
ಕೊಯಂಬತ್ತೂರು(ಆ. 07) ಈ ಪುಣ್ಯಾತ್ಮ ಸರಿಯಾಗಿ ಸಿಕ್ಕಿ ಹಾಕಿಕೊಂಡಿದ್ದಾನೆ. ಕಳ್ಳತನ ಮಾಡಲು ಬಂದಾಗ ಎಟಿಎಂ ಯಂತ್ರವೇ ಈತನನ್ನು ಹಿಡಿದುಕೊಂಡಿದೆ.
ತಮಿಳುನಾಡಿನ ನಾಮಕ್ಕಲ್ ಜಿಲ್ಲೆಯ ಅನಿಯಪುರಂನ ಘಟನೆ ನಿಜಕ್ಕೂ ವಿಚಿತ್ರ. ಗುರುವಾರದ ಈ ಪ್ರಕರಣ ವೈರಲ್ ಆಗುತ್ತಿದೆ. ಯಂತ್ರದ ಬಳಿಯೇ ಸಿಕ್ಕಿಹಾಕಿಕೊಂಡಿದ್ದ ಕಳ್ಳ ಉಪೇಂದ್ರ ರಾಯ್ (28) ನನ್ನು ಪೊಲೀಸರು ಬಂಧಿಸಿದ್ದಾರೆ. ಬಿಹಾರ ಮೂಲದ ವ್ಯಕ್ತಿ ಸ್ಥಳೀಯ ಕೋಳಿ ಫಾರಂ ನಲ್ಲಿ ಕೆಲಸ ಮಾಡುತ್ತಿದ್ದ.
ಧೂಮ್ ಚಿತ್ರ ನೋಡಿ ಲೂಟಿಗೆ ಇಳಿದಿದ್ದ ತಂಡ ಅರೆಸ್ಟ್
ಸರಿಯಾಗಿ ಮದ್ಯಪಾನ ಮಾಡಿದ್ದ ಉಪೇಂದ್ರ ಗುರುವಾರ ಮಧ್ಯರಾತ್ರಿ 12.15 ರ ಸುಮಾರಿಗೆ ಎಟಿಎಂ ಯಂತ್ರವಿದ್ದ ಜಾಗದ ಹಿಂದಿನ ಫ್ಲೈ ವುಡ್ ಗೋಡೆಯನ್ನು ಸರಿರಿ ಒಳಕ್ಕೆ ಪ್ರವೇಶ ಮಾಡುವ ಯತ್ನ ಮಾಡಿದ್ದಾನೆ. ಎಟಿಎಂ ಯಂತ್ರವನ್ನು ಹಿಂದಿನಿಂದ ಒಡೆಯಲು ಕಲ್ಲೊಂದನ್ನು ಎತ್ತಿದ್ದಾನೆ. ಈ ವೇಳೆ ಶಬ್ದಕ್ಕೆ ಅಕ್ಕಪಕ್ಕದವರು ಎದ್ದು ಬಂದಿದ್ದಾರೆ.
ಪೊಲೀಸರಿಗೆ ಮಾಹಿತಿ ನೀಡಿದ್ದು ಅಲ್ಲಿಗೆ ಬಂದು ನೋಡಿದಾಗ ಕಳ್ಳ ಮಧ್ಯೆ ಸಿಕ್ಕಿ ಒದ್ದಾಡುತ್ತಿದ್ದ. ಅಲ್ಲಿಂದ ಕಳ್ಳನನ್ನು ತಮ್ಮ ವಶಕ್ಕೆ ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ