
ಗೋಕಾಕ(ಸೆ.30): ನಗರದ ಕಿಲ್ಲಾ ಗಲ್ಲಿಯಲ್ಲಿ ಬೇರೊಬ್ಬರ ಮನೆಯ ಮುಂದೆ ಮುಸ್ಲಿಂ ಮಹಿಳೆಯೊಬ್ಬಳು ನೇಣಿಗೆ ಶರಣಾದ ಘಟನೆ ಗುರುವಾರ ಬೆಳಗಿನ ಜಾವ ಸಂಭವಿಸಿದೆ.
ಮರಾಠಾ ಗಲ್ಲಿಯ ನಿವಾಸಿ ರೇಷ್ಮಾ ಮುಲ್ಲಾ (38) ನೇಣಿಗೆ ಶರಣಾದ ಮಹಿಳೆ. ಬೇರೆ ಬೇರೆ ಕಡೆಗಳಲ್ಲಿ ಸಾಲ ಪಡೆದಿದ್ದು ಸಾಲ ಪಾವತಿಸಲಾಗದೆ ಕಿಲ್ಲಾ ಗಲ್ಲಿಯ ಕಿರಣ ದಿಕ್ಷೀತ ಅವರ ಮನೆ ಆವರಣದಲ್ಲಿ ನೇಣಿಗೆ ಶರಣಾಗಿದ್ದಾಳೆ ಎಂದು ತಿಳಿದು ಬಂದಿದೆ.
ಗೆಳತಿಗೆ ಗುಂಡಿಕ್ಕಿ ಚಲಿಸುತ್ತಿದ್ದ ವಾಹನದ ಕೆಳಗೆ ಹಾರಿದ ಭಗ್ನಪ್ರೇಮಿ: ಇಬ್ಬರೂ ಸಾವು
ಕಳೆದ ಒಂದು ತಿಂಗಳಿಂದ ಕಿರಣ ದಿಕ್ಷೀತ ಅವರು ತಮ್ಮ ಮನೆಯ ದುರಸ್ತಿ ಕಾರ್ಯ ನಡೆಸಲು ಮನೆಯನ್ನು ಖಾಲಿ ಮಾಡಿ, ಬೇರೊಂದು ಮನೆಯಲ್ಲಿ ಬಾಡಿಗೆ ರೂಪದಲ್ಲಿ ಪಡೆದು ವಾಸವಾಗಿದ್ದರು. ಗುರುವಾರ ಬೆಳಗಿನಜಾವ 5 ಗಂಟೆಗೆ ಮೃತ ಯುವತಿ ರೇಷ್ಮಾ ದಿಕ್ಷೀತ ಅವರ ಬೀಗ ಹಾಕಿದ್ದ ಮನೆಯ ಗ್ಯಾಲರಿಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಈ ಕುರಿತು ಗೋಕಾಕ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪಿಎಸ್ಐ ಎಮ್.ಡಿ. ಘೋರಿ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ