗಿರುವ ಢೋಂಗಿ ಅನುಜ್ ಚೇತನ್, ಸತ್ಸಂಗದ ನೆಪದಲ್ಲಿ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ ಎಂದು ಆರೋಪಿಸಲಾಗಿದೆ. ಈ ಕುರಿತು ಈತನ ಮಹಿಳಾ ಭಕ್ತರೇ ಪೊಲೀಸರಿಗೆ ದೂರು ನೀಡಿದ್ದು, ಆತನ ಅಸಭ್ಯ ವರ್ತನೆಯ ಫೋಟೋಗಳನ್ನು ಪೊಲೀಸರಿಗೆ ನೀಡಿದ್ದಾರೆ.

ಮಹಿಳಾ ಭಕ್ತರಿಗೆ ಮತ್ತು ತರಿಸುವ ಇಂಜೆಕ್ಷನ್ ನೀಡಿ ಅವರನ್ನು ಮೈ ಮಾರುವ ಧಂಧೆಗೆ ದೂಡುತ್ತಿದ್ದ ಆರೋಪ ಹೊರಿಸಲಾಗಿದ್ದು, ತಲೆಮರೆಸಿಕೊಂಡಿರುವ ಢೋಂಗಿ ಬಾಬಾನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಈ ಕುರಿತು ದೂರು ಸ್ವೀಕರಿಸಿರುವ ಡಿಐಜಿ ರಾಜೇಶ್ ಕುಮಾರ್ ಪಾಂಡೆ, ಮಹಿಳಾ ಭಕ್ತರು ನೀಡಿರುವ ದೂರನ್ನು ಆಧರಿಸಿ ಢೋಂಗಿ ಬಾಬಾನ ಬಂಧನಕ್ಕೆ ತಂಡ ರಚಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!
ಬೆಂಗಳೂರು ವಿಜಯ್ ಗುರೂಜಿ ಗ್ಯಾಂಗ್ ಸಮೇತ ಅರೆಸ್ಟ್; ಟೆಕ್ಕಿಗೆ ಲೈಂಗಿಕ ಶಕ್ತಿ ಹೆಚ್ಚಿಸೋದಾಗಿ ₹40 ಲಕ್ಷ ವಂಚನೆ!