ಭಕ್ತನಂತೆ ಬಂದು ದೇವಸ್ಥಾನದ ಹುಂಡಿ ಕಳವು; ಖತರ್ನಾಕ್ ಕಳ್ಳ ಕುಣಿಗಲ್ ಸಿದ್ದಿಕ್ ಬಂಧನ

Published : Oct 30, 2022, 03:01 PM ISTUpdated : Oct 30, 2022, 03:04 PM IST
ಭಕ್ತನಂತೆ ಬಂದು ದೇವಸ್ಥಾನದ ಹುಂಡಿ ಕಳವು; ಖತರ್ನಾಕ್ ಕಳ್ಳ ಕುಣಿಗಲ್ ಸಿದ್ದಿಕ್ ಬಂಧನ

ಸಾರಾಂಶ

ಇವನು ಫಿಲ್ಡ್‌ಗಿಳಿದ್ರೆ ಸಾಕು, ಒಂದು  ದೇವಸ್ಥಾನದ ಹುಂಡಿ ಕಳ್ಳತಮವಾಗುತ್ತೆ ಇಲ್ಲ ಪ್ರಯಾಣಿಕರ ಚಿನ್ನಾಭರಣ ಕಾಣೆಯಾಗಿತ್ತೆ. ಅಂತಹ ನಟೋರಿಯಸ್ ಕ್ರಿಮಿನಲ್‌ನನ್ನು ಉಪ್ಪಾರ್ ಪೇಟೆ ಪೊಲೀಸರು ಬಂಧಿಸಿದ್ದಾರೆ. ಸಿದ್ದಿಕ್@ ಕುಣಿಗಲ್ ಸಿದ್ದಿಕ್ ಎಂಬುವವನೇ ಖತರ್ನಾಕ್ ಖದೀಮ.

ಬೆಂಗಳೂರು (ಅ.30) : ಇವನು ಫಿಲ್ಡ್‌ಗಿಳಿದ್ರೆ ಸಾಕು, ಒಂದು  ದೇವಸ್ಥಾನದ ಹುಂಡಿ ಕಳ್ಳತಮವಾಗುತ್ತೆ ಇಲ್ಲ ಪ್ರಯಾಣಿಕರ ಚಿನ್ನಾಭರಣ ಕಾಣೆಯಾಗಿತ್ತೆ. ಅಂತಹ ನಟೋರಿಯಸ್ ಕ್ರಿಮಿನಲ್‌ನನ್ನು ಉಪ್ಪಾರ್ ಪೇಟೆ ಪೊಲೀಸರು ಬಂಧಿಸಿದ್ದಾರೆ. ಸಿದ್ದಿಕ್@ ಕುಣಿಗಲ್ ಸಿದ್ದಿಕ್ ಎಂಬ ಈ ಆರೋಪಿ, ದೇವಸ್ಥಾನದಲ್ಲಿ ಭಕ್ತನಂತೆ ಬಂದು ದೇವಸ್ಥಾನದ ಹುಂಡಿಯನ್ನ ಖಾಲಿ ಮಾಡುತ್ತಿದ್ದ ಖತರ್ನಾಕ್ ಕಳ್ಳ. ಹುಂಡಿ ಕಳ್ಳತನ ಮಾಡ್ತಿದ್ದಂತೆ ಸುಳಿವು ಸಿಗದಂತೆ ಪರಾರಿಯಾಗಿಬಿಡ್ತಿದ್ದ. ದೇವಸ್ಥಾನದ ಹುಂಡಿ ಕಳ್ಳತನದ ಬಗ್ಗೆ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ಬೆನ್ನು ಹತ್ತಿದ ಪೊಲೀಸರಿಗೆ ಈ ಖದೀಮ ಸಿಕ್ಕಿಬಿದ್ದಿದ್ದಾನೆ. 

ಬೆಂಗಳೂರು: ಪಬ್‌, ಬಾರ್‌ ಖರ್ಚಿಗಾಗಿ 30 ಬೈಕ್‌ ಎಗರಿಸಿದ್ದ ಖದೀಮರ ಬಂಧನ

ಉಪ್ಪಾರಪೇಟೆ ಪೊಲೀಸರು ಖದೀಮನನ್ನ ಬಂಧಿಸಿ ಕರೆತಂದು ವಿಚಾರಿಸಿದಾಗ ಕಳ್ಳತನ ಬಯಲಾಗಿದೆ. ಇವನು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರನ್ನ ಹಿಂಬಾಲಿಸಿ ಅವರ ಬಳಿ ಇದ್ದ ಚಿನ್ನಾಭರಣವನ್ನ ಕದಿಯುತ್ತಿದ್ದ ಅಷ್ಟೇ ಅಲ್ಲ, ಅಕ್ಕ ಪಕ್ಕದ ದೇವಸ್ಥಾನದಲ್ಲಿ ಜನಜಂಗುಳಿ ನೋಡಿಕೊಂಡು ಭಕ್ತನಂತೆ ನುಗ್ಗಿ ಹುಂಡಿ ಹಣ ಕಳುವು ಮಾಡುತ್ತಿದ್ದ. 

ಸದ್ಯ ಪೊಲೀಸರು ಖದೀಮನನ್ನ ಬಂಧಿಸಿದ್ದಾರೆ. 3ಲಕ್ಷ 75 ಸಾವಿರ ಮೌಲ್ಯದ  77 ಗ್ರಾಂ ಚಿನ್ನಾಭರಣವನ್ನ ವಶಕ್ಕೆ ಪಡೆಯಲಾಗಿದೆ. ಇನ್ನಷ್ಟು ಪ್ರಕರಣಗಳಲ್ಲಿ ಇವನ ಕೈಚಳಕ ಇರುವ ಬಗ್ಗೆ ಸಂಶಯ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಬೀಗ ಹಾಕಿದ ಮನೆಗಳೇ ಇವನ ಟಾರ್ಗೆಟ್!

 ಬೀಗ ಹಾಕಿರುವ ಮನೆಗಳನ್ನ ಟಾರ್ಗೆಟ್ ಮಾಡಿ ಕಳ್ಳತನ ಮಾಡ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇಮ್ರಾನ್ ಖಾನ್ @ಕೀಡ್ ಹಾಗೂ ಸಲ್ಮಾನ್ ಖಾನ್ ಬಂಧಿತ ಆರೋಪಿಗಳು. ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಹಿನ್ನಲೆ, ತನಿಖೆಗಿಳಿದ ಪೊಲೀಸರು ಆರೋಪಿಗಳನ್ನ ಪತ್ತೆ ಹಚ್ಚಿ ಬಂಧಿಸಿದ್ದಾರೆ. ಆರೋಪಿಗಳಿಂದ 5 ಲಕ್ಷ ಮೌಲ್ಯದ 100 ಗ್ರಾಂ ಚಿನ್ನಾಭರಣವನ್ನ ವಶಕ್ಕೆ ಪಡೆಯಲಾಗಿದೆ. ಇನ್ನು ಇವರನ್ನ ವಿಚಾರಣೆ ನಡೆಸಿದಾಗ ಈ ಹಿಂದೆ ಚಾಮರಾಜಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೂಡ ಕಳ್ಳತನ ನಡೆಸಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವಿದ್ಯುತ್‌ ಕಂಬಗಳಲ್ಲಿದ್ದ ಅ​ಲ್ಯೂಮಿನಿಯಂ ಪಟ್ಟಿಗಳೇ ಕಳವು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು