ಕೊಲೆ ಪ್ರಕರಣ: ದರ್ಶನ್ ಸಿಗರೇಟ್ ಬೇಡಿಕೆಗೆ ಕ್ಯಾರೆ ಎನ್ನದ ಪೊಲೀಸರು..!

Published : Jun 12, 2024, 10:58 AM IST
ಕೊಲೆ ಪ್ರಕರಣ: ದರ್ಶನ್ ಸಿಗರೇಟ್ ಬೇಡಿಕೆಗೆ ಕ್ಯಾರೆ ಎನ್ನದ ಪೊಲೀಸರು..!

ಸಾರಾಂಶ

ಊಟ ಸೇರ್ತಿಲ್ಲ‌ ಅಂತಾ ದರ್ಶನ್‌ ನಿನ್ನೆ ಮಧ್ಯಾಹ್ನ ಜ್ಯೂಸ್ ಕುಡಿದು ಚಾಕಲೇಟ್ ತಿಂದಿದ್ದರಂತೆ. ಸಂಜೆ ಕೂಡ ಊಟ ಬೇಡ ಅಂತ ಮಜ್ಜಿಗೆ ಕುಡಿದು ದರ್ಶನ್ ಮಲಗಿದ್ದಾರೆ. ಇನ್ನು ಅರೆಸ್ಟ್ ಆದಾಗಿನಿಂದ ದರ್ಶನ್ ಬಹಳ ಟೆನ್ಷನ್‌ನಲ್ಲಿದ್ದಾರೆ. ಟೆನ್ಷನ್‌ನಲ್ಲಿ ಪೊಲೀಸ್ರ ಬಳಿ ಸಿಗರೇಟ್‌ಗೆ ಮಾತ್ರ ಬೇಡಿಕೆ ಇಟ್ಟಿದ್ದಾರೆ.   

ಬೆಂಗಳೂರು(ಜೂ.12):  ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ ಸ್ಯಾಂಡಲ್‌ವುಡ್ ನಟ ದರ್ಶನ್ ಸಿಗರೇಟ್ ಬೇಡಿಕೆಗೆ ಪೊಲೀಸರು ಕ್ಯಾರೆ ಎಂದಿಲ್ಲ. ಹೌದು, ಪೊಲೀಸ್‌ ಕಸ್ಟಡಿಯಲ್ಲಿರುವ ಆರೋಪಿ ದರ್ಶನ್ ಸಿಗರೇಟ್ ಕೇಳಿದ್ದಾರೆ. ಸಿಗರೇಟ್ ನೀಡಲು ಸಾಧ್ಯವಿಲ್ಲ ಅಂತ ದರ್ಶನ್ ಬೇಡಿಕೆಯನ್ನ ಪೊಲೀಸರು ನಿರಾಕರಿಸಿದ್ದಾರೆ.  

ಇನ್ನು ದರ್ಶನ್ ನಿನ್ನೆ(ಮಂಗಳವಾರ)ಯಿಂದ ಜ್ಯೂಸ್ ಮತ್ತು ಮಜ್ಜಿಗೆಯನ್ನ ಮಾತ್ರ ಕುಡಿದಿದ್ದಾರೆ. ಪೊಲೀಸ್ ಠಾಣೆಯಲ್ಲಿ ನಿನ್ನೆ ಮಧ್ಯಾಹ್ನದಿಂದ ಊಟ ಮಾಡಿಲ್ಲ, ದರ್ಶನ್ ನಿನ್ನೆ ಬೆಳಿಗ್ಗೆ ಇಡ್ಲಿ ತಿಂದಿದ್ದರಂತೆ. 

ಮರ್ಮಾಂಗದ ಫೋಟೋ ಕಳುಹಿಸಿದ್ದ ರೇಣುಕಾಸ್ವಾಮಿ: ದರ್ಶನ್‌ ಸಿಟ್ಟಿಗೇಳಲು ಇದೇ ಕಾರಣವಂತೆ!

ಊಟ ಸೇರ್ತಿಲ್ಲ‌ ಅಂತಾ ನಿನ್ನೆ ಮಧ್ಯಾಹ್ನ ಜ್ಯೂಸ್ ಕುಡಿದು ಚಾಕಲೇಟ್ ತಿಂದಿದ್ದರಂತೆ. ಸಂಜೆ ಕೂಡ ಊಟ ಬೇಡ ಅಂತ ಮಜ್ಜಿಗೆ ಕುಡಿದು ದರ್ಶನ್ ಮಲಗಿದ್ದಾರೆ. ಇನ್ನು ಅರೆಸ್ಟ್ ಆದಾಗಿನಿಂದ ದರ್ಶನ್ ಬಹಳ ಟೆನ್ಷನ್‌ನಲ್ಲಿದ್ದಾರೆ. ಟೆನ್ಷನ್‌ನಲ್ಲಿ ಪೊಲೀಸ್ರ ಬಳಿ ಸಿಗರೇಟ್‌ಗೆ ಮಾತ್ರ ಬೇಡಿಕೆ ಇಟ್ಟಿದ್ದಾರೆ. ಸ್ಟೇಷನ್‌ ನಲ್ಲಿ ಇದಕ್ಕೆಲ್ಲ ಅವಕಾಶ ಇಲ್ಲ ಅಂತ ಪೊಲೀಸ್ರು ಖಡಕ್ ಆಗೆ ದರ್ಶನ್‌ಗೆ ಎಚ್ಚರಿಕೆ ನೀಡಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರಿನ ಬಾಡಿಗೆ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ
ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!