ಮಂಗಳೂರು: ಎಡಪದವಿನಲ್ಲಿ ಅಮಾನವೀಯ ಕೃತ್ಯ; ಹಸುವಿನ ಮೂತಿಗೆ ಚೂರಿ ಹಾಕಿದ ವ್ಯಾಪಾರಿ ಉಮರಬ್ಬ!

Published : Jan 11, 2026, 11:49 PM IST
Mangaluru FIR Against Trader Umar for Brutally Stabbing Cow s Mouth in Edapadavu

ಸಾರಾಂಶ

ಮಂಗಳೂರಿನ ಎಡಪದವಿನಲ್ಲಿ, ಅಯ್ಯಪ್ಪ ಪೂಜಾ ಸ್ಥಳದ ಬಳಿ ಚುರುಮುರಿ ಅಂಗಡಿ ಹಾಕಿದ್ದ ಉಮರಬ್ಬ ಎಂಬಾತ, ಆಹಾರಕ್ಕಾಗಿ ಬಂದ ಹಸುವಿನ ಮೂತಿಗೆ ಚೂರಿಯಿಂದ ತಿವಿದು ಗಾಯಗೊಳಿಸಿದ್ದಾನೆ. ಈ ಅಮಾನುಷ ಕೃತ್ಯಕ್ಕೆ ಸ್ಥಳೀಯರು ಹಾಗೂ ಅಯ್ಯಪ್ಪ ಭಕ್ತರಿಂದ ತೀವ್ರ ಆಕ್ರೋಶ .

ಮಂಗಳೂರು(ಜ.11): ನಗರದ ಹೊರವಲಯದ ಎಡಪದವಿನಲ್ಲಿ ಅಂಗಡಿ ಬಳಿ ಬಂತೆಂದು ಹಸುವಿನ ಮೇಲೆ ನಡೆದ ಅಮಾನುಷ ಕೃತ್ಯವೊಂದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಮಂಗಳೂರು ಹೊರವಲಯದ ಎಡಪದವಿನ ಪೂಪಾಡಿಕಲ್ಲು ಎಂಬಲ್ಲಿ ಅಯ್ಯಪ್ಪ ಮಾಲಾಧಾರಿಗಳು ಟೆಂಟ್ ಹಾಕಿ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಈ ಧಾರ್ಮಿಕ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಅಲ್ಲಿಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದ ಕಾರಣ, ವ್ಯಾಪಾರಕ್ಕಾಗಿ ಉಮರಬ್ಬ ಎಂಬಾತ ಚುರುಮುರಿ ಸ್ಟಾಲ್ ಹಾಕಿದ್ದ.

ತಿನ್ನಲು ಬಂದ ಹಸುವಿನ ಮೇಲೆ ಹಲ್ಲೆ!

ಪೂಜಾ ಸ್ಥಳದ ಬಳಿಯೇ ಇದ್ದ ಚುರುಮುರಿ ಸ್ಟಾಲ್ ಬಳಿಗೆ ಆಹಾರ ಹುಡುಕುತ್ತಾ ಹಸುವೊಂದು ಬಂದಿದೆ. ಸ್ಟಾಲ್ ಬಳಿ ಏನಾದರೂ ತಿನ್ನಲು ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಬಂದ ಹಸುವನ್ನು ಕಂಡು ವ್ಯಾಪಾರಿ ಉಮರಬ್ಬ ಹಸುವನ್ನು ಅಲ್ಲಿಂದ ಓಡಿಸಲು ಕ್ರೂರವಾಗಿ ವರ್ತಿಸಿದ್ದಾನೆ.

ಚೂರಿಯಿಂದ ಮೂತಿಗೆ ತಿವಿದ ಆಸಾಮಿ!

ಹಸುವನ್ನು ಓಡಿಸುವ ಭರದಲ್ಲಿ ಚೂರಿ ಹಿಡಿದು, ಹಸುವಿನ ಮೂತಿಗೆ ಚೂರಿಯಿಂದ ಬಲವಾಗಿ ತಿವಿದಿದ್ದಾನೆ. ಚೂರಿ ಏಟಿನಿಂದಾಗಿ ಹಸುವಿನ ಮೂತಿಗೆ ಗಂಭೀರ ಗಾಯವಾಗಿದ್ದು, ರಕ್ತ ಸುರಿದು ಹಸು ನರಳಾಡಿದೆ. ಈ ಘಟನೆಯನ್ನು ಕಂಡ ಸ್ಥಳೀಯರು, ಅಯ್ಯಪ್ಪ ಭಕ್ತರು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ.

ಮಾಲಾಧಾರಿಗಳಿಂದ ಹಸುವಿನ ಆರೈಕೆ

ಘಟನೆ ನಡೆದ ತಕ್ಷಣ ಸ್ಥಳದಲ್ಲಿದ್ದ ಅಯ್ಯಪ್ಪ ಮಾಲಾಧಾರಿಗಳು ಮತ್ತು ಸ್ಥಳೀಯರು ಹಸುವಿನ ರಕ್ಷಣೆಗೆ ಧಾವಿಸಿದ್ದಾರೆ. ಈ ಸಂಬಂಧ ಉಮರಬ್ಬನ ವಿರುದ್ಧ ಸ್ಥಳೀಯವಾಗಿ ತೀವ್ರ ವಿರೋಧ ವ್ಯಕ್ತವಾಗಿದ್ದು, ಬಜರಂಗದಳ ಮುಖಂಡರು ಕ್ರಮಕ್ಕೆ ಆಗ್ರಹಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾಯಚೂರು: ಟಿಪ್ಪರ್ ಡಿಕ್ಕಿಯಾಗಿ ಟ್ರಾಕ್ಟರ್ ಪಲ್ಟಿ; ಹತ್ತಿ ಮಾರಲು ಹೋಗಿದ್ದ ರೈತ ದುರ್ಮರಣ!
'ಕಪ್ಪಗಿರೋ ನೀನು ಡಾಕ್ಟರ್ ಆಗಬೇಕಾ?': ಲೆಕ್ಚರರ್ಸ್ ಕೊಂಕು ಮಾತಿಗೆ ಡೆಂಟಲ್ ಸ್ಟೂಡೆಂಟ್ ಬಲಿ, ದಾಖಲಾಯ್ತು ಎಫ್‌ಐಆರ್!