
ಕೋಲ್ಕತ್ತಾ(ನ . 13) ಇದೊಂದು ವಿಚಿತ್ರ ಪ್ರಕರಣ. ಏಕಕಾಲಕ್ಕೆ ನಾಲ್ಕು ಜನ ಯುವತಿರೊಂದಿಗೆ (Woman) ಡೇಟಿಂಗ್ (Dating), ಚಾಟಿಂಗ್ ಮಾಡುತ್ತಿದ್ದ ಆಸಾಮಿ ಆತ್ಮಹತ್ಯೆಗೆ (suicide)ಯತ್ನಿಸಿದ್ದಾನೆ. ಡೇಟಿಂಗ್ ನಿಪುಣವಾಗಿದ್ದ ಸುಭಮೋಯ್ ಕರ್ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ನಾಲ್ವರೊಂದಿಗೆ ಜಗಳ ಮಾಡಿಕೊಂಡು ವಿಷ ಕುಡಿದಿದ್ದಾನೆ.
ಸ್ಥಲೀಯ ಮೆಡಿಕಲ್ ಸ್ಟೋರ್ ನಲ್ಲಿ ಸೇಲ್ಸ್ ಮೆನ್ ಆಗಿ ಕೆಲಸ ಮಾಡಿಕೊಂಡಿದ್ದ. ಈತನ ಜೂಟಾಟ ಗೊತ್ತಾದ ನಾಲ್ವರು ಯುವತಿಯರು ಈತನನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಲು ನಿರ್ಧಾರ ಮಾಡಿದ್ದಾರೆ.
ಕಾಳಿ ಪೂಜೆ ಮುಗಿಸಿದ ಎರಡು ದಿನದ ನಂತರ ಸುಭಮೊಯ್ ಕೆಲಸಕ್ಕೆ ಹೊರಡಲು ಸಿದ್ಧನಾಗಿದ್ದಾನೆ. ಈ ವೇಳೆ ಅಲ್ಲಿಗೆ ಬಂದ ನಾಲ್ವರು ಯುವತಿರು ಜಗಳ ತೆಗೆದಿದ್ದಾರೆ. ಇದಾದ ನಂತರ ಕೋಣೆ ಒಳಕ್ಕೆ ಹೋದ ಯುವಕ ವಿಷ ಕುಡಿದಿದ್ದಾನೆ.
ಪೊಲೀಸ್ ವಿಚಾರಣೆಗೆ ಅಂಜಿ ಕೋಲಾರದ ಕುಟುಂಬ ಸುಸೈಡ್ ಯತ್ನ
ಜಗಳದ ನಂತರ ಸುಭಮೊಯ್ ತನ್ನ ಕೋಣೆಯೊಳಗೆ ಹೋಗಿ ವಿಷ ಸೇವಿಸಿದ್ದಾನೆ. ನೆರೆಹೊರೆಯವರು ಮತಾಭಂಗ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ಚಿಕಿತ್ಸೆ ಸಾಧ್ಯವಿಲ್ಲ ಎಂದು ಅವರನ್ನು ಕೂಚ್ ಬೆಹಾರ್ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ. ಈಗ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ. ನಾಲ್ವರು ಮಹಿಳೆಯರಲ್ಲಿ ಯಾರೂ ದೂರು ದಾಖಲಿಸಿಲ್ಲ.
ಇನ್ನೊಂದು ಪ್ರಕರಣ; ಕೋಲ್ಕತ್ತಾದ ಮಾ ಮೇಲ್ಸೇತುವೆ ಮೇಲೆ ಕಾರು ನಿಲ್ಲಿಸಿ ಅಲ್ಲಿಂದ ಕೆಳಕ್ಕೆ ಹಾರಿದ ಒಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದ. ಭಾನುವಾರ ರಾತ್ರಿ 08:30 ರ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಮೃತನನ್ನು ನಂತರ ಜಂತು ದಾಸ್ ಎಂದು ಗುರುತಿಸಲಾಗಿತ್ತು.
ಕಲ್ಕತ್ತಾ ನ್ಯಾಷನಲ್ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ (CNMCH) ಸೇರಿಸಲಾಯಿತಾದರೂ ಪ್ರಯೋಜನವಾಗಲಿಲ್ಲ. ದಾಸ್ ತನ್ನ ಕಾರನ್ನು 16 ಮತ್ತು 17 ಪಿಲ್ಲರ್ಗಳ ನಡುವೆ ನಿಲ್ಲಿಸಿ ಕೆಳಕ್ಕೆ ಜಿಗಿದಿದ್ದ.
ಶಿವಮೊಗ್ಗದಲ್ಲಿ ಪಾಗಲ್ ಪ್ರೇಮಿಯೊಬ್ಬ ಡ್ರಗ್ಸ್ ಅಮಲಿನಲ್ಲಿ ಪ್ರಿಯತಮೆಯ ಕತ್ತು ಸೀಳಿದ್ದ. ಆಮೇಲೆ ತಾನು ಆತ್ಮಹತ್ಯೆಗೆ ಯತ್ನ ಮಾಡಿ ಆಸ್ಪತ್ರೆ ಸೇರಿದ್ದ. ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ