
ಬೆಂಗಳೂರು (ಡಿ.8) : ನಗದು ನೀಡಿದರೆ ಆನ್ಲೈನ್ನಲ್ಲಿ ಹಣ ವರ್ಗಾವಣೆ ಮಾಡುವುದಾಗಿ ನಂಬಿಸಿ ಖಾಸಗಿ ಕಂಪನಿ ನೌಕರನಿಗೆ ₹50 ಸಾವಿರ ಪಡೆದು ಕಿಡಿಗೇಡಿಯೊಬ್ಬ ವಂಚಿಸಿರುವ ಘಟನೆ ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಲಾಲ್ಬಾಗ್ ರಸ್ತೆಯ ಸುಧಾನಗರದ ನಿವಾಸಿ ಬಿ.ಚಂದ್ರೇಗೌಡ ಮೋಸ ಹೋಗಿದ್ದು, ಎರಡು ದಿನಗಳ ಹಿಂದೆ ಎಟಿಎಂಗೆ ಹಣ ಜಮೆ ಮಾಡಲು ಅವರು ತೆರಳಿದ್ದಾಗ ಈ ಕೃತ್ಯ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ಜನಪ್ರಿಯ ಧಾರವಾಹಿಗಳಲ್ಲಿ ನಟಿಸಿ ಇದೀಗ ಹೀರೋ ಆಗಲು ಹೋಗಿ ಜೈಲು ಸೇರಿದ ನಟ!
ತುರ್ತು ಕಷ್ಟದ ಹೇಳಿ ಹಣ ಲಪಾಟಿಯಿಸಿದ:
ಖಾಸಗಿ ಕಂಪನಿಯಲ್ಲಿ ನೌಕರಿಯಲ್ಲಿರುವ ಚಂದ್ರೇಗೌಡ, ಸುಧಾಮನಗರದಲ್ಲಿ ನೆಲೆಸಿದ್ದಾರೆ. ಡಿ.5ರಂದು ಶಾಂತಿನಗರದ ಖಾಸಗಿ ಬ್ಯಾಂಕ್ ಖಾತೆಗೆ ತಮ್ಮ ಕಂಪನಿ ಖಾತೆಗೆ ₹50 ಸಾವಿರ ಜಮೆ ಮಾಡಲು ಚಂದ್ರೇಗೌಡ ತೆರಳಿದ್ದರು. ಆ ವೇಳೆ ಎಟಿಎಂ ಘಟಕದ ಬಳಿ ಎದುರಾದ ಅಪರಿಚಿತ, ‘ಸರ್ ನನಗೆ ತುರ್ತಾಗಿ ₹50 ಸಾವಿರ ನಗದು ಬೇಕಿದೆ. ಆದರೆ ತಾಂತ್ರಿಕ ತೊಂದರೆಯಿಂದ ನನ್ನ ಖಾತೆಯಿಂದ ಎಟಿಎಂ ಹಣ ಪಡೆಯಲು ಸಾಧ್ಯವಾಗುತ್ತಿಲ್ಲ.
ಹಾಡಹಗಲೇ ಮನೆ ಬೀಗಮುರಿದು ಕಳ್ಳತನ ಮಾಡುತ್ತಿದ್ದ ಇಬ್ಬರು ಖದೀಮರು ಅರೆಸ್ಟ್
ನೀವು ನಗದು ನೀಡಿದರೆ ತಕ್ಷಣವೇ ನಾನು ಆನ್ಲೈನ್ನಲ್ಲಿ ಆ ಹಣ ವರ್ಗಾಯಿಸುತ್ತೇನೆ’ ಎಂದು ಕೋರಿದ್ದಾನೆ. ಈ ಮಾತು ನಂಬಿದ ಚಂದ್ರೇಗೌಡ ಅವರು, ತಮ್ಮಲ್ಲಿದ್ದ ₹50 ಸಾವಿರವನ್ನು ಕೊಟ್ಟಿದ್ದಾರೆ. ಹೀಗೆ ಹಣ ಪಡೆದ ಬಳಿಕ ಆತ ನಾಪತ್ತೆಯಾಗಿದ್ದಾನೆ. ಕೊನೆಗೆ ತಾವು ವಂಚನೆಗೆ ಒಳಗಾಗಿರುವುದು ಅರಿವಾಗಿ ಅಶೋಕನಗರ ಠಾಣೆಗೆ ತೆರಳಿ ಚಂದ್ರೇಗೌಡ ದೂರು ದಾಖಲಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ