Illicit Relationship: ಮದುವೆಯಾದ್ರೂ ಮತ್ತೊಬ್ಬಳ ಜತೆ ಲವ್ವಿಡವ್ವಿ: ಪ್ರಶ್ನಿಸಿದ ಹೆಂಡ್ತಿ ಮೇಲೆ ಮನಬಂದಂತೆ ಹಲ್ಲೆ

Kannadaprabha News   | Asianet News
Published : Jan 19, 2022, 12:49 PM ISTUpdated : Jan 19, 2022, 12:52 PM IST
Illicit Relationship: ಮದುವೆಯಾದ್ರೂ ಮತ್ತೊಬ್ಬಳ ಜತೆ ಲವ್ವಿಡವ್ವಿ: ಪ್ರಶ್ನಿಸಿದ ಹೆಂಡ್ತಿ ಮೇಲೆ ಮನಬಂದಂತೆ ಹಲ್ಲೆ

ಸಾರಾಂಶ

*  ಗಂಡನ ಅನೈತಿಕ ಸಂಬಂಧದ ಬಗ್ಗೆ ಪ್ರಶ್ನೆ ಮಾಡಿದ್ದ ಪತ್ನಿ *  ಹೆಂಡ್ತಿ ಮೇಲೆ ಮೇಲೆ ಕಲ್ಲು ಎತ್ತಿ ಹಾಕುವಾಗ ಜನರನ್ನು ಕಂಡು ಪರಾರಿ *  ಪೊಲೀಸ್‌ ಆಯುಕ್ತರಿಗೂ ನ್ಯಾಯ ಕೇಳಿದ ನೊಂದ ಮಹಿಳೆ 

ಹುಬ್ಬಳ್ಳಿ(ಜ.19):  ಅನೈತಿಕ ಸಂಬಂಧದ ಬಗ್ಗೆ ಪ್ರಶ್ನಿಸಿದ್ದಕ್ಕಾಗಿ ನನ್ನ ಪತಿ ಗಿರೀಶ ಗದಿಗೆಪ್ಪಗೌಡರ ಹಾಗೂ ಅವರ ಸಂಬಂಧಿಕರು ನನ್ನ ಮೇಲೆ ಹಲ್ಲೆ(Assault) ನಡೆಸಿದ್ದಾರೆ ಎಂದು ಜಯಲಕ್ಷ್ಮೀ ಗಿರೀಶ ಗದಿಗೆಪ್ಪಗೌಡರ ಆರೋಪಿಸಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಗಿರೀಶ ಜತೆ ವಿವಾಹವಾಗಿ(Marriage) 20 ವರ್ಷ ಕಳೆಯುತ್ತಿದ್ದು, ಗೋವಾದಲ್ಲಿ(Goa) ಕ್ಯಾಸಿನೋ ವ್ಯವಹಾರದ ನಂತರದ ಬದಲಾವಣೆ ಗಮನಿಸಿ ಅವರಿಗಿದ್ದ ಅನೈತಿಕ ಸಂಬಂಧದ ಬಗ್ಗೆ ಪ್ರಶ್ನೆ ಮಾಡಿದೆ. ಅದಕ್ಕೆ ಗಿರೀಶ ಅವರು ತಮ್ಮ ಸಂಬಂಧಿಕರಾದ ಹರ್ಷವರ್ಧನ, ನೀಲಕಂಠ, ಮೈತ್ರಾಯಿಣಿಯೊಂದಿಗೆ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಆಸ್ತಿ ಪತ್ರಗಳಿಗೆ ಸಹಿ ಮಾಡುವಂತೆ ಒತ್ತಡ ಹೇರಿ ದೈಹಿಕ ಹಾಗೂ ಮಾನಸಿಕವಾಗಿ ಕಿರುಕುಳ(Harassment) ನೀಡಿದ್ದಾರೆ. ಈ ಕುರಿತು ನಾನು ಹುಬ್ಬಳ್ಳಿಯ(Hubballi) ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸ್‌ ಆಯುಕ್ತರಿಗೂ ನ್ಯಾಯ ಕೇಳಿದ್ದೇನೆ. ಆದರೆ ಇಲ್ಲಿಯವೆರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

Sexual Harassment : ಅಕ್ರಮ ಸಂಬಂಧದ ಗುಟ್ಟು ಇಟ್ಟುಕೊಂಡು ಬ್ಲಾಕ್ ಮೇಲ್, ಗ್ಯಾಂಗ್ ರೇಪ್

ಇದನ್ನೆಲ್ಲ ತಿಳಿದ ನನ್ನ ಪತಿ ನನಗೆ ವಿವಾಹ ವಿಚ್ಛೇದನ(Divorce) ನೀಡುವುದಾಗಿ ನೋಟಿಸ್‌ ನೀಡಿ ನನ್ನನ್ನು ಕುಗ್ಗಿಸಲು ಹಾಗೂ ಬೀದಿಗೆ ತಳ್ಳಲು ಪ್ರಯತ್ನ ನಡೆಸಿದ್ದಾರೆ. ಆದ್ದರಿಂದ ನನಗೆ ನ್ಯಾಯ ಸಿಗಬೇಕು. ಹಲ್ಲೆ ಮಾಡಿದವರ ವಿರುದ್ಧ ಕ್ರಮಕ್ಕೆ ಪೊಲೀಸರು ಮುಂದಾಗಬೇಕು ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಜಯಲಕ್ಷ್ಮೀ ಸಹೋದರ ಕಿರಣ ಇಟಗಿ ಇದ್ದರು.

ಮಹಿಳೆ ಮೇಲೆ ಬಿಯರ್ ಬಾಟಲ್‌ನಿಂದ ಹಲ್ಲೆ, ಇದರ ಹಿಂದೆ ಅಕ್ರಮ ಸಂಬಂಧ ಕಥೆ

ಯಾದಗಿರಿ: ಅಕ್ರಮ ಸಂಬಂಧ (Extra Marital Affair )ನಿರಾಕರಿಸಿದ್ದಕ್ಕೆ ಮಹಿಳೆಯನ್ನ ಹತ್ಯೆಗೆ ಯತ್ನಿಸಿರುವ ಘಟನೆ ಜ.15 ರಂದು ಯಾದಗಿರಿ(Yadgir) ಜಿಲ್ಲೆಯ ವಡಗೇರಾ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ನಡೆದಿತ್ತು. 
ಮಲ್ಲಮ್ಮ ಹಲ್ಲೆಗೊಳಗಾದ ಮಹಿಳೆ. ಮಲ್ಲಮ್ಮ ಎನ್ನುವ ಮಹಿಳೆಗೆ ಮೂರು ಮಕ್ಕಳು ಇದ್ದಾರೆ. ಆದರೂ ಅದೇ ಗ್ರಾಮದ ವೆಂಕಪ್ಪ ಎನ್ನುವ ಅನೈತಿಕ ಸಂಬಂಧಕ್ಕೆ ಆಹ್ವಾನಿಸಿದ್ದನು. ಆದ್ರೆ, ಮಹಿಳೆ ನಿರಾಕರಿಸಿದ್ದಳು.  ಆದರೂ ಬಿಡದ ವೆಂಕಪ್ಪ ಮಹಿಳೆ ಹೋದಲೆಲ್ಲಾ ಹಿಂದೆ-ಹಿಂದೆ ಗಂಟು ಬೀಳುತ್ತಿದ್ದ. ಈ ವಿಚಾರ ಗ್ರಾಮದ ಮುಖಂಡ ಬಳಿ ಹೋಗಿತ್ತು. ಈ ರೀತಿ ಮಾಡಬೇಡ ಎಂದು ಊರಿನ ಮುಖಂಡರು ವೆಂಕಪ್ಪನಿಗೆ ಎಚ್ಚರಿಕೆ ನೀಡಿದ್ದರು. ಇದರಿಂದ ವೆಂಕಪ್ಪ, ತನ್ನ ಮರ್ಯಾದೆ ಕಳೆದಳು ಎಂದು ಮಹಿಳೆ ಮೇಲೆ ಕೊಂಪಗೊಂಡಿದ್ದ.

ಮಕರ ಸಂಕ್ರಾಂತಿ ಹಬ್ಬದ ಹಿನ್ನೆಲೆ ಗ್ರಾಮದ ಹನುಮಾನ ಮಂದಿರ ಪ್ರದಕ್ಷಣೆ ಹಾಕುತ್ತಿದ್ದ ವೇಳೆ ವೆಂಕಪ್ಪ ಹಲ್ಲೆ (assault) ಮಾಡಿದ್ದ, ಅಲ್ಲದೇ ಮೇಲೆ ಕಲ್ಲು ಎತ್ತಿ ಹಾಕುವಾಗ ಜನರನ್ನು ಕಂಡು ಪರಾರಿಯಾಗಿದ್ದನು. ಗಂಭೀರ ಗಾಯಗೊಂಡ ಪ್ರೇಯಸಿ ಮಲ್ಲಮ್ಮಳನ್ನ ಶಹಾಪುರ ಆಸ್ಪತ್ರೆಗೆ ದಾಖಲಿಸಲಾಗಿತ್ತು. 

ಹಣದ ವಿಚಾರಕ್ಕೆ ಜಗಳ

ಹೌದು....ಮೇಲಿನಂದು ವಿಚಾರವಾದರೆ, ಈ ಇಬ್ಬರ ನಡುವೆ ಮತ್ತೊಂದು ವಿಚಾರ ಇದೆ ಎಂದು ಸುದ್ದಿಯಾಗಿದೆ. ಮಲ್ಲಮ್ಮ ಹಾಗೂ ವೆಂಕಪ್ಪ ನಡುವೆ ಈಗಾಗಲೇ ಅಕ್ರಮ ಸಂಬಂಧ ಇತ್ತು. ಹಣದ ವಿಚಾರಕ್ಕೆ ಈ ಜಗಳ ನಡೆದಿದೆ ಎನ್ನಲಾಗುತ್ತಿದೆ.

Crime News: ಮಹಿಳೆ ಜತೆ ಜೆಡಿಎಸ್ ಮುಖಂಡ ಸರಸ ಸಲ್ಲಾಪ, ಒಂದೇ ಕೋಣೆಯಲ್ಲಿ ಎರಡೂ ಹೆಣ

ಬೆಂಗಳೂರಲ್ಲಿದ್ದ ಮಲ್ಲಮ್ಮ, ಎಳ್ಳು ಅಮವಾಸ್ಯೆದಂದು ಕುಟುಂಬಸ್ಥರೊಂದಿಗೆ ಊರಿಗೆ ಬಂದಿದ್ದಳು. ಆ ವೇಳೆ ಇಬ್ಬರ ನಡುವೆ ಹಣಕ್ಕೆ ಜಗಳವಾಗಿದೆ. ಹಣ ನೀಡದಕ್ಕೆ ಹಾಗೂ ಮೂರು ಮಕ್ಕಳಿವೆ ಎಂದು ಕಾರಣ ಹೇಳಿ ನಮ್ಮಿಬ್ಬರ ಸಂಬಂಧ ಇಲ್ಲಿಗೆ ಬಿಟ್ಟು ಬಿಡೋಣ ಎಂದಿದ್ದಾಳಂತೆ. ಹೀಗಾಗಿ ವೆಂಕಪ್ಪ ಕೋಪಗೊಂಡು ಕೊಲೆಗೆ ಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ.

ಲೀವಿಂಗ್ ರಿಲೇಷನ್‌ಶಿಪ್​ನಲ್ಲಿದ್ದ ಪ್ರಿಯತಮೆ ಕೊಂದ ಆರೋಪಿ ಅರೆಸ್ಟ್

ಬೆಂಗಳೂರು: ಲೀವಿಂಗ್ ರಿಲೇಷನ್‌ಶಿಪ್ನಲ್ಲಿದ್ದ ಪ್ರಿಯತಮೆ ಮೇಲೆ ಅನೈತಿಕ ಸಂಬಂಧ ಇದೆ ಎಂಬ ಅನುಮಾನದಿಂದ ಹಲ್ಲೆ ನಡೆಸಿ ಕೊಲೆ ಮಾಡಿದ ಘಟನೆ ನಡೆದಿದೆ. ಮಂಜುಳಾ ಕೊಲೆಯಾದವರು. ಸದ್ಯ ಘಟನೆ ಸಂಬಂಧ ಆರೋಪಿ ಮಂಜುನಾಥ್ನನ್ನು ಪೊಲೀಸರು ಬಂಧಿಸಿದ್ದಾರೆ.

ಮೂರು ದಿನಗಳ ಹಿಂದೆ ಕೋಣನಕುಂಟೆ ವ್ಯಾಪ್ತಿಯಲ್ಲಿ ಕೊಲೆ ನಡೆದಿತ್ತು. ಕೋಣನಕುಂಟೆಯ ಬೀರೇಶ್ವರ ನಗರದಲ್ಲಿ ಗಂಡನಿಲ್ಲದ ಮಂಜುಳಾ(35) ಜೊತೆ ಮಂಜುನಾಥ್ ಲೀವಿಂಗ್ ರಿಲೇಷನ್‌ಶಿಪ್ನಲ್ಲಿದ್ದ. ಮಂಜುಳಾಗೆ ಮತ್ತೊಬ್ಬನ ಜೊತೆ ಅನೈತಿಕ ಸಂಬಂಧವಿರೋದಾಗಿ ಅನುಮಾನಿಸಿ ಆಕೆಯನ್ನು ಕೊಲೆ ಮಾಡಿ ಆಸ್ಪತ್ರೆಗೆ ದಾಖಲಿಸುವ ನಾಟಕವಾಡಿದ್ದ. ಸದ್ಯ ಕೋಣನಕುಂಟೆ ಠಾಣೆ ಪೊಲೀಸರು ಆರೋಪಿ‌ ಮಂಜುನಾಥ್ನನ್ನು ಬಂಧಿಸಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು