ಎಟಿಎಂಗೆ ಡಿವೈಸ್‌ ಅಳವಡಿಸಿ 17 ಲಕ್ಷ ಕದ್ದ ಚಾಲಾಕಿ ಕಳ್ಳಿ..!

Kannadaprabha News   | Asianet News
Published : Jan 17, 2021, 07:12 AM IST
ಎಟಿಎಂಗೆ ಡಿವೈಸ್‌ ಅಳವಡಿಸಿ 17 ಲಕ್ಷ ಕದ್ದ ಚಾಲಾಕಿ ಕಳ್ಳಿ..!

ಸಾರಾಂಶ

ಸಂಪಿಗೆಹಳ್ಳಿ ಪೊಲೀಸ್‌ ಬಲೆಗೆ ಬಿದ್ದ ವಿದೇಶಿ ಮಹಿಳೆ| ಮತ್ತೊಬ್ಬ ಆರೋಪಿಗೆ ಬಲೆ| ಕೃತ್ಯದಲ್ಲಿ ತಲೆಮರೆಸಿಕೊಂಡಿರುವ ಆಕೆಯ ಸ್ನೇಹಿತರ ಪತ್ತೆಗೆ ಮುಂದುವರೆದ ತನಿಖೆ| ಕ್ಯಾಮರಾದಲ್ಲಿ ಸೆರೆಸಿಕ್ಕ ಮುಖ ಚಹರೆ ಆಧರಿಸಿ ಆರೋಪಿ ಬಂಧನ| 

ಬೆಂಗಳೂರು(ಜ.17): ಎಟಿಎಂ ಕೇಂದ್ರಗಳಲ್ಲಿ ಡಿವೈಸ್‌ ಅಳವಡಿಸಿ ಖಾತೆಯಲ್ಲಿ ಹಣ ಇಲ್ಲದಿದ್ದರೂ 17 ಲಕ್ಷ ರು. ಹಣ ಡ್ರಾ ಮಾಡಿದ್ದ ಚಾಲಾಕಿ ವಿದೇಶಿ ಮಹಿಳೆಯೊಬ್ಬರು ಸಂಪಿಗೆಹಳ್ಳಿ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾಳೆ.

ಸ್ಪೇನ್‌ ದೇಶದ ಸೇಫಿನಿ ಬಂಧಿತಳಾಗಿದ್ದು, ಈ ಕೃತ್ಯದಲ್ಲಿ ತಲೆಮರೆಸಿಕೊಂಡಿರುವ ಆಕೆಯ ಸ್ನೇಹಿತರ ಪತ್ತೆಗೆ ತನಿಖೆ ಮುಂದುವರೆದಿದೆ. ಕೆಲ ದಿನಗಳ ಹಿಂದೆ ಡಾ.ಶಿವರಾಮ ಕಾರಂತ ನಗರದಲ್ಲಿ ಎಸ್‌ಬಿಐ ಬ್ಯಾಂಕ್‌ನ ಎಟಿಎಂ ಘಟಕದಲ್ಲಿ ಆಕೆ ಹಣ ದೋಚಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಜ.10ರ ರಾತ್ರಿ 11 ಗಂಟೆಗೆ ಎಸ್‌ಬಿಐ ಬ್ಯಾಂಕ್‌ನ ಎಟಿಎಂಗೆ ತೆರಳಿದ ಗ್ರಾಹಕರೊಬ್ಬರು, 1,500 ಡ್ರಾ ಮಾಡಲು ನಂಬರ್‌ ಒತ್ತಿದ್ದರು. ಆದರೆ ಕೂಡಲೇ ಯಂತ್ರದಿಂದ 1 ಲಕ್ಷ ಹಣ ಹೊರ ಬಂದಿದೆ. ಇದರಿಂದ ಗಾಬರಿಗೊಳಗಾದ ಅವರು, ತಕ್ಷಣ ಬ್ಯಾಂಕ್‌ ಹೆಲ್ಪ್‌ಲೈನ್‌ಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದರು. ಈ ಮಾಹಿತಿ ತಿಳಿದ ಬ್ಯಾಂಕ್‌ ವ್ಯವಸ್ಥಾಪಕರು, ಆ ಎಟಿಎಂ ಪರಿಶೀಲನೆಗೆ ಸಿಬ್ಬಂದಿ ಜತೆ ಆಗಮಿಸಿದ್ದರು. ಬಳಿಕ ವ್ಯವಸ್ಥಾಪಕರು, ತಮ್ಮ ಎಟಿಎಂ ಕಾರ್ಡ್‌ ಬಳಸಿ 1500 ಡ್ರಾ ಮಾಡಿದಾಗ ಸರಿಯಾಗಿ ಕೆಲಸ ಮಾಡಿದೆ. ಮತ್ತೆ 1500 ರೂ. ಡ್ರಾ ಮಾಡಿದಾಗಲೂ ಸರಿಯಾದ ಮೊತ್ತವೇ ಡ್ರಾ ಆಗಿದೆ. ಕೊನೆಗೆ ಬ್ಯಾಂಕ್‌ ಅಧಿಕಾರಿಗಳು ಯಂತ್ರವನ್ನು ಸ್ಥಗಿತ ಮಾಡಿ ವಾಪಸ್‌ ಹೋಗಿದ್ದರು. ಮರು ದಿನ ತಾಂತ್ರಿಕ ಸಿಬ್ಬಂದಿ ಜತೆ ಬಂದು ಪರಿಶೀಲಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ಕೊನೆಗೆ ವ್ಯವಸ್ಥಾಪಕರು ನೀಡಿದ ದೂರಿನ ಮೇರೆಗೆ ಆರೋಪಿ ಬಂಧನವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಣ ದಾನ ಮಾಡ್ತಿದ್ದ ರಾಬಿನ್ ಹುಡ್ ಸಿಕ್ಕಿಬಿದ್ದ... ಜತೆಗೆ ಇನ್ನೊಂದು ಕೆಲಸ!

ಹೇಗೆ ಕೃತ್ಯ?

ಶಿವರಾಮಕಾರಂತ ನಗರದ ಎಸ್‌ಬಿಐ ಬ್ಯಾಂಕ್‌ನ ಎಟಿಎಂ ಕೇಂದ್ರಕ್ಕೆ ಜ.10 ರಂದು ಮಧ್ಯಾಹ್ನ ತೆರಳಿದ್ದ ಸೇಫಿನಿ, ಅಲ್ಲಿನ ಹಣ ಪಡೆಯುವ ಯಂತ್ರಕ್ಕೆ ಡಿವೈಸ್‌ ಅಳವಡಿಸಿ ಅದರೊಳಗಿನ ಉಪಕರಣಗಳ ಕಾರ್ಯಸ್ಥಗಿತಗೊಳಿಸಿದ್ದಳು. ಬಳಿಕ ಎಟಿಎಂನಲ್ಲಿ ಹಂತ ಹಂತವಾಗಿ .17.71 ಲಕ್ಷ ಡ್ರಾ ಮಾಡಿದ್ದಳು. ಎಟಿಎಂ ಯಂತ್ರವನ್ನು ತಪಾಸಣೆ ನಡೆಸಿದಾಗ ಅದರಲ್ಲಿನ ಡಿವೈಎಸ್‌ ಕಾರ್ಯಸ್ಥಗಿತವಾಗಿದ್ದು, ಮತ್ತೊಂದು ಡಿವೈಎಸ್‌ ಚಾಲ್ತಿಯಲ್ಲಿತ್ತು. ಕೂಡಲೇ ಎಚ್ಚೆತ್ತು ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲನೆ ನಡೆಸಿದಾಗ ಯುವತಿಯೊಬ್ಬಳು, ಎಟಿಎಂ ಕೇಂದ್ರಕ್ಕೆ ಪ್ರವೇಶಿಸಿ ಡಿವೈಸ್‌ ಅಳವಡಿಸುತ್ತಿರುವ ದೃಶ್ಯಾವಳಿ ಪತ್ತೆಯಾಯಿತು. ಕ್ಯಾಮರಾದಲ್ಲಿ ಸೆರೆಸಿಕ್ಕ ಮುಖ ಚಹರೆ ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!
ಬೆಂಗಳೂರು ವಿಜಯ್ ಗುರೂಜಿ ಗ್ಯಾಂಗ್ ಸಮೇತ ಅರೆಸ್ಟ್; ಟೆಕ್ಕಿಗೆ ಲೈಂಗಿಕ ಶಕ್ತಿ ಹೆಚ್ಚಿಸೋದಾಗಿ ₹40 ಲಕ್ಷ ವಂಚನೆ!