Firecrackers Explode: ಬೈಕ್‌ನಲ್ಲಿ ಒಯ್ತಿದ್ದ ಪಟಾಕಿ ಬಾಕ್ಸ್ ಸ್ಫೋಟ, ಸಿಸಿಟಿವಿಯಲ್ಲಿ ಘೋರ ದೃಶ್ಯ

Published : Nov 05, 2021, 10:34 PM ISTUpdated : Nov 05, 2021, 10:38 PM IST
Firecrackers Explode: ಬೈಕ್‌ನಲ್ಲಿ ಒಯ್ತಿದ್ದ ಪಟಾಕಿ ಬಾಕ್ಸ್ ಸ್ಫೋಟ, ಸಿಸಿಟಿವಿಯಲ್ಲಿ ಘೋರ ದೃಶ್ಯ

ಸಾರಾಂಶ

* ಬೈಕ್​ನಲ್ಲಿ ಪಟಾಕಿ ಕೊಂಡೊಯ್ಯುವಾಗ ಸ್ಫೋಟ * ಪುದುಚೆರಿಯ ವಿಲ್ಲುಪುರಂ ಜಿಲ್ಲೆಯಲ್ಲಿ ನಡೆದ ಘಟನೆ * ಸ್ಥಳದಲ್ಲೇ 7 ವರ್ಷದ ಬಾಲಕ ಮತ್ತು ತಂದೆ ಸಾವು * ಘಟನೆಯಲ್ಲಿ ಮೂವರಿಗೆ ಗಂಭೀರ ಗಾಯ

ಪುದುಚೆರಿ(ನ. 05)  ದೀಪಾವಳಿ  (Deepavali) ಸಂದರ್ಭ  ಇದಕ್ಕಿಂತ ಘೋರ ಘಟನೆ ಇನ್ನೊಂದಿಲ್ಲ.  ಬೈಕ್​ನಲ್ಲಿ ಪಟಾಕಿ (Firecrackers) ಕೊಂಡೊಯ್ಯುವಾಗ ಸ್ಫೋಟವಾಗಿದ್ದು (explode) ತಂದೆ ಮಗ ಸಾವನ್ನಪ್ಪಿದ್ದಾರೆ.

ಪುದುಚೆರಿಯ ವಿಲ್ಲುಪುರಂ ಜಿಲ್ಲೆಯಲ್ಲಿ ನಡೆದ ಘಟನೆ ನಡೆದಿದೆ. ಸ್ಥಳದಲ್ಲೇ 7 ವರ್ಷದ ಬಾಲಕ ಮತ್ತು ತಂದೆ ಸಾವು ಕಂಡಿದ್ದಾರೆ. ಘಟನೆಯಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. 

ಕಲೈನೇಸನ್ ಮತ್ತು ಅವರ ಏಳು ವರ್ಷದ ಪುತ್ರ ಪ್ರದೀಪ್ ಘಟನೆಯಲ್ಲಿ ದಾರುಣ ಸಾವು ಕಂಡಿದ್ದಾರೆ. ಬೈಕ್ ನಲ್ಲಿ ಪಟಾಕಿ ತೆಗೆದುಕೊಂಡು ಬಾಕ್ಸ್ ಇಟ್ಟುಕೊಂಡು ಮನೆ ಕಡೆ ಬರುತ್ತಿದ್ದರು.

ಸ್ಫೋಟದ ರಭಸಕ್ಕೆ ಹತ್ತಿರದಲ್ಲಿಯೇ ಇದ್ದ ವಾಹನ ಸವಾರ ಗಣೇಶ್, ಸೈಯದ್ ಅಹಮದ್, ಮತ್ತು ವಿಜಿ ಆನಂದ್ ಗಂಭೀರ ಗಾಯಗೊಂಡಿದ್ದಾರೆ.  ದೀಪಾವಳಿ ಸಂಭ್ರಮದಲ್ಲಿ ನಕಲಿ ಮದ್ಯ ಕುಡಿದು ಕೊಯಂಬತ್ತೂರಿನಲ್ಲಿ ಮೂವರು ಮೃತಪಟ್ಟಿದ್ದಾರೆ.  ಬೈಕ್​ನ ಹಿಟ್​ನಿಂದಾಗಿ ಪಟಾಕಿ ಸಿಡಿದಿರುವ ಶಂಕೆ ವ್ಯಕ್ತವಾಗಿದ್ದು ಸಿಸಿಟಿವಿಯಲ್ಲಿ ಸ್ಫೋಟದ ಭೀಕರ ದೃಶ್ಯ ಸೆರೆಯಾಗಿದೆ. 

ಪಟಾಕಿಯಿಂದ ಗಾಯಗೊಂಡರೆ ತಕ್ಷಣ ಮನೆ ಮದ್ದು

ಪಟಾಕಿ  ಸಣ್ಣ ಮಕ್ಕಳ ಕಣ್ಣುಗಳಿಗೆ ಹಾನಿ ಮಾಡುತ್ತದೆ. ಇದರ ಹುಚ್ಚಿನಿಂದ ಬದುಕನ್ನೇ ಕತ್ತೆಲೆ ದೂಡಿಕೊಂಡವರು ಇದ್ದಾರೆ. ಪಟಾಕಿ ಹೊಗೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಪ್ರಾಣಿ-ಪಕ್ಷಿಗಳಿಗೂ ಮಾರಕವಾಗಿದ್ದು ಪಟಾಕಿ ಸಿಡಿತ ನಿಯಂತ್ರಣದಲ್ಲಿ ಇರಬೇಕು ಎಂದು ಪರಿಸರ ವಾದಿ ಹೇಳುತ್ತಾರೆ.

ಪಟಾಕಿಯನ್ನು ನಿಷೇಧಿಸುವುದು ಯಾವುದೇ ಸಮುದಾಯದ ವಿರುದ್ಧವಾದ ಕ್ರಮವಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟ ಮಾಡಿತ್ತು. ಪಟಾಕಿ ನಿಷೇಧವನ್ನು  ರಾಜ್ಯ ಸರ್ಕಾರಗಳು ಜಾರಿಗೆ ತರಬೇಕು ಎಂದು ತಿಳಿಸಿತ್ತು.  ಹಸಿರು ಪಟಾಕಿಗಳಿಗೆ ಮಾತ್ರ ಅವಕಾಶ ಎಂದು ಹೇಳಿದ್ದರೂ ಬೆಂಗಳೂರಿನಲ್ಲಿ ಎರಡು ದಿನಗಳಿಂದ ಶಬ್ದ ತುಂಬಿಕೊಂಡಿದೆ.

ಪಟಾಕಿಯನ್ನೇ ಆಧರಿಸಿ ಬದುಕು ಕಟ್ಟಿಕೊಂಡವರಿಗೆ ಪರ್ಯಾವ ವ್ಯಸವ್ಥೆ ಮಾಡಿ ಆಯಾ ಸರ್ಕಾರಗಳು ಗೃಹ ಮತ್ತು ಗುಡಿ ಕೈಗಾರಿಕೆ ಮೂಲಕ ಉತ್ತೇಜನ ನೀಡಬಹುದು ಎಂಬ ಸಲಹೆಗಳು ಬಂದಿವೆ. 


 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು