ಬಸವನಬಾಗೇವಾಡಿ: ತಾಯಿ- ಮಗಳು ನದಿಗೆ ಹಾರಿ ಆತ್ಮಹತ್ಯೆ

Kannadaprabha News   | Asianet News
Published : Jul 13, 2020, 02:16 PM ISTUpdated : Jul 13, 2020, 02:17 PM IST
ಬಸವನಬಾಗೇವಾಡಿ: ತಾಯಿ- ಮಗಳು ನದಿಗೆ ಹಾರಿ ಆತ್ಮಹತ್ಯೆ

ಸಾರಾಂಶ

ಮೃತ ಶಕುಂತಲಾಳ ಪತಿ ವರ್ಷದ ಹಿಂದೆ ಮೃತಪಟ್ಟಿದ್ದರು, ಇದರಿಂದಾಗಿ ಅವರು ತೀವ್ರ ನೊಂದಿ​ದ್ದರು| ವಿವಾ​ಹಿತ ಮಗಳು ಗಂಗಾ ಸಹ ಮಾನಸಿಕ ಅಸ್ವಸ್ಥಳಾಗಿದ್ದಳು| ಮನನೊಂದು ಇಬ್ಬರೂ ಕೊರ್ತಿ-ಕೊಲ್ಹಾರ ಸೇತುವೆ ಬಳಿಯ ಕೃಷ್ಣಾ ನದಿಗೆ ಹಾರಿ ಆತ್ಮಹತ್ಯೆ| 

ಬಸವನಬಾಗೇವಾಡಿ(ಜು.13): ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಬಳೂತಿ ಸಮೀಪದ ಕೃಷ್ಣಾ ನದಿ ದಂಡೆಯಲ್ಲಿ ಭಾನುವಾರ ತಾಯಿ-ಮಗಳ ಶವ ಪತ್ತೆಯಾಗಿವೆ.  ವಿಜಯಪುರದ ಶಕುಂತಲಾ ಸಿದ್ದಣ್ಣ ಖೇಡ (50), ಇವರ ಮಗಳಾದ ಗಂಗಾ ಉದಯ ಹುಣಶ್ಯಾಳ (22) ಮೃತ ದುರ್ದೈ​ವಿ​ಗಳು.

ಶಕುಂತಲಾಳ ಪತಿ ವರ್ಷದ ಹಿಂದೆ ಮೃತಪಟ್ಟಿದ್ದರು. ಇದರಿಂದಾಗಿ ಅವರು ತೀವ್ರ ನೊಂದಿ​ದ್ದರು. ವಿವಾ​ಹಿತ ಮಗಳು ಗಂಗಾ ಸಹ ಮಾನಸಿಕ ಅಸ್ವಸ್ಥಳಾಗಿದ್ದಳು. ಮನನೊಂದು ಇಬ್ಬರೂ ಶನಿವಾರ ಯುಕೆಪಿ ಕ್ರಾಸ್‌ ಸಮೀಪದ ಕೊರ್ತಿ-ಕೊಲ್ಹಾರ ಸೇತುವೆ ಬಳಿಯ ಕೃಷ್ಣಾ ನದಿಗೆ ಹಾರಿದ್ದರು ಎನ್ನಲಾಗಿದೆ. 

ಪ್ರಿಯಕರನ ತೋಳ ತೆಕ್ಕೆಗೆ ಬರಲೊಪ್ಪದ ತಾಯಿ, ಬಲಿಯಾಗಿದ್ದು ಮಾತ್ರ ಪುಟ್ಟ ಮಗು!

ಭಾನುವಾರ ಬಳೂತಿ ಜಾಕ್‌ವೆಲ್‌ ಸಮೀಪ ನದಿ ತೀರದಲ್ಲಿ ಇಬ್ಬರ ಶವಗಳು ಪತ್ತೆಯಾಗಿವೆ. ಈ ಕುರಿತು ಕೊಲ್ಹಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬೆಂಗಳೂರು ವಿಜಯ್ ಗುರೂಜಿ ಗ್ಯಾಂಗ್ ಸಮೇತ ಅರೆಸ್ಟ್; ಟೆಕ್ಕಿಗೆ ಲೈಂಗಿಕ ಶಕ್ತಿ ಹೆಚ್ಚಿಸೋದಾಗಿ ₹40 ಲಕ್ಷ ವಂಚನೆ!
ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಶಿಕ್ಷಕನಿಗೆ ಪೋಷಕರಿಂದ ಧರ್ಮದೇಟು!