ಬೆಂಗಳೂರಿನಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: 6 ಆರೋಪಿಗಳ ಬಂಧನ!

Published : Oct 18, 2023, 10:52 AM ISTUpdated : Oct 18, 2023, 11:25 AM IST
ಬೆಂಗಳೂರಿನಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: 6 ಆರೋಪಿಗಳ ಬಂಧನ!

ಸಾರಾಂಶ

ಸಿಲಿಕಾನ್ ಸಿಟಿಯಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ ಮೇಲೆ ಸಿಸಿಬಿ ತಂಡ ದಾಳಿ ಮಾಡಿದೆ. ಹೈಟೆಕ್ ದಂಧೆ ಹೀಗೂ ಮಾಡ್ತಾರಾ ಅಂತ ಸಿಸಿಬಿ ಪೊಲೀಸರೇ ಶಾಕ್ ಆಗಿದ್ದಾರೆ.ಆರೋಪಿಗಳು ಯುವತಿಯರನ್ನು ಡೋರ್ ಡಿಲ್ವರಿ ಮಾಡ್ತಿದ್ದ ರಹಸ್ಯ ತನಿಖೆ ವೇಳೆ ಬಯಲಾಗಿದೆ.

ಕಿರಣ್.ಕೆ.ಎನ್, ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು

ಬೆಂಗಳೂರು (ಅ.18): ಸಿಲಿಕಾನ್ ಸಿಟಿಯಲ್ಲಿ ಹೈಟೆಕ್ ವೇಶ್ಯಾವಾಟಿಕೆದಂಧೆ ಮೇಲೆ ಸಿಸಿಬಿ ತಂಡ ದಾಳಿ ಮಾಡಿದೆ. ಹೈಟೆಕ್ ದಂಧೆ ಹೀಗೂ ಮಾಡ್ತಾರಾ ಅಂತ ಸಿಸಿಬಿ ಪೊಲೀಸರೇ ಶಾಕ್ ಆಗಿದ್ದಾರೆ.ಆರೋಪಿಗಳು ಯುವತಿಯರನ್ನು ಡೋರ್ ಡಿಲ್ವರಿ ಮಾಡ್ತಿದ್ದ ರಹಸ್ಯ ತನಿಖೆ ವೇಳೆ ಬಯಲಾಗಿದೆ. ಆನ್ ಲೈನ್ ಮೂಲಕ ಸಂಪರ್ಕ ಮಾಡುತ್ತಿದ್ದ ಗ್ರಾಹಕರಿಗೆ ದಂಧೆಗಾಗಿ ಕಾಲ್ ಸೆಂಟರ್ ತೆರೆಯಲಾಗಿತ್ತು. ಕಾಲ್ ಗರ್ಲ್ ಗಳಿಗಾಗಿ ಸಂಪರ್ಕಿಸೋ ಗ್ರಾಹಕರ ಕರೆಯನ್ನು ಕಾಲ್ ಸೆಂಟರ್ ಸಿಬ್ಬಂದಿ ಸ್ವೀಕರಿಸುತ್ತಿದ್ದರು. ಬಳಿಕ ಹುಡ್ಗಿ ರೇಟ್ ಮೇಲೆ ಬುಕ್ ಮಾಡಲಾಗುತ್ತಿತ್ತು.

ನಂತರ ಗ್ರಾಹಕರ ಮನೆಗೆ ಯುವತಿಯರ ಸಪ್ಲೈ ಮಾಡುತ್ತಿದ್ದರು. ಬಾಗಲುಗುಂಟೆ ಬಳಿಯ ಎಂಇಎ ಲೇಔಟ್ ನ ಅಪಾರ್ಟ್ ಮೆಂಟ್ ಪ್ಲಾಟ್ ಬಾಡಿಗೆಗೆ ತೆಗೆದುಕೊಂಡಿದ್ರು. ಪ್ಲಾಟ್ ಬಾಡಿಗೆಗೆ ಪಡೆದು ಹುಡ್ಗಿ ಇಟ್ಟುಕೊಂಡು ವೆಶ್ಯಾವಟಿಕೆ ನಡೆಸಲಾಗುತ್ತಿತ್ತು. ಕಾಲ್ ಮಾಡಿ ಬುಕ್ ಮಾಡೋ ಯುವಕರ ಜೊತೆ ಯುವತಿಯರನ್ನು ಕಳಿಸಿಕೊಡುತ್ತಿದ್ರು. ಬಾಗಲುಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಂಧೆ ನಡೆಯುತ್ತಿತ್ತು. ಆದರೆ ಪೊಲೀಸರು ಕಣ್ಣು ಮುಚ್ಚಿಕುಳಿತ್ತಿದ್ರು ಎನ್ನಲಾಗಿದೆ. ಈ ಸಂಬಂಧ ಕೆಲದಿನಗಳ ಹಿಂದೆ ರೇಡ್ ಸಿಸಿಬಿ ತಂಡ ರೇಡ್ ಮಾಡಿದ್ರು. ಈ ವೇಳೆ ಆರೋಪಿಗಳಾದ ಮಂಜುನಾಥ್ ,ಪ್ರದೀಪ್ ,ಶಿವರಾಜ್ ,ಬಸವರಾಜ್, ರಾಯಾ, ಉಮೇಶ್ ಬಂಧಿಸಲಾಗಿದೆ. 

ಇಬ್ರಾಹಿಂ ಒರಿಜಿನಲ್‌ ಪಕ್ಷ ಎಂಬ ಬೋರ್ಡ್‌ ಹಾಕಿಕೊಳ್ಳಲಿ: ಎಚ್‌.ಡಿ.ಕುಮಾರಸ್ವಾಮಿ ಗರಂ

ಮೂವರು ಯುವತಿಯರ ರಕ್ಷಣೆ ಮಾಡಲಾಗಿದೆ.ವಿಶೇಷ ಅಂದ್ರೆ ಕಾಲ್ ಸೆಂಟರ್ ರೀತಿ ತೆರೆದು ಸಂಪರ್ಕ ಸಾಧಿಸಿ ಸಪ್ಲೈ ಮಾಡೋ ಹೊಸ ವಿಧಾನವನ್ನು ದಂಧೆಕೋರರು ಕಂಡು ಕೊಂಡಿದ್ದಾರೆ. ಆನ್ ಲೈನ್ ವೆಬ್ ಸೈಟ್ ಮೂಲಕ ಸಂಪರ್ಕಿಸುತ್ತಿದ್ದ ಗ್ರಾಹಕರಿಗೆ ಹುಡುಗಿ ಪೋಟೋ ವಾಟ್ಸಪ್ ಮಾಡುತ್ತಿದ್ದ ಆರೋಪಿಗಳು. ಯಾವ ಹುಡುಗಿ ಇಷ್ಟ ಆಗುತ್ತೋ ಆ ಹುಡ್ಗಿಗೆ ಇಷ್ಟು ಹಣ ಅಂತ ಫಿಕ್ಸ್ ಮಾಡಿ ಕಳಿಸಲಾಗುತ್ತಿತ್ತು. ಗಿರಾಕಿ ಮನೆ ಬಾಗಿಲಿಗೆ ಹೋಗಿ ಬಿಟ್ಟು ಬರುತ್ತಿದ್ದ ಆರೋಪಿಗಳು. ಈ ಸಂಬಂಧ ಬಾಗಲಗುಂಟೆ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು