
ಯಾದಗಿರಿ(ಮಾ.17): ಪೊಲೀಸರ ವೇಷದಲ್ಲಿ ಬಂದ ಖದೀಮರ ತಂಡವೊಂದು ಬೈಕ್ ಕಳ್ಳತನ ಮಾಡಿ ಪರಾರಿಯಾದ ಘಟನೆ ಜಿಲ್ಲೆ ಸುರಪುರ ನಗರದ ಜಲಾಲ್ ಮೋಹಲ್ಲಾ, ಮೇದಾಗಲ್ಲಿಯಲ್ಲಿ ನಿನ್ನೆ ತಡರಾತ್ರಿ (ಬುಧವಾರ) ನಡೆದಿದೆ. KA 33 U 5051 ಬೈಕ್ಅನ್ನು ಖದೀಮರು ಕದ್ದಿದ್ದಾರೆ.
ನಗರದಲ್ಲಿ ಕಳೆದ ಎರಡು ಮೂರು ತಿಂಗಳಿಂದ ಬೈಕ್ ಕಳ್ಳತನಗಳು ನಡೆಯುತ್ತಿವೆ. ಇದರಿಂದ ಸಾರ್ವಜನಿಕರು ಭಯದಲ್ಲೇ ಜೀವನ ಸಾಗಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಹೆಂಡತಿ ಜೀವ ಹಿಂಡುತಿ...ಪತ್ನಿಯ ಐಷಾರಾಮಿ ಬದುಕಿಗೆ ಬೈಕ್ ಚೋರನಾದ!
ಪೊಲೀಸರ ಮಾರುವೇಷದಲ್ಲಿ ಬಂದು ಕಳ್ಳರು ಬೈಕ್ ಎಗರಿಸುತ್ತಿದ್ದಾರೆ. ಖದೀಮರು ಬೈಕ್ ತೆಗೆದುಕೊಂಡು ಹೋಗುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ