ಚಿತ್ತಾಪುರ: ನಿಧಿ ಆಸೆಗೆ ಶಿವಲಿಂಗ ಕಿತ್ತು ಅಗೆದಿರುವ ದುಷ್ಕರ್ಮಿಗಳು!

By Kannadaprabha NewsFirst Published Jun 5, 2023, 5:40 AM IST
Highlights

ನಿಧಿ ಆಸೆಗಾಗಿ ದುಷ್ಕರ್ಮಿಗಳು ಚಿತ್ತಾಪುರ ತಾಲೂಕಿನ ನಾಲವಾರ ವಲಯದ ಸೂಗೂರ (ಎನ) ಗ್ರಾಮದ ಹೊರ ವಲಯದ ಹೊಲದಲ್ಲಿರುವ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನದಲ್ಲಿದ್ದ ಶಿವಲಿಂಗವನ್ನು ಕಿತ್ತು, ಲಿಂಗದ ಅಡಿಯಲ್ಲಿ ಅಗೆದಿದ್ದಾರೆ.

ಶಹಾಬಾದ (ಜೂ.5) : ನಿಧಿ ಆಸೆಗಾಗಿ ದುಷ್ಕರ್ಮಿಗಳು ಚಿತ್ತಾಪುರ ತಾಲೂಕಿನ ನಾಲವಾರ ವಲಯದ ಸೂಗೂರ (ಎನ) ಗ್ರಾಮದ ಹೊರ ವಲಯದ ಹೊಲದಲ್ಲಿರುವ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನದಲ್ಲಿದ್ದ ಶಿವಲಿಂಗವನ್ನು ಕಿತ್ತು, ಲಿಂಗದ ಅಡಿಯಲ್ಲಿ ಅಗೆದಿದ್ದಾರೆ.

ಗ್ರಾಮದಿಂದ ಸುಮಾರು 1ಕಿ.ಮೀ. ದೂರದಲ್ಲಿರುವ ಹೊಲದಲ್ಲಿ ಈ ದೇವಸ್ಥಾನವಿದ್ದು, ಶನಿವಾರ ಬೆಳಗೆ ಹೊಲಕ್ಕೆ ಹೋದ ರೈತರು, ಕುರಿಗಾಯಿಗಳು ಲಿಂಗ ಯಥಾಸ್ಥಳದಲ್ಲಿ ಇರುವದನ್ನು ನೋಡಿದ್ದರು ಎನ್ನಲಾಗಿದೆ. ಶನಿವಾರ ರಾತ್ರಿ ಈ ಘಟನೆ ನಡೆದಿದೆ ಎಂದು ಶಂಕಿಸಲಾಗಿದೆ.

ಕಾರಹುಣ್ಣಿಮ ನಿಮಿತ್ತ ಭಾನುವಾರ ಬೆಳಗ್ಗೆ ಲಿಂಗಕ್ಕೆ ಪೂಜೆ ಮಾಡಲು ಹೋದ ಮುದಕಪ್ಪ ಪೂಜಾರಿ​ಗೆ ಈ ಘಟನೆ ಕಂಡು ಬಂದಿದ್ದು, ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ. ಸುಮಾರು 2.5 ಅಡಿ ಎತ್ತರ ಇರುವ ಲಿಂಗವನ್ನು ಎತ್ತಿ ಪಕ್ಕಕ್ಕೆ ಇಟ್ಟು, ಅದರ ಅಡಿಯಲ್ಲಿದ್ದ ಬಂಡೆಯನ್ನು ತೆಗೆದು ನೆಲ ಅಗೆಯಲಾಗಿದೆ.

ನಿಧಿ ಆಸೆಗೆ ಪುರಾತನ ಕಾಲದ ಆಂಜನೇಯ ದೇವಾಲಯದ ಗರ್ಭಗುಡಿ ಅಗೆದ ದುಷ್ಕರ್ಮಿಗಳು!

ಈ ಹಿಂದೆ ಇದೇ ದೇವಸ್ಥಾನದ ಎದುರಿನ ಮಾನ ಕಂಭ, ದ್ವಾರದ ಬಳಿ ಅಗೆಯಲಾಗಿತ್ತು ಎನ್ನಲಾಗಿದೆ. 4-5 ವರ್ಷಗಳ ಹಿಂದೆ ಗ್ರಾಮದ ಶ್ರೀರಾಮಲಿಂಗೇಶ್ವರ ಹಾಗೂ ಈಶ್ವರ ದೇವಸ್ಥಾನದಲ್ಲಿಯೂ ಕಳ್ಳತನ ವಿಫಲ ಯತ್ನ ನಡೆಸಲಾಗಿತ್ತು. ಘಟನಾ ಸ್ಥಳಕ್ಕೆ ವಾಡಿ ಪೊಲೀಸ್‌ ಠಾಣೆ ಪೋಲಿಸರು ಭೇಟ್ಟಿನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ತನಿಖೆ ಕೈಗೊಂಡಿದ್ದಾರೆ.

ಉತ್ತರಕನ್ನಡ: ನಿಧಿ ಆಸೆಗೆ ಬಿದ್ದು ಬಾವಿ ತೋಡಿದ ಖದೀಮರು..!

click me!