
ದೆಹಲಿ(ಅ.28): ಹಾಡ ಹಗಲೇ ವ್ಯಕ್ತಿಯನ್ನು ಕೊಂದು, ಅಲ್ಲಿಯೇ ಆತನ ಫೋಟೋಗಳನ್ನು ತೆಗೆದ ಘಟನೆ ದೆಹಲಿಯಲ್ಲಿ ನಡೆದಿದೆ. ದೆಹಲಿಯ ಉತ್ತಮ ನಗರದ ನವಡ ಹೌಸಿಂಗ್ ಕಾಂಪ್ಲೆಕ್ಸ್ನ 55 ಫೀಟ್ ರಸ್ತೆಯಲ್ಲಿ ಘಟನೆ ನಡೆದಿದೆ. ಅ.22ರಂದು ಘಟನೆ ನಡೆದಿದ್ದು, ಸಿಸಿಟಿವಿಯಲ್ಲಿ ಬೆಚ್ಚಿಬೀಳಿಸೋ ದೃಶ್ಯಾವಳಿಗಳು ಸೆರೆಯಾಗಿವೆ.
17 ಸೆಕೆಂಡುಗಳ ವಿಡಿಯೋದಲ್ಲಿ ವ್ಯಕ್ತಿ ಇನ್ನೊಬ್ಬನಿಗೆ ಶೂಟ್ ಮಾಡೋದು ದಾಖಲಾಗಿದೆ. ಎರಡರಿಂದ ಮೂರು ಗುಂಡು ಹಾರಿಸಿದ ಕೊಲೆಗಾರ ತನ್ನ ಮೊಬೈಲ್ ಫೋನ್ ಹೊರತೆಗೆದು ಮೃತದೇಹದ ಹಲವು ಫೋಟೋ ತೆಗೆದಿದ್ದಾನೆ.
ಮದುವೆ, ಮತಾಂತರಕ್ಕೆ ಒತ್ತಾಯ: ಹಿಂದು ಯುವತಿಯನ್ನು ಗುಂಡಿಕ್ಕಿ ಕೊಂದ ಮುಸ್ಲಿಂ ಯುವಕ
ಆರೋಪಿ ಪವನ್ ಗೆಹ್ಲೋಟ್ ಎಂದು ಗುರುತಿಸಲಾಗಿದ್ದು, ವಿಕಾಸ್ ಮೆಹ್ತಾನನ್ನು ಕೊಂದಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಸಹೋದರನ ಸಾವಿಗಾಗಿ ರಿವೆಂಜ್ ತಗೊಂಡಿದ್ದಾಗಿಯೂ ಪವನ್ ಹೇಳಿದ್ದಾನೆ.
2019ರಲ್ಲಿ ಪವನ್ ಸಹೋದರ ಪ್ರವೀಣ್ ಕೊಲೆ ನಡೆದಿತ್ತು. ವಿಕಾಸ್ ದಲಾಲ್ ಎಂಬಾತ ಪ್ರವೀಣ್ನನ್ನು ಕೊಲೆ ಮಾಡಿದ್ದ. ಆತನೂ ಪೊಲೀಸ್ ಫೈರಿಂಗ್ನಲ್ಲಿ ಮೃತಪಟ್ಟಿದ್ದ. ಮೆಹ್ತಾನಿಂದ ತನಗೆ ತೊಂದರೆಯಾಗಬಹುದೆಂದು ಸಾಯುವ ಮುನ್ನ ಪ್ರವೀಣ್ ಹೇಳಿದ್ದಾಗಿ ಪವನ್ ಗೆಹ್ಲೋಟ್ ಹೇಳಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ