ಅಫಜಲ್ಪುರದಲ್ಲಿ ಗಾಂಜಾ ದಂಧೆ: ನಾಡ ಪಿಸ್ತೂಲ್‌ ಜಪ್ತಿ

Kannadaprabha News   | Asianet News
Published : Sep 16, 2020, 03:39 PM IST
ಅಫಜಲ್ಪುರದಲ್ಲಿ ಗಾಂಜಾ ದಂಧೆ: ನಾಡ ಪಿಸ್ತೂಲ್‌ ಜಪ್ತಿ

ಸಾರಾಂಶ

ಕಲಬುರಗಿ ಜಿಲ್ಲೆಯ ಅಫಜಲ್ಪುರದಲ್ಲಿ 63 ಕೆಜಿ ಗಾಂಜಾ, 1 ಪಿಸ್ತೂಲ್‌, 2 ಜೀವಂತ ಗುಂಡುಗಳು ಜಪ್ತಿ| ದಾಳಿ ವೇಳೆ 63 ಕೆಜಿ ಗಾಂಜಾ, 1 ಪಿಸ್ತೂಲ್‌, 2 ಜೀವಂತ ಗುಂಡುಗಳು ಜಪ್ತಿ| ಗಾಂಜಾ ಬೆಳೆದು ಲಾಭಕ್ಕಾಗಿ ಮಹಾರಾಷ್ಟ್ರ ಮತ್ತಿತರ ಭಾಗಗಳಲ್ಲಿ ಮಾರಿಕೊಳ್ಳುತ್ತಿರುವುದಾಗಿ ತಿಳಿಸಿದ ಆರೋಪಿ| 

ಅಫಜಲ್ಪುರ(ಸೆ.16): ಕಲಬುರಗಿ ಜಿಲ್ಲೆಯ ಅಫಜಲ್ಪುರ ತಾಲೂಕಿನಲ್ಲಿ ಗಾಂಜಾ ವಿರುದ್ಧ ಪೊಲೀಸರು ಸಮರ ಸಾರಿದ್ದು, ಮಂಗಳವಾರ ಪೊಲೀಸರು ನಡೆಸಿರುವ ದಾಳಿಯಲ್ಲಿ ಗಾಂಜಾ ಗಿಡಗಳು, ಜೊತೆಗೆ ನಾಡ ಪಿಸ್ತೂಲ್‌, ಜೀವಂತ ಗುಂಡುಗಳು ಪತ್ತೆಯಾಗಿವೆ.

ಬಡದಾಳ ಗ್ರಾಮದ ಅರ್ಜುಣಗಿ ರಸ್ತೆಯಲ್ಲಿರುವ ಜಯಾನಂದ ಶಿವನಿಂಗಪ್ಪ ನಿಲಂಗಿ(35) ಇವರ ಹೊಲದಲ್ಲಿ ಅಂದಾಜು 1 ಲಕ್ಷ ಮೌಲ್ಯದ ಗಾಂಜಾವನ್ನು ಅಫಜಲ್ಪುರ ಠಾಣೆ ಪಿಎಸ್‌ಐ ಸಂತೋಷ ತಟ್ಟೆಪಳ್ಳಿ, ತಹಸೀಲ್ದಾರ ಯಲ್ಲಪ್ಪ ಸುಬೇದಾರ ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ. ಈ ಕುರಿತು ಪಿಎಸ್‌ಐ ಸಂತೋಷ ತಟ್ಟೆಪಳ್ಳಿ ಮಾಹಿತಿ ನೀಡಿದ್ದು, ಬಡದಾಳ ಗ್ರಾಮದಲ್ಲಿ ಜಯನಂದ ನಿಲಂಗಿ ತಮ್ಮ ಹೊಲದಲ್ಲಿ ಗಾಂಜಾ ಬೆಳೆಯುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದಾಗ ಕಬ್ಬಿನ ಹೊಲದಲ್ಲಿ 63 ಗಾಂಜಾ ಗಿಡಗಳು ಪತ್ತೆಯಾಗಿವೆ. 63 ಕೆ.ಜಿ ಗಾಂಜಾ ಇದ್ದು ಇದರ ಮೌಲ್ಯ 1 ಲಕ್ಷದಷ್ಟುಆಗಲಿದೆ ಎಂದು ಹೇಳಿದ್ದಾರೆ.

ಬೃಹತ್‌ ಗಾಂಜಾ ಕೇಸ್‌: ಸಿಪಿಐ, ಪಿಎಸ್‌ಐ ಸೇರಿ ಐವರು ಅಮಾನತು

ಇಷ್ಟೊಂದು ಪ್ರಮಾಣದ ಗಾಂಜಾ ಬೆಳೆದು ತನ್ನ ಲಾಭಕ್ಕಾಗಿ ಮಹಾರಾಷ್ಟ್ರ ಮತ್ತಿತರ ಭಾಗಗಳಲ್ಲಿ ತಾನೆ ಖುದ್ದಾಗಿ ಮಾರಿಕೊಳ್ಳುತ್ತಿರುವುದಾಗಿ ಜಯನಂದ ಒಪ್ಪಿಕೊಂಡಿದ್ದಾಗಿ ತಿಳಿಸಿದ ಅವರು, ಜಯನಂದನ ಹೊಲದಲ್ಲಿರುವ ಮನೆಯಲ್ಲಿ ಪರವಾನಗಿ ಇಲ್ಲದ ಒಂದು ನಾಡ ಪಿಸ್ತೂಲ್‌, ಎರಡು ಜೀವಂತ ಗುಂಡುಗಳು ಸಹ ಪತ್ತೆಯಾಗಿವೆ.

ಗಾಂಜಾ ಬೆಳೆದಾತ ತಾನು ಒಬ್ಬನೆ ಹೊಲದಲ್ಲಿ ವಾಸವಿರುತ್ತೇನೆ. ಹೀಗಾಗಿ ಆತ್ಮ ರಕ್ಷಣೆಗಾಗಿ ನಾಡ ಪಿಸ್ತೂಲ್‌ 7 ವರ್ಷಗಳ ಹಿಂದೆ ಖರೀದಿಸಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಕಾನೂನು ಕ್ರಮಕ್ಕೆ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದೇವೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ತಹಸೀಲ್ದಾರ ಯಲ್ಲಪ್ಪ ಸುಬೇದಾರ, ಕಂದಾಯ ಇಲಾಖೆ ಅಧಿಕಾರಿಗಳು, ಪೊಲೀಸ್‌ ಸಿಬ್ಬಂದಿಗಳು ಇದ್ದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ವೃದ್ಧೆಯ ಕೇರ್ ಟೇಕರ್‌ನಿಂದಲೇ ₹31 ಲಕ್ಷ ಮೌಲ್ಯದ ಚಿನ್ನಾಭರಣ ಕಳವು: ಬಿಹಾರ ಮೂಲದ ಚಾಂದಿನಿ ಬಂಧನ!
ಈ ವರ್ತನೆ ಸರಿಯಲ್ಲ, ಹೈಕೋರ್ಟ್ ಪರಿಗಣಿಸುವ ಮೊದಲು ಕ್ಷಮೆ ಮುಖ್ಯ, ಪ್ರಜ್ವಲ್ ರೇವಣ್ಣ ಅರ್ಜಿಗೆ ಸುಪ್ರೀಂ ಕೆಂಡ!