ಬೆಂಗಳೂರು: ಅಡ್ರೆಸ್ ಕೇಳುವ ನೆಪದಲ್ಲಿ ಪತ್ರಕರ್ತೆ ಎದುರೇ ಹಸ್ತಮೈಥುನ ಮಾಡ್ಕೊಂಡ

Published : Jun 30, 2020, 11:08 PM ISTUpdated : Jul 01, 2020, 01:46 PM IST
ಬೆಂಗಳೂರು: ಅಡ್ರೆಸ್ ಕೇಳುವ ನೆಪದಲ್ಲಿ ಪತ್ರಕರ್ತೆ ಎದುರೇ ಹಸ್ತಮೈಥುನ ಮಾಡ್ಕೊಂಡ

ಸಾರಾಂಶ

ಅಡ್ರೆಸ್ ಕೇಳುವ ನೆಪದಲ್ಲಿ ಮಹಿಳೆ ಹತ್ತಿರ ಬಂದ ವ್ಯಕ್ತಿ/ ಮಹಿಳೆ ಎದುರೆ ಹಸ್ತಮೈಥುನ/ ಬಾಣಸವಾಡಿಯಲ್ಲಿ ಘಟನೆ/ ಮಾಸ್ಕ್ ಹಾಕಿದ ಕಾರಣ ಮುಖ ಗುರುತಿಸಲು ಸಾಧ್ಯವಾಗಿಲ್ಲ

ಬೆಂಗಳೂರು(ಜೂ.  30)  ಮುಂಬೈ ರೈಲ್ವೆ ನಿಲ್ದಾಣದಲ್ಲಿ ಯುವಕನೊಬ್ಬ ಮಹಿಳೆ ಎದುರೆ ಹಸ್ತ ಮೈಥುನ ಮಾಡಿಕೊಂಡಿದ್ದು ದೊಡ್ಡ ಸುದ್ದಿಯಾಗಿತ್ತು. ಇದೀಗ ಬೆಂಗಳೂರಿನ ಸರದಿ.  ವ್ಯಕ್ತಿಯೊಬ್ಬ ತನ್ನ ಮುಂದೆನೆ ಹಸ್ತಮೈಥುನ ಮಾಡಿಕೊಂಡಿದ್ದಾನೆ ಎಂದು 31 ಪತ್ರಕರ್ತೆ ದೂರು ದಾಖಲಿಸಿದ್ದಾರೆ.

ಬಾಣಸವಾಡಿಯಿಂದ ಘಟನೆ ವರದಿಯಾಗಿದೆ. ಸ್ಕೂಟರ್ ನಲ್ಲಿ ಬಂದ ವ್ಯಕ್ತಿ ನನ್ನ ಬಳಿ ಅಡ್ರೆಸ್ ಕೇಳಿದ್ದಾನೆ. ಇದಾದ ಮೇಲೆ ಇದ್ದಕ್ಕಿದ್ದಂತೆ ಹಸ್ತಮೈಥುನ ಮಾಡೊಕೊಳ್ಳಲು ಶುರುಹಚ್ಚಿಕೊಂಡಿದ್ದಾನೆ ಎಂದು ಲೇಡಿ ಜರ್ನಲಿಸ್ಟ್ ದೂರು ನೀಡಿದ್ದಾರೆ.

ಡಿಫರೆಂಟಾಗಿ ಹಸ್ತಮೈಥುನ ಮಾಡಲಿಕ್ಕೆ ಹೋಗಿ ಒಳಸೇರಿದ ಕೇಬಲ್

ಕಳೆದ ಶನಿಉವಾರ ಬೆಳಗ್ಗೆ  10  ಗಂಟೆ ವೇಳೆ ಮನೆ ಗೆ ಬೇಕಾದ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಪತ್ರಕರ್ತೆ ವಾಪಸ್ ಆಗುತ್ತಿದ್ದರು.  ಈ ವೇಳೆ ಹತ್ತಿರಕ್ಕೆ ಬಂದ ವ್ಯಕ್ತಿ ಅಡ್ರೆಸ್ ಕೇಳಿದ್ದಾನೆ.  ಈ ವೇಳೆ ಆತನ ಒಂದು ಕೈ ಸೊಂಟದ ಬಳಿ ಇದ್ದುದ್ದನ್ನು ಮಹಿಳೆ ಗಮನಿಸಿದ್ದಾಳೆ.

ಅಡ್ರೆಸ್ ಹೇಳುವ ವೇಳೆ ಮಹಿಳೆ ವ್ಯಕ್ತಿಯ ಮುಖ ನೋಡುತ್ತಿದ್ದರು. ಇದೇ ವೇಳೆ ವ್ಯಕ್ತಿ ಹಸ್ತಮೈಥುನಕ್ಕೆ ಶುರು ಹಚ್ಚಿಕೊಂಡಿದ್ದಾನೆ. ಮಾಸ್ಕ್ ಹಾಕಿಕೊಂಡ ಕಾರಣ ವ್ಯಕ್ತಿಯನ್ನು ಗುರುತಿಸಲು ಸಾಧ್ಯವಾಗಿಲ್ಲ. ಹಸ್ತಮೈಥುನ ಅರಿವೆ ಬರುತ್ತಿದ್ದಂತೆ ಮಹಿಳೆ ಜೋರಾಗಿ ಕಿರುಚಿಕೊಂಡಿದ್ದಾಳೆ.  ರಾಮಮೂರ್ತಿನಗರ ಪೊಲೀಸರು ಸಿಸಿಟಿವಿ ಆಧಾರದಲ್ಲಿ ಆರೋಪಿಗೆ ಬಲೆ ಬೀಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಶಿಕ್ಷಕನಿಗೆ ಪೋಷಕರಿಂದ ಧರ್ಮದೇಟು!
ಬೆಂಗಳೂರಲ್ಲಿ ಹೊಟ್ಟೆಪಾಡಿಗೆ ಕಳ್ಳತನ ಮಾಡ್ತಿದ್ದ ಕಳ್ಳನನ್ನೇ ರಾಬರಿ ಮಾಡಿದ ಖತರ್ನಾಕ್ ಕಿತಾಪತಿಗಳು!