
ಬೆಂಗಳೂರು(ಏ. 09) ಲಾಕ್ ಡೌನ್ ಪ್ರೇಮಿಗಳಿಗೂ ಕಡಿವಾಣ ಹಾಕಿದೆ. ಆದರೆ ಇಲ್ಲೊಂದು ಜೋಡಿ ಮದುವೆಯಾಗಿ ನೇರವಾಗಿ ಪೊಲೀಸ್ ಠಾಣೆಗೆ ಬಂದಿದೆ. ಹೌದು ರಕ್ಷಣೆ ಕೋರಿ ಬಂದಿದೆ.
ಲಾಕ್ ಡೌನ್ ಪರಿಸ್ಥಿತಿ ನಿಭಾಯಿಸುವಲ್ಲಿ ಪೊಲೀಸರು ಹೈರಾಣರಾಗಿ ಹೋಗಿದ್ದಾರೆ. ಇದೆಲ್ಲದರ ನಡುವೆ ಪ್ರೇಮಿಗಳು ರಕ್ಷಣೆ ಕೊಡಿ ಎಂದು ಪೊಲೀಸರ ಮೊರೆಗೆ ಬಂದಿದ್ದಾರೆ.
ಗಿರಿನಗರ ಠಾಣೆಗೆ ಬಂದ ಪ್ರೇಮಿಗಳು ರಕ್ಷಣೆ ಕೋರಿದ್ದಾರೆ. ಮದುವೆ ಡ್ರೆಸ್ ನಲ್ಲಿ ಠಾಣೆಗೆ ಬಂದ ಜೋಡಿ ರಕ್ಷಣೆ ಕೋರಿದ್ದಾರೆ. ಪ್ರೇಮಿಗಳಾದ ಮುರುಘ ಮತ್ತು ಮೇಘಶ್ವಿನಿ ಮದುವೆಯಾಗಿ ಠಾಣೆಗೆ ಆಗಮಿಸಿದ್ದಾರೆ. ಮನೆಯವರ ವಿರೋಧದ ನಡುವೆ ಜೋಡಿ ಮದುವೆಯಾಗಿ ಬಂದಿದ್ದಾರೆ.
ಬುಲೆಟ್ ಪ್ರಕಾಶ್ ಮಗಳ ಮದುವೆ ಜವಾಬ್ದಾರಿ ವಹಿಸಿಕೊಂಡ ದರ್ಶನ್
ದೇವಸ್ಥಾನದ ಮುಂದೆ ತಾಳಿ ಕಟ್ಟಿ ಪೊಲೀಸ್ ಠಾಣೆಗೆ ಎಂಟ್ರಿ ಕೊಟ್ಟಿದ್ದಾರೆ. ಮೇಘ ಮನೆಯವರಿಂದ ತೊಂದರೆ ಇದೆ ರಕ್ಷಣೆ ಕೊಡಿ ಎಂದು ನವಜೋಡಿ ಪೊಲೀಸರ ಮೊರೆ ಹೋಗಿದೆ. ಮಾಸ್ಕ್ ಹಾಕಿಕೊಂಡೆ ಠಾಣೆಗೆ ಬಂದಿದ್ದ ನವಜೋಡಿ ಇದೀಗ ರಕ್ಷಣೆಯಲ್ಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ