
ಬೆಳಗಾವಿ(ಮೇ.10): ಅಕ್ರಮ ಸಂಬಂಧ ಜೋಡಿ ಕೊಲೆಗೆ ಕಾರಣವಾದ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕೌಜಲಗಿ ಹೋಬಳಿಯ ತಪಸಿ ಗ್ರಾಮದಲ್ಲಿ ಈಚೆಗೆ ನಡೆದಿದೆ.
ತಪಸಿ ಗ್ರಾಮದ ಲಕ್ಷ್ಮೀ ಜ್ಞಾನೇಶ್ವರ ನಾಯಕ (25) ಮತ್ತು ಕೃಷ್ಣ ದ್ಯಾಮನಾಯಿಕ ನಾಯಿಕ (22)ಕೊಲೆಯಾದವರು. ಈ ಇಬ್ಬರು ವ್ಯಕ್ತಿಗಳನ್ನು ಅದೇ ಗ್ರಾಮದ ಜ್ಞಾನೇಶ್ವರ ಶಿವನಾಯಕ ನಾಯಿಕ (28) ಮತ್ತು ಇತರರು ಕೂಡಿ ಕೊಲೆಗೈದಿದ್ದಾರೆ.
ಪ್ರೀತಿಸಿ ಮದುವೆಯಾದ್ರೂ ಮತ್ತೊಬ್ಬಳ ಜೊತೆ ಅಫೇರ್ : ಅವಳ ಜೊತೆ ಸೇರಿ ಹೆಂಡ್ತಿ ಕೊಂದ
ಕೊಲೆಗೆ ಕಾರಣ:
ತಪಸಿ ಗ್ರಾಮದ ಜ್ಞಾನೇಶ್ವರ ಶಿವನಾಯಕ ನಾಯಕನ ಹೆಂಡತಿ ಲಕ್ಷ್ಮೀ ಜೊತೆ ಅದೇ ಗ್ರಾಮದ ಕೃಷ್ಣಾ ದ್ಯಾಮನಾಯಿಕ ನಾಯಿಕ ಅಕ್ರಮ ಸಂಬಂಧ ಇರಿಸಿಕೊಂಡಿದ್ದು, ಅದು ಗುರುವಾರ ಬೆಳಗಿನ ಜಾವ ಲಕ್ಷ್ಮೀಯ ಪತಿ ಜ್ಞಾನೇಶ್ವರನಿಗೆ ಪ್ರತ್ಯಕ್ಷ ಕಂಡಾಗ ಕೋಪಗೊಂಡ ಜ್ಞಾನೇಶ್ವರ ಸ್ನೇಹಿತರ ಸಹಾಯದೊಂದಿಗೆ ತಪಸಿ ಗ್ರಾಮದ ಲಚ್ಚಪ್ಪ ಲಕ್ಷ್ಮಪ್ಪ ಕುರೇರ ಅವರ ಕಬ್ಬಿನ ತೋಟದಲ್ಲಿ ಕೃಷ್ಣಾನನ್ನು ಹರಿತವಾದ ಆಯುಧದಿಂದ ಕುತ್ತಿಗೆ ಮುಂಭಾಗ ಕೊಯ್ದಿದ್ದಾರೆ.
ಅನಂತರ ಜ್ಞಾನೇಶ್ವರ ಈತನು ಮನೆಯಲ್ಲಿಯಿರುವ ಪತ್ನಿ ಲಕ್ಷ್ಮೀಯನ್ನು ಹರಿತ ಆಯುಧದಿಂದ ತಲೆ ಕಡೆದಿದ್ದಾನೆ. ಈ ಪ್ರಕರಣವು ಸಮೀಪದ ಕುಲಗೋಡ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ